ದಲಿತ ಅಸ್ಪೃಶ್ಯರಿಗೆ ಆದ್ಯತೆ: ಪರಮೇಶ್ವರಪ್ಪ
Team Udayavani, May 7, 2018, 5:23 PM IST
ಹಗರಿಬೊಮ್ಮನಹಳ್ಳಿ: ಕಳೆದ ಎರಡು ಅವಧಿಯ ಆಡಳಿತದಿಂದ ಬೇಸತ್ತ ಜನರು ಈ ಬಾರಿ ಶೋಷಿತ ಸಮುದಾಯಕ್ಕೆ ಆದ್ಯತೆ ನೀಡುವ ಮೂಲಕ ಬೆಂಬಲಿಸುವರು ಎಂದು ಪಕ್ಷೇತರ ಅಭ್ಯರ್ಥಿ ಪರಮೇಶ್ವರಪ್ಪ ತಿಳಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಪಾರ ಬೆಂಬಗಲಿಗರೊಂದಿಗೆ ಬೈಕ್ರ್ಯಾಲಿ ನಡೆಸಿ ಮಾತನಾಡಿದ ಅವರು, ಎಸ್ಸಿ ಮೀಸಲು ಕ್ಷೇತ್ರವಾಗಿದ್ದರೂ ಕೇವಲ ಒಂದು ಸಮುದಾಯಕ್ಕೆ ಸೌಲಭ್ಯಗಳನ್ನು ಒದಗಿಸುವ ಮಾಜಿ ಶಾಸಕರು ದಲಿತ ಅಸ್ಪೃಶ್ಯರನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಈ ಬಾರಿ ಅಸ್ಪೃಶ್ಯ ದಲಿತರಿಗೆ ಕ್ಷೇತ್ರದ ಸೇವೆಯನ್ನು ಮಾಡಲು ಅವಕಾಶ ನೀಡಬೇಕು. ಸಾಮಾಜಿಕ ನ್ಯಾಯಕ್ಕೆ ಬೆಲೆ ನೀಡದ ಪಕ್ಷಗಳಿಗೆ ಪಾಠ ಕಲಿಸುವ ದಿನಗಳು ಹತ್ತಿರವಾಗುತ್ತಿವೆ.
ಪ್ರಜ್ಞಾವಂತ ಮತದಾರರು ಆಟೋ ಗುರುತಿಗೆ ಮತ ಚಲಾಯಿಸುವ ಮೂಲಕ ಬೆಂಬಲಿಸಬೇಕೆಂದು ಮನವಿ ಮಾಡಿದರು. ಮುಖಂಡರಾದ ಬಲ್ಲಾಹುಣಿ ರಾಮಣ್ಣ, ಜೆ.ಯೋಗಾನಂದ ಮಾತನಾಡಿದರು. ಮುಖಂಡರಾದ ಎಲಿಗಾರ ರವಿ, ಸಂಪತ್ ಕುಮಾರ ನಾಯ್ಕ, ದುರುಗಪ್ಪ, ಮರಿಯಪ್ಪ, ಚಾರೆಪ್ಪ, ದಾದಾ ಕಲಂದರ್, ಎಣ್ಣಿ ಭಾಷ, ಆನಂದ, ವಿರೇಶ್, ಕರಿಯಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್