ಸ್ಕೂಟಿಯಲ್ಲಿ ಹೋಗುತ್ತಿದ್ದ ಮಾಡೆಲ್ ಳ ಸ್ಕರ್ಟ್ ಎಳೆದ ಕಾಮುಕರು!
Team Udayavani, Apr 23, 2018, 6:24 PM IST
ಇಂದೋರ್:ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗಲೇ ಇಬ್ಬರು ಕಾಮುಕರು ಸಾರ್ವಜನಿಕವಾಗಿ ಮಧ್ಯಪ್ರದೇಶ ಮೂಲದ ಮಾಡೆಲ್ ವೊಬ್ಬಳ ಸ್ಕರ್ಟ್ ಎಳೆಯಲು ಪ್ರಯತ್ನಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಆಕೆ ಕೆಳಗೆ ಬಿದ್ದ ಘಟನೆ ನಡೆದಿದೆ.
ಈ ಘಟನೆ ನಡೆದಿದ್ದು ಭಾನುವಾರ ಇಂಧೋರ್ ನ ಜನನಿಬಿಢ ರಸ್ತೆಯಲ್ಲಿ ಮಾಡೆಲ್ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ದುಷ್ಕರ್ಮಿಗಳು ಸಮೀಪಕ್ಕೆ ಬಂದು ಆಕೆಯ ಸ್ಕರ್ಟ್ ಅನ್ನು ಎಳೆಯಲು ಪ್ರಯತ್ನಿಸಿದ್ದರು. ಆಗ ಆಕೆ ಸ್ಕೂಟಿಯನ್ನು ನಿಲ್ಲಿಸಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗದೆ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಹೋಗಿ ಬಿದ್ದಿರುವುದಾಗಿ ವರದಿ ತಿಳಿಸಿದೆ.
ಕೆಳಗೆ ಬಿದ್ದಾಕೆಯ ನೆರವಿಗೆ ಯಾರೂ ಬರಲಿಲ್ಲ ಎಂದು ಆಕೆ ದೂರಿದ್ದು, ಅದರಲ್ಲಿ ಒಬ್ಬರು ಬಂದು ನಿನ್ನ ಸ್ಕರ್ಟ್ ನಿಂದಾಗಿಯೇ ಹೀಗಾಗಿದ್ದು ಎಂದು ದೂಷಿಸಿರುವುದಾಗಿ ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಇಬ್ಬರು ಏಕಾಏಕಿ ಬೈಕ್ ನಲ್ಲಿ ಸಮೀಪಕ್ಕೆ ಬಂದು ಸ್ಕರ್ಟ್ ಎಳೆಯಲು ಪ್ರಯತ್ನಿಸಿ, ನೋಡುವಾ ಸ್ಕರ್ಟ್ ಒಳಗೆ ಏನಿದೆ ಎಂದು ಪ್ರಶ್ನಿಸಿರುವುದಾಗಿ ಆಕೆ ತಿಳಿಸಿದ್ದಾರೆ. ಇದೆಲ್ಲವೂ ಕೆಲವು ನಿಮಿಷಗಳಲ್ಲಿ ನಡೆದು ಹೋಗಿದ್ದು, ನಾನು ಕೆಳಗೆ ಬಿದ್ದಿದ್ದೆ. ಆದರೆ ಯಾರೂ ತಡೆಯಲು ಬಂದಿಲ್ಲ ಎಂದು ಆರೋಪಿಸಿದ್ದಾರೆ. ಈ ಘಟನೆಯಿಂದ ನನಗೆ ಮಾತುಗಳೇ ಇಲ್ಲದಂತಾಗಿತ್ತು ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ತಾನು ಮತ್ತೆ ಆ ಸ್ಥಳಕ್ಕೆ ಬಂದು ಪ್ರದೇಶದಲ್ಲಿ ಸಿಸಿಟಿವಿ ಇದೆಯಾ ಎಂದು ಪರೀಕ್ಷಿಸಿದ್ದು, ಅಲ್ಲಿ ಯಾವುದೇ ಸಿಸಿಟಿವಿ ಇಲ್ಲ, ಹೀಗಾಗಿ ಆ ಕಾಮುಕರ ಗುರುತು ಹಿಡಿಯೋದು ಕಷ್ಟ. ಅವರು ಮುಕ್ತವಾಗಿ ಓಡಾಡಿಕೊಂಡಿರುತ್ತಾರೆ. ನಾನು ದೂರು ಕೊಡುತ್ತೇನೆ. ಆದರೆ ಆ ಕಾಮುಕರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆಯೇ ಎಂಬುದು ಪ್ರಶ್ನೆಯಾಗಿದೆ ಎಂದು ಟ್ವೀಟರ್ ನಲ್ಲಿ ಆಕೆ ಬರೆದುಕೊಂಡಿದ್ದಾರೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ