ಶಾಂತಿಯ ಇತಿಹಾಸ ಬರೆದ ಕೊರಿಯಾ


Team Udayavani, Apr 28, 2018, 6:00 AM IST

19.jpg

ಗೊಯಾಂಗ್‌ (ದಕ್ಷಿಣ ಕೊರಿಯಾ): ಸದಾ ಕಾಲ ಯುದ್ಧ, ದ್ವೇಷ, ಸಂಘರ್ಷ, ಬೆದರಿಕೆಗಳನ್ನೇ ಕಂಡಿದ್ದ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಶುಕ್ರವಾರ ಶಾಂತಿಯ ಬೆಳಕೊಂದು ಮೂಡಿದೆ. ಎರಡೂ ದೇಶಗಳ ನಾಯಕರು ನಡೆಸಿದ ಐತಿಹಾಸಿಕ ಮಾತುಕತೆ ಫ‌ಲಪ್ರದವಾಗಿದ್ದು, ಕೊರಿಯಾ ಭೂಪ್ರದೇಶವನ್ನು ಅಣ್ವಸ್ತ್ರರಹಿತ ಸ್ಥಳವನ್ನಾಗಿ ಪರಿವರ್ತಿಸುತ್ತೇವೆ ಹಾಗೂ ಅಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ನೋಡಿಕೊಳ್ಳುತ್ತೇವೆ ಎಂದು ಉಭಯ ನಾಯಕರು ಶಪಥ ಮಾಡಿದ್ದಾರೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ನಿಶ್ಶಸ್ತ್ರೀಕರಣ ಸ್ಥಳ (ಮಿಲಿಟರಿ ಡಿಮಾರ್ಕೇಷನ್‌ ಲೈನ್‌) ಪಾನ್‌ಮುನ್‌ಜಾಮ್‌ನಲ್ಲಿ 2007ರ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ-ಇನ್‌ ಭೇಟಿಯಾಗಿದ್ದಾರೆ. ಎರಡೂ ರಾಷ್ಟ್ರಗಳ ನಡುವೆ ಇನ್ನು ಯುದ್ಧ ನಡೆಯುವುದಿಲ್ಲ. ಎಲ್ಲಾ ಪರಮಾಣು ಶಸ್ತ್ರಗಳನ್ನು ನಾಶಗೊಳಿಸಿ ಒಟ್ಟೂ ಕೊರಿಯಾ ಭೂಪ್ರದೇಶವನ್ನು ಅಣ್ವಸ್ತ್ರರಹಿತ ಸ್ಥಳವನ್ನಾಗಿ ಮಾಡುತ್ತೇವೆ ಎಂದು ಘೋಷಣೆಯನ್ನೂ ಮಾಡಿದ್ದಾರೆ. 1953ರಲ್ಲಿ  ಎರಡು ದೇಶಗಳ ನಡುವೆ ಯುದ್ಧ ಮುಕ್ತಾಯವಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ನಾಯಕ ಎಂಬ ಹೆಗ್ಗಳಿಕೆಗೂ ಉ.ಕೊರಿಯಾ ಅಧ್ಯಕ್ಷ ಕಿಮ್‌ ಪಾತ್ರರಾಗಿದ್ದಾರೆ. 

ಭಾವುಕನಾದೆ: ಪಾನ್‌ಮುನ್‌ಜಾಮ್‌ ಘೋಷಣೆಗೆ ಸಹಿ ಹಾಕಿದ ಬಳಿಕ ಮಾತನಾಡಿದ ಕಿಮ್‌, ದಕ್ಷಿಣ ಕೊರಿಯಾ ಪ್ರದೇಶಕ್ಕೆ ಕಾಲಿರಿಸುತ್ತಿದ್ದಂತೆಯೇ ಭಾವುಕನಾದೆ ಎಂದು ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಬಾಂಧವ್ಯದ ಹೊಸ ಅಧ್ಯಾಯ ಆರಂಭಿಸಲು ಬಂದಿದ್ದೇನೆ. ಶುಕ್ರವಾರ ಕೈಗೊಂಡ ಮಹತ್ವದ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಜನರು ಯುದ್ಧದ ಭೀತಿಯಿಲ್ಲದೆ ಶಾಂತಿಯಿಂದ ಇರಲು ಅವಕಾಶ ಮಾಡಿಕೊಡಲಿದೆ. ಕೊರಿಯಾ ಪರ್ಯಾಯ ದ್ವೀಪ ಅಭಿವೃದ್ಧಿ ಸಾಧಿಸಲು ನೆರವಾಗಲಿದೆ’ ಎಂದು ಹೇಳಿದ್ದಾರೆ.

ಆಲಿಂಗಿಸಿಕೊಂಡ ಕಿಮ್‌-ಮೂನ್‌: ಐತಿಹಾಸಿಕ ಜಂಟಿ ಹೇಳಿಕೆಗೆ ಸಹಿ ಹಾಕಿದ ಬಳಿಕ ಇಬ್ಬರು ನಾಯಕರು ಒಬ್ಬರೊನ್ನೊಬ್ಬರು ಆಲಿಂಗಿಸಿಕೊಂಡರು. ಜತೆಗೆ “ಹಿಂದಿನ ಯಾವುದೇ ಅನಪೇಕ್ಷಿತ ಘಟನೆಗಳು ಮರುಕಳಿಸಬಾರದು’ ಎಂದು ವಾಗ್ಧಾನ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಉತ್ತರ ಕೊರಿಯಾಕ್ಕೆ ಬನ್ನಿ ಎಂದು ಮೂನ್‌ಗೆ ಕಿಮ್‌ ಆಹ್ವಾನವಿತ್ತರು. ಅದಕ್ಕೆ ಉತ್ತರಿಸಿದ ಅವರು ಈ ವರ್ಷದಲ್ಲಿಯೇ ಬರುವೆ ಎಂದರು. ಶುಕ್ರವಾರ ಎರಡು ಅವಧಿಗಳಲ್ಲಿ ಐತಿಹಾಸಿಕ ಮಾತುಕತೆಗಳು ನಡೆದವು. ಮೊದಲ ಅವಧಿಯಲ್ಲಿ ಒಂದು ಗಂಟೆ ನಲವತ್ತು ನಿಮಿಷಗಳ ಕಾಲ ಮಾತುಕತೆ ನಡೆದವು. 

ಮುನ್ನುಡಿ: ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಭೇಟಿ ಮೊದಲೇ ಈ ಐತಿಹಾಸಿಕ ಭೇಟಿ ನಡೆದಿದೆ. ಶುಕ್ರವಾರದ ಮಾತುಕತೆಯನ್ನು ಟ್ರಂಪ್‌ ಕೂಡ ಸ್ವಾಗತಿಸಿದ್ದಾರೆ.

ಚೀನಾದ ಅಭಿನಂದನೆ: ಎರಡೂ ದೇಶಗಳ ಅಧ್ಯಕ್ಷರು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಉತ್ತರ ಕೊರಿಯಾದ ಪರಮಾಪ್ತ ದೇಶ ಚೀನಾ ಅಭಿನಂದನೆ ಸಲ್ಲಿಸಿದೆ. ಎರಡೂ ಪ್ರದೇಶಗಳ ಸಮಾನ ಹಿತಾಸಕ್ತಿ ಇದುವೇ ಆಗಿದೆ. ಅಂತಾರಾಷ್ಟ್ರೀಯ ಸಮುದಾಯವೂ ಈ ಭೇಟಿಯನ್ನೇ ಬಯಸಿತ್ತು ಎಂದಿದೆ.

ಎರಡು ಮಾತುಕತೆಗಳು: 2000, 2007ರಲ್ಲಿ ಎರಡು ಬಾರಿ ಪಾಂಗ್‌ಯಾಂಗ್‌ನಲ್ಲಿ ಕೊರಿಯಾಗಳ ನಡುವೆ ಮಾತುಕತೆ ನಡೆದಿದ್ದವು. ಆದರೂ, ಅವುಗಳು ಯಾವುದೇ ಫ‌ಲ ಬೀರಿರಲಿಲ್ಲ.

ಪೈನ್‌ ಸಸಿಗೆ ಎರಡೂ ದೇಶಗಳ ಮಣ್ಣು, ನೀರು
ಐತಿಹಾಸಿಕ ಭೇಟಿಯ ನೆನಪಿಗಾಗಿ ಕಿಮ್‌ ಮತ್ತು ಮೂನ್‌ ಎರಡೂ ದೇಶಗಳ ಮಣ್ಣು  ಸೇರಿಸಿ ಪನ್‌ಮುನ್‌ಜಾಮ್‌ನಲ್ಲಿ ಪೈನ್‌ ಸಸಿಯನ್ನು ನೆಟ್ಟರು. ಅದಕ್ಕೆ ಎರಡೂ ದೇಶಗಳಿಂದ ತಂದಿದ್ದ ನೀರನ್ನು ಎರೆಯ ಲಾಯಿತು. ಜತೆಗೆ “ಶಾಂತಿ ಮತ್ತು ಅಭಿವೃದ್ಧಿಯನ್ನು ಇಲ್ಲಿ ನೆಡಲಾಗಿದೆ’ ಎಂಬ ಫ‌ಲಕವನ್ನೂ ಅನಾವರಣ ಮಾಡಲಾಯಿತು.

ಬರುವುದರಲ್ಲಿ ತೊಂದರೆಯಾಯಿತೇ?
ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಆಗಮನಕ್ಕೆ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ- ಇನ್‌ ಕಾಯುತ್ತಿದ್ದರು. ಉತ್ತರ ಕೊರಿಯಾ ಗಡಿ ಪ್ರದೇಶದಿಂದ ಆಗಮಿಸು ತ್ತಿದ್ದಂತೆ ಮೊದಲು ಮಾತನಾಡಿದ್ದು ಕಿಮ್‌. ಅವರ ಸಂಭಾಷಣೆ ಹೀಗಿತ್ತು:

ಕಿಮ್‌: ನಿಮ್ಮನ್ನು ಭೇಟಿಯಾಗುತ್ತಿರುವುದು ತುಂಬ ಸಂತೋಷ ತಂದಿದೆ. 
ಮೂನ್‌: ನಿಮಗೆ ಬರುವುದರಲ್ಲಿ ಏನಾದರೂ ತೊಂದರೆಯಾಯಿತೇ?
ಕಿಮ್‌: ಹಾಗೇನೂ ಇಲ್ಲ.
ಮೂನ್‌: ನಿಮ್ಮನ್ನು ಭೇಟಿ ಮಾಡಿದ್ದು ನನಗೂ ಸಂತೋಷ ತಂದಿದೆ. 
ಕಿಮ್‌: ಪನ್‌ಮುನ್‌ಜಾಮ್‌ನ ನಿಶ್ಶಸ್ತ್ರ ಪ್ರದೇಶಕ್ಕೆ ನಿಮ್ಮ ರಾಜಧಾನಿಯಿಂದ ಇಷ್ಟು ದೂರಕ್ಕೆ ಬಂದು ನನ್ನನ್ನು ಸ್ವಾಗತಿಸಿದ್ದೀರಿ. ಮೈ ರೋಮಾಂಚನವಾಗುವ ಹಾಗೂ ಐತಿಹಾಸಿಕ ಕ್ಷಣಗಳನ್ನು ನೀವು ನಿರ್ಮಿಸಿದ್ದೀರಿ. 
ಮೂನ್‌: ನಮ್ಮಲ್ಲಿಗೆ ಬರಬೇಕು ಎಂದು ನೀವು ಧೈರ್ಯವಾಗಿ ಕೈಗೊಂಡ ನಿರ್ಧಾರವೇ ನನ್ನನ್ನು ಇಲ್ಲಿಯ ವರೆಗೆ ಬರುವಂತೆ ಮಾಡಿತು.

ಜಂಟಿ ಹೇಳಿಕೆ ಮುಖ್ಯಾಂಶಗಳು
ಎರಡು ದೇಶಗಳ ನಡುವಿನ ಹಗೆತನವನ್ನು ಕೊನೆಗಾಣಿಸುವುದು 
ಪರಸ್ಪರ ಪ್ರಚೋದನಾತ್ಮಕ ಪ್ರಸಾರಗಳನ್ನು ನಿಲ್ಲಿಸಿ ನಿಶ್ಶಸ್ತ್ರ ಪ್ರದೇಶವನ್ನು ಶಾಂತಿಯುತ ಪ್ರದೇಶವನ್ನಾಗಿಸುವುದು
ಶಸ್ತ್ರಾಸ್ತ್ರ ಸಹಿತ ಸೇನೆ ಜಮಾವಣೆ ಮೂಲಕ ಉದ್ವಿಗ್ನ ಸ್ಥಿತಿ ಉಂಟಾಗುವುದರ ಮೇಲೆ ತಡೆ
ಅಮೆರಿಕ, ಚೀನಾವನ್ನು ಒಳಗೊಂಡ ಚತುಷ್ಪ³ಕ್ಷೀಯ ಮಾತುಕತೆ
ದಶಕದ ಹಿಂದೆ ಯುದ್ಧ ನಡೆಯುವುದಕ್ಕೆ ಮುನ್ನ ದೇಶ ತೊರೆದಿದ್ದ ಕುಟುಂಬಗಳ ಮರು ಸೇರ್ಪಡೆ
ಗಡಿ ಗುಂಟ ಅತ್ಯಾಧುನಿಕ ರೀತಿಯಲ್ಲಿ ರೈಲು, ರಸ್ತೆ ಸಂಪ ರ್ಕಗಳ ಮರು ನಿರ್ಮಾಣ.

ಮುಂದಿನ ಏಷ್ಯನ್‌ ಗೇಮ್ಸ್‌ ಸಹಿತ ವಿಶ್ವದಲ್ಲಿ ನಡೆಯವಿರುವ ಕ್ರೀಡಾ ಕೂಟಗಳಲ್ಲಿ ಜಂಟಿಯಾಗಿ ಭಾಗವಹಿಸುವಿಕೆ.

ಹಲವು ವರ್ಷಗಳ ಕಾಲ ಕ್ಷಿಪಣಿ ಪ್ರಯೋಗ, ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರು ಭೇಟಿಯಾಗುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ.
ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ಟಾಪ್ ನ್ಯೂಸ್

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.