“ಒಂದು ಓಟು ಕೂಡ ಹಾಳು ಮಾಡೋದಿಲ್ಲ, ನಾವು ರೆಡಿ’​​​​​​​


Team Udayavani, May 6, 2018, 6:25 AM IST

0505udsb2.jpg

ಉಡುಪಿ: ಇಲ್ಲಿನ ರಾಜಕೀಯ ಆಡುಂಬೊಲ ಎಂಬಂಥ ಪ್ರದೇಶಗಳಲ್ಲಿ ಒಂದಾಗಿರುವ ಉಪ್ಪೂರಿನ ಮತದಾರರು ಮತದಾನದ ದಿನಕ್ಕಾಗಿ ಕಾಯುತ್ತಿದ್ದಾರೆ ಎಂಬುದು ಉಪ್ಪೂರು ತೆಂಕಬೆಟ್ಟಿನ ಹಿರಿಯ ವ್ಯಾಪಾರಿ ಕೃಷ್ಣ ನಾಯಕ್‌ ಅವರ ಮಾತುಗಳಿಂದಲೇ ವೇದ್ಯವಾಯಿತು. 

“ಇಲ್ಲಿಯವರು ಹಿಂದಿನಿಂದಲೂ ಹಾಗೆಯೇ. ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುತ್ತಾರೆ. ಬೆಳಗ್ಗೆ 7 ಗಂಟೆಗೇ ರೆಡಿಯಾಗ್ತಾರೆ. ಕೂಲಿಗೆ ಹೋಗುವವರು ಕೂಡ ಓಟ್‌ ಹಾಕಿಯೇ ಹೋಗುತ್ತಾರೆ. ಪರವೂರಿನಲ್ಲಿರುವವರು ಮಾತ್ರ ಓಟು ಹಾಕದಿರಬಹುದಷ್ಟೆ’ ಎನ್ನುತ್ತಾರೆ ಅವರು. ಈ ಭಾಗದಲ್ಲಿ ಕೃಷಿಕರು ಇದ್ದಾರೆ. ಗೇರು ಬೀಜ ಫ್ಯಾಕ್ಟರಿಯೂ ಇದೆ. ನಗರಕ್ಕೆ ಕೆಲಸಕ್ಕೆ ಹೋಗುವ ಯುವಕರು ಕೂಡ ಅನೇಕರಿದ್ದಾರೆ. ಉಪ್ಪೂರು ಪರಿಸರ ರಾಜಕೀಯವಾಗಿ ಹೆಚ್ಚು ಜಾಗೃತವಾಗಿರುವುದು ಸ್ಪಷ್ಟವಾಗುತ್ತದೆ.

ಓಟು ಕೇಳಲು ಯಾರೂ ಬಂದಿಲ್ಲ
ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಲಕ್ಷ್ಮೀನಗರ ನಾರ್ನಾಡ್‌ನ‌ ಪದ್ಮಾ ಅವರಿಗೂ ಮತದಾನದ ಉತ್ಸಾಹವಿದೆ. “ನಾವು ಮನೆಯಲ್ಲಿ ನಾಲ್ಕು ಮಂದಿ ಇದ್ದೇವೆ. ಎಲ್ಲರೂ ಓಟು ಹಾಕುತ್ತೇವೆ. ಬೇಗ ಓಟು ಹಾಕಿ ಅನಂತರ ಕೆಲಸಕ್ಕೆ ಹೋಗುತ್ತೇನೆ. ನಮ್ಮ ಮನೆಗೆ ಇದುವರೆಗೆ ಓಟು ಕೇಳಲು ಯಾರೂ ಬಂದಿಲ್ಲ’ ಎನ್ನುತ್ತಾರೆ ಪದ್ಮಾ.

ಚುನಾವಣೆಗೆ ಸಿದ್ಧ
ನಮ್ಮೂರಿನಲ್ಲಿ ಅಂತಹ ಸಮಸ್ಯೆ ಇಲ್ಲ. ಈ ಬಾರಿ ಕುಡಿಯುವ ನೀರು ಕೂಡ ಪಂಚಾಯತ್‌ನಿಂದ ದೊರೆಯುತ್ತಿದೆ. ನಮ್ಮೂರಿನ ಜನ ಚುನಾವಣೆಗೆ ಸಿದ್ಧರಾಗಿದ್ದಾರೆ ಎನ್ನುತ್ತಾರೆ ಗುತ್ತಿಗೆದಾರರೊಂದಿಗೆ ಕೆಲಸ ಮಾಡುತ್ತಿರುವ ಹಾವಂಜೆಯ ಸುರೇಶ್‌ ಅವರು.

ಇವರದ್ದು ಸದ್ದಿಲ್ಲದ ಜಾಗೃತಿ
ಕೊಳಲಗಿರಿ ಪರಿಸರದಲ್ಲಿ 1994ರಿಂದಲೂ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ರೇಖಾ ಜಿ. ಮರಾಠೆಯವರು ಮತದಾರರನ್ನು ಜಾಗೃತಿಗೊಳಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಸಮೀಕ್ಷೆಯಲ್ಲಿ ತೊಡಗಿದ್ದ ಉದಯವಾಣಿ ಪ್ರತಿನಿಧಿಗಳಿಗೆ ಎದುರಾದ ರೇಖಾ ಆಗ ತಾನೇ ಓರ್ವ ವಿಶಿಷ್ಟಚೇತನ, ಕಾರ್ತಿಬೈಲಿನ ಅನಿಲ್‌ ಡಿ’ಸೋಜಾ ಎಂಬವರ ಮನೆಗೆ ತೆರಳಿ ಮತ ಹಾಕುವಂತೆ ಕೋರಿ ವಾಪಸಾಗಿದ್ದರು. “ನಾನು ಅನಿಲ್‌ ಅವರನ್ನು ಮಾತನಾಡಿಸಿದೆ. ಅವರಿಗೆ ಮತಕೇಂದ್ರಕ್ಕೆ ಹೋಗಲು ಪಂಚಾಯತ್‌ ವ್ಯವಸ್ಥೆ ಕೂಡ ಕಲ್ಪಿಸುತ್ತದೆ ಎಂದು ತಿಳಿಸಿದೆ. ಅದಕ್ಕೆ ಖುಷಿಪಟ್ಟು ನನ್ನನ್ನು ಕರೆದುಕೊಂಡು ಹೋಗುವುದಿದ್ದರೆ ಹೋಗುತ್ತೇನೆ ಎಂದ. ನಾನು ಯಾರಿಗೂ ಇಂತಹದೇ ಪಕ್ಷಕ್ಕೆ ಮತ ಹಾಕಿ ಎಂದು ಹೇಳುವುದಿಲ್ಲ. ಆದರೆ ಮತದಾನ ಮಾಡಲೇಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇನೆ. ನನಗೆ ಎಲ್ಲ ಪಕ್ಷಗಳ ಒಡನಾಟವಿದೆ’ ಎಂದರು ರೇಖಾ.

ಯುವಕರು ಸಿದ್ಧ
ಮರಳು ಸಮಸ್ಯೆ ಇದೆ.ಇತರ ಕೆಲವು ಸಮಸ್ಯೆಗಳು ಕೂಡ ಇವೆ.ಯುವಕರಲ್ಲಿ ರಾಜಕೀಯದ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿದೆ. ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಪೈಪೋಟಿ ಇದೆ. 
– ಹರೀಶ್‌, ರಿಕ್ಷಾ ಚಾಲಕ ಕೆ.ಜಿ.ರೋಡ್‌ ರಿಕ್ಷಾ ನಿಲ್ದಾಣ

ಯುವಕರು ಸಿದ್ಧ
“ನೀರಿನ ಸಮಸ್ಯೆ ಇದೆ. ಆದರೆ ಅದು ಮಾಮೂಲು. ಅದನ್ನು ಅಷ್ಟು ಸುಲಭವಾಗಿ ಪರಿಹರಿಸಲಾಗದು. ಹಾಗಂತ ಯಾರು ಕೂಡ ಓಟು ಹಾಕದೆ ಇರುವುದಿಲ್ಲ. ಒಂದೇ ಒಂದು ಓಟು ಹಾಳು ಮಾಡುವುದಿಲ್ಲ’ 
 – ರಂಗನಾಥ್‌, ಅಮ್ಮುಂಜೆ ಸಾಲ್ಮರ

–  ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.