ಶ್ರೀನಗರ ಹೃದಯ ಭಾಗದಲ್ಲಿ ಎನ್ಕೌಂಟರ್: ಓರ್ವ ಉಗ್ರನ ಹತ್ಯೆ
Team Udayavani, May 5, 2018, 10:51 AM IST
ಶ್ರೀನಗರ : ಶ್ರೀನಗರದ ಹೃದಯ ಭಾಗದಲ್ಲಿರುವ ಛತ್ತಬಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಹತನಾಗಿರುವುದಾಗಿ ವರದಿಯಾಗಿದೆ.
ಕೆಲವು ಉಗ್ರರು ಛತ್ತಬಾಲ್ ಪ್ರದೇಶದ ಮನೆಯೊಂದರಲ್ಲಿ ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಸುತ್ತುವರಿದು ಶೋಧ ನಡೆಸುವ ಕಾರ್ಯಾಚರಣೆ ಆರಂಭಿಸಿದಾಗ ಉಗ್ರರು ಗುಂಡಿನ ಕಾಳಗ ನಡೆಸಿದರು. ಈ ಗುಂಡಿನ ಕಾಳಗದಲ್ಲಿ ಓರ್ವ ಸಿಆರ್ಪಿಎಫ್ ಯೋಧ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಇಂದು ಶನಿವಾರ ಬೆಳಗ್ಗೆ ಉಗ್ರರ ವಿರುದ್ದ ಈ ಕಾರ್ಯಾಚರಣೆ ಆರಂಭಗೊಂಡಿತ್ತು. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ ಗುಂಡಿನ ಕಾಳಗ ಈಗಲೂ ಮುಂದುವರಿದಿದೆ.
ಛತ್ತಬಾಲ್ ಪ್ರದೇಶದ ಗಾಸಿ ಮೊಹಲ್ಲಾ ದಲ್ಲಿ ಭದ್ರತಾ ಪಡೆಗಳು ಉಗ್ರರು ಅಡಗಿಕೊಂಡಿರುವ ಶಂಕಿತ ತಾಣವನ್ನು ಎಲ್ಲ ಕಡೆಗಳಿಂದಲೂ ಸುತ್ತುವರಿದಿರುವುದಾಗಿ ವರದಿಯಾಗಿದೆ.