ಜಿಲ್ಲೆಯಲ್ಲಿ ಕಾಯರ್ ಕ್ಲಸ್ಟರ್ ಸ್ಥಾಪನೆ
Team Udayavani, May 8, 2018, 5:20 PM IST
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಬೃಹತ್ ಕಾಯರ್ ಕ್ಲಸ್ಟರ್ ಆರಂಭಿಸಲಾಗುತ್ತದೆ ಎಂದು ಕೇಂದ್ರ ಕಾಯರ್ ಬೋರ್ಡ್ ಛೇರ್ಮನ್ ಸಿ.ಪಿ. ರಾಧಾಕೃಷ್ಣ ತಿಳಿಸಿದರು. ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ನಾಲ್ಕು ಕಾಯರ್ ಕ್ಲಸ್ಟರ್ಗಳು ಆರಂಭವಾಗಲಿದ್ದು ಅದರಲ್ಲಿ ಚಿತ್ರದುರ್ಗವೂ ಒಂದು. ಕಾಯರ್ ಬೋರ್ಡ್ 1200 ಕೋಟಿ ರೂ.ಗಳಿಗಿಂತ ಹೆಚ್ಚಿನ ಉತ್ಪನ್ನಗಳನ್ನು ರಪು¤ ಮಾಡಿದೆ ಎಂದರು.
ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು, ಪ್ರತಿ ಹಳ್ಳಿಗೆ ನೀರು, ವಿದ್ಯುತ್, ಡಾಂಬರ್ ರಸ್ತೆ ಬೇಕು. ಚಿಕ್ಕ ಮತ್ತು ದೊಡ್ಡ ನಗರಗಳಿಗೆ ಸಂಪರ್ಕ ನೀಡಬೇಕೆಂದು ವಾಜಪೇಯಿ ಕನಸಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಏನೂ ಅಭಿವೃದ್ಧಿಯಾಗಲಿಲ್ಲ. ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿದ್ದರಿಂದ ಕೋಟ್ಯಂತರ ನಕಲಿ ಬಿಪಿಎಲ್ ಕಾರ್ಡ್ಗಳು ರದ್ದಾಗಿವೆ. 2.5 ಕೋಟಿ ಗ್ಯಾಸ್ ಸಂಪರ್ಕ ಸಿಕ್ಕಿದೆ. ವಾಜಪೇಯಿ ಪೆಂಡಿಂಗ್ ಇಟ್ಟಿದ್ದನ್ನು ಮೋದಿ ಕ್ಲಿಯರ್ ಮಾಡಿದರು. 5 ಲಕ್ಷ ಜನರಿಗೆ ಮೆಡಿಕಲ್ ಇನ್ಷೊರೆನ್ಸ್ ಸಿಕ್ಕಿದೆ. ಪ್ರಾಕೃತಿಕ ವಿಕೋಪದಿಂದಾದ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ತೆಂಗು ಬೆಳೆಯಲಾಗುತ್ತಿದ್ದು ಆರ್ಥಿಕ ಭದ್ರತೆ ಒದಗಿಸುವ ಉದ್ಯಮಿಗೆ ಒತ್ತು ನೀಡಬೇಕು.
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಪೂರ್ಣಗೊಂಡಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ 1.5 ಲಕ್ಷ ಕೋಟಿ ರೂ.ಗಳನ್ನು ನೀರಾವರಿ ಯೋಜನೆಗೆ ವೆಚ್ಚ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ಜಿಲ್ಲೆಯಲ್ಲಿ ಅನ್ಯ ಭಾಷಿಕರ ಮತಗಳನ್ನು ಸೆಳೆಯಲು ಆಯಾ ಭಾಷೆಗಳ
ಮುಖಂಡರಿಂದ ಪ್ರಚಾರ ನಡೆಸುತ್ತಿದ್ದೇವೆ. ತಮಿಳು ಭಾಷಿಕರು ಹೆಚ್ಚಿರುವುದರಿಂದ ರಾಧಾಕೃಷ್ಣ ಅವರನ್ನು ತಮಿಳುನಾಡಿನಿಂದ ಕರೆಸಿದ್ದೇವೆ ಜೈನ್, ಪಟೇಲ್ ಸೇರಿದಂತೆ ಮತ್ತಿತರ ಉತ್ತರ ಭಾರತದ ಜನತೆ ನಗರದಲ್ಲಿ ನೆಲೆಸಿದ್ದು ಅವರೊಟ್ಟಿಗೆ ಉತ್ತರ ಪ್ರದೇಶದ ಸಂಸದ ಶರತ್ ತ್ರಿಪಾಠಿ ನಾಲ್ಕೈದು ಸಭೆಗಳನ್ನು ಮಾಡಿದ್ದಾರೆ ಎಂದರು. ಉತ್ತರ ಪ್ರದೇಶದ ಗೋರಖ್ ಸಂತ ಕಬೀರ್ ಕ್ಷೇತ್ರದ ಸಂಸದ ಶರತ್ ತ್ರಿಪಾಠಿ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ