UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು


Team Udayavani, May 2, 2024, 11:26 AM IST

2-uv-fusion

ಶ್ಮಶಾನವೆಂದರೆ ದೊಡ್ಡವರಿಂದ ಮಕ್ಕಳ ತನಕ ಭಯ, ಅಸಹ್ಯಗಳೇ ತುಂಬಿಕೊಂಡಿರುವುದು ಸಹಜ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿದ್ಯಾನಗರದಲ್ಲಿರುವ ರುದ್ರಭೂಮಿ ಭಿನ್ನವಾಗಿದೆ. ಈ ರುದ್ರಭೂಮಿ ಮೃತ ವ್ಯಕ್ತಿಗಳಿಗೆ ಸದ್ಗತಿ ಕಾಣಿಸುವ ತಾಣವಾಗುವ ಜತೆಗೆ ಸಾಹಿತ್ಯ, ಸಂಸ್ಕೃತಿ ಪ್ರೇಮಿಗಳಿಗೆ ರಂಗಧಾಮ ಕಾರ್ಯಕ್ರಮ ಕುಟೀರಗಳು ಚಟುವಟಿಕೆಗಳ ಮೂಲಕ ಮುದ ನೀಡುವ ತಾಣವೂ ಆಗಿದೆ.

ರುದ್ರಭೂಮಿಯ ಎರಡೂವರೆ ಎಕ್ರೆ ಜಾಗವನ್ನು ಎರಡು ಕುಟೀರಗಳನ್ನಾಗಿ ಮಾಡಲಾಗಿದೆ. ಒಂದಕ್ಕೆ ಸದ್ಗತಿ ಮತ್ತೂಂದಕ್ಕೆ ನೆಮ್ಮದಿ ಕುಟೀರ ಎಂದು ಹೆಸರಿಡಸಲಾಗಿದೆ. ರುದ್ರಭೂಮಿಗೆ ಕರೆ ಬಂತೆಂದರೆ ಅದು ಸಾವಿನ ಸುದ್ದಿಯೇ ಆಗಿರುತ್ತದೆ. ಒಂದು ಕರೆ ಮಾಡಿದರೆ ಸಾಕು, ಮೃತರ ಕಳೇಬರ ತರಿಸಲು ವಾಹನದಿಂದ ಹಿಡಿದು ಸಕಲ ವ್ಯವಸ್ಥೆಗೂ ಸಿದ್ಧ ಈ ರುದ್ರಭೂಮಿ.

ಅಂತಿಮವಾಗಿ ಬಂಧುವನ್ನು ಗೆಳೆಯನನ್ನು ಸಹೋದರ, ಸಹೋದರಿಯನ್ನು ಬೀಳ್ಕೊಟ್ಟ ಬಳಿಕ ಇಲ್ಲಿ ಸತ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಬಡವರ, ಅನಾಥ ಶವಗಳ ಸಂಸ್ಕಾರವನ್ನು ಶುಲ್ಕರಹಿತವಾಗಿ ನಡೆಸಿದ್ದೂ ಇದೆ.  ವಿಶೇಷ ಅಂದರೆ ಇಲ್ಲಿನ ಬೆಳಗು ಸಾವಿನ ಸುದ್ದಿಯಿಂದಲೇ ಆರಂಭವಾಗುತ್ತದೆ, ಆದರೆ ಸಂಜೆಯ ಸಮಯದಲ್ಲಿ ಇಲ್ಲಿ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳು ನಡೆಯುತ್ತವೆ, ಎಷ್ಟೋ ಬಾರಿ ಇಡೀ ದಿನದ ಸಮ್ಮೇಳನಗಳೂ ನಡೆಯುತ್ತವೆ.

ಇಲ್ಲಿನ ಸುತ್ತಲಿನ ಪರಿಸರ, ವೃಂದಾವನದ ನೋಟ, ಗಿಡ ಮರಗಳೂ, ಅರಳಿದ ಹೂವುಗಳೂ ನಮ್ಮನ್ನು ನೋಡಿ ಸಾಂತ್ವನದ ಮಾತುಗಳನ್ನು ಆಡುತ್ತವೆ. ಇಲ್ಲಿ ಒಂದು ಕಡೆ ಮೃತ ವ್ಯಕ್ತಿಯ ದಹನ ನಡೆದರೆ, ಇನ್ನೊಂದು ಕಡೆ ಚೆಂಡೆಯ, ಮದ್ದಲೆಯ ಸದ್ದು ಕೇಳುತ್ತವೆ, ಜತೆಗೆ ಪುಸ್ತಕ ಬಿಡುಗಡೆ, ಕಾವ್ಯವಾಚನದಂತ ಸಮಾರಂಭಗಳು ನಡೆಯುತ್ತವೆ.

ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಗಳ ಜತೆಗೆ ಇದೀಗ ಈ ರುದ್ರಭೂಮಿಯಲ್ಲಿ ರಂಗಧಾಮ ಕೂಡ ತಲೆ ಎತ್ತಿದೆ. ರುದ್ರಭೂಮಿ ಹಾಗೂ ರಂಗಭೂಮಿಗಳಲ್ಲಿನ ಎರಡೂ ಒಗೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿದ್ಯಾನಗರದ ರುದ್ರಭೂಮಿಯ ಆಡಳಿತ ಸಮಿತಿ 24 ಗಂಟೆ ಸೇವೆಗೆ ಸಿದ್ಧವಾಗಿದೆ.

ನೆಮ್ಮದಿ ಕುಟೀರದಲ್ಲಿ ಸಣ್ಣ-ಪುಟ್ಟ ಕಾರ್ಯಕ್ರಮಗಳಿಗೆ ಸುದ್ದಿಗೋಷ್ಠಿಗಳಿಗೆ, ಸಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ರಂಗಧಾಮ ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ನಾಡಿನಲ್ಲೇ ಅತಿ ಹೆಚ್ಚು ಪುಸ್ತಕಗಳು ದಾನರೂಪದಲ್ಲಿ ಹರಿದುಬಂದ ದಾಖಲೆ ಈ ಕುಟೀರಕ್ಕಿದೆ. ಪ್ರಸ್ತುತವಾಗಿ ಯಕ್ಷಗಾನ, ನಾಟಕ, ಸಂಗೀತ ತರಗತಿಗಳು ನಡೆಯುತ್ತಿವೆ.

ರಜಾ ದಿನಗಳಲ್ಲಿ ವೈದ್ಯರು, ಉದ್ಯೋಗಿಗಳು, ಎಂಜಿನಿಯರ್‌ ನಿವೃತ್ತರು, ಶಿಕ್ಷಕರು ಎಲ್ಲ ಸೇರಿ ಪ್ರತೀ ರವಿವಾರ ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಸ್ವತ್ಛತೆಯ ಕೆಲಸ, ಹಸುರುಗೋಡೆ ನಿರ್ವಹಣೆ, ಶವ ಸಂಸ್ಕಾರಕ್ಕೆ ಕಟ್ಟಿಗೆ ತರುವುದು ಮುಂತಾದ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ.

ವಿದ್ಯಾನಗರದ ರುದ್ರಭೂಮಿ ದೇಶದ ಗಮನ ಸೆಳೆದಿದ್ದು, ರಾಜ್ಯ ರಾಜಧಾನಿಯಿಂದ ಶಿರಸಿಯ ರುದ್ರಭೂಮಿಗೆ ನಾಡಗುರು ಕೆಂಪೇಗೌಡರ ಪ್ರಶಸ್ತಿ ದೊರೆತಿದೆ.

ಅಪೂರ್ವ

ಶಿರಸಿ

ಟಾಪ್ ನ್ಯೂಸ್

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

covid

Covishield ಲಸಿಕೆಯಿಂದ ಮತ್ತೊಂದು ಸೈಡ್‌ಎಫೆಕ್ಟ್!

Modi 2

3rd Term; ನೂರಲ್ಲ, 125 ದಿನಗಳ ಯೋಜನೆ ಸಿದ್ಧ: ಪ್ರಧಾನಿ ಮೋದಿ

BJP 2

BJP 296-300 ಸ್ಥಾನ: ಫ‌ಲೋಡಿ ಜೂಜು ಅಡ್ಡೆ ಭವಿಷ್ಯ!

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

HDK SPark

Pen drive ಕೊಡುವೆ, ತನಿಖೆ ನಡೆಸುತ್ತೀರಾ?: ಸಿಎಂಗೆ ಎಚ್‌ಡಿಕೆ ಸವಾಲು

MOdi (3)

Uttar Pradesh ಬಗ್ಗೆ ವಿಪಕ್ಷ ಕೂಟ ತುಚ್ಛ ಮಾತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

10-uv-fusion

Festival: ಊರ ಹಬ್ಬ

9-uv-fusion

Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಕ್ರಿಕೆಟಿಗರಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.