ಪ್ರಮುಖರ ಟ್ವಿಟ್ಗಳು
Team Udayavani, May 16, 2018, 11:14 AM IST
ಭವಿಷ್ಯಕ್ಕಾಗಿ ಈ ಟ್ವೀಟನ್ನು ಸೇವ್ ಮಾಡಿಟ್ಟುಕೊಳ್ಳಿ. ಒಂದು ವೇಳೆ ಮುಂದೆ ನಾನು ಚುನಾವಣೆಯಲ್ಲಿ ಗೆದ್ದರೆ ಅದಕ್ಕೆ ನನ್ನ ವರ್ಚಸ್ಸು ಮತ್ತು ಕಠಿಣ ಪರಿಶ್ರಮ ಕಾರಣ. ಒಂದು ವೇಳೆ ಸೋತರೆ ಅದಕ್ಕೆಲ್ಲ ಆ ಇವಿಎಂಗಳೇ ಕಾರಣ.
-ಓಮರ್ ಅಬ್ದುಲ್ಲಾ
ಕರ್ನಾಟಕ ಚುನಾವಣೆಯ ಬಗ್ಗೆ ಮಾತನಾಡುತ್ತಿರುವ ಉತ್ತರ ಭಾರತದ ಪರಿಣತರೇ ಇಲ್ಲಿ ಕೇಳಿ, ನಮ್ಮ ರಾಜ್ಯದ ಹೆಸರು “ಕರ್ನಾಟಕ’, ಕರ್ನಾಟಕ್ ಅಲ್ಲ. ನಮ್ಮ ಭಾಷೆ ಕನ್ನಡ, ಕನ್ನಡ್ ಅಲ್ಲ, ನಾವು ಕನ್ನಡಿಗರು, “ಕನ್ನಡ್ಸ್’ ಅಲ್ಲ.
-ಶಿಲ್ಪ ಕನ್ನನ್
ಮತದಾನ ಮಾಡದೇ ಮನೆಯಲ್ಲಿ ಉಳಿದ ಕರ್ನಾಟಕ ಜನತೆಗಳೇ, ನೀವು ಬದಲಾವಣೆಯ ಅವಕಾಶವನ್ನು ಕಳೆದುಕೊಂಡಿರಿ. ಈಗ ನೋಡಿ ನಾಟಕ ಶುರುವಾಗುತ್ತದೆ ಮತ್ತೆ ಹಣದಾಟ ಆರಂಭವಾಗುತ್ತದೆ, ಅವಕಾಶವಾದಿಗಳು ಆರ್ಭಟಿಸುತ್ತಾರೆ.
-ರಾಮಕೃಷ್ಣ
ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸಿದರೆ ತಪ್ಪೇನಿದೆ? ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿಯೂ ಇದೇ ರೀತಿ ಅಧಿಕಾರಕ್ಕೆ ಬಂದಿತ್ತಲ್ಲವೇ?
-ಅಭಿಜಿತ್ ಮಜುಂದಾರ್
ಕರ್ನಾಟಕದಲ್ಲಿ ಎರಡು ಸನ್ನಿವೇಶಗಳು ನಿರ್ಮಾಣವಾಗಬಹುದು.
1) ಬಿಜೆಪಿ ಈಗ ಸರ್ಕಾರ ರಚಿಸುತ್ತದೆ.
2) ಬಿಜೆಪಿ ಕೆಲವು ತಿಂಗಳ ನಂತರ ಸರ್ಕಾರ ರಚಿಸುತ್ತದೆ!
-ಸಾಗರ್ಕ್ಯಾಸಂ
ವಿನಾಶದ ಅಂಚಿನಲ್ಲಿರುವ ಪಕ್ಷಕ್ಕೆ ಅಪಾಯ ಎದುರೊಡ್ಡುತ್ತಿರುವ ಅಪರಾಧದ ಮೇಲೆ ಮೋದಿ ಮತ್ತು ಅಮಿತ್ ಶಾ ಅವರಿಗೆ ಶಿಕ್ಷೆಯಾಗಬೇಕು!
-ಬ್ಲ್ಯಾಂಕ್ ಪೇಜ್
ಅದೆಲ್ಲ ಓಕೆ… ಇವ ನಾರ್ವ, ಇವ ನಾರ್ವ, ಇವ ನಾರ್ವ ಎಲ್ಲಿ ಹೋದ್ರು?
-ತೂಜಾನೇನಾ?
ಅತಿ ಕಡಿಮೆ ಸೀಟು ಗೆದ್ದ ಪಕ್ಷದವರು ಸಿಎಂ ಆಗಲು ಯೋಚಿಸುತ್ತಾರೆ, ಇದು ನಿಜವಾದರೆ ಜಾಸ್ತಿ ಸೀಟು ಪಡೆದ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂಡಬೇಕು. ಭಾರತೀಯ ರಾಜಕಾರಣ!
-ವಿಕ್ರಂ ಸಂಜಯ್
ಡಿಸ್ಟಿಂಕ್ಷನ್ ಪಡೆದವನಿಗಿಂತ 35 ಪರ್ಸೆಂಟ್ ಅಂಕಗಳಿಸಿದವನೇ ಜೀವನದಲ್ಲಿ ಸುಖವಾಗಿರುತ್ತಾನೆ ಎನ್ನುವುದನ್ನು ಜೆಡಿಎಸ್ ಪಕ್ಷ ರುಜುವಾತು ಮಾಡುತ್ತಿದೆ!
-ಅನಿಲ್ಕುಮಾರ್ ಎಂ
ಜೆಡಿಎಸ್ ಸರ್ಕಾರ ರಚಿಸಬಾರದು ಎಂದರೆ ಒಂದೇ ಒಂದು ದಾರಿಯಿದೆ. ರಾಜ್ಯಪಾಲರು ಹುಷಾರಿಲ್ಲವೆಂದು ಆಸ್ಪತ್ರೆಗೆ ಅಡ್ಮಿಟ್ ಆಗಬೇಕು!
-ವಿಜಯ್ ನಾರಾಯಣನ್
ಅರವಿಂದ್ ಕೇಜ್ರಿವಾಲ್ ದೇವೇಗೌಡರಿಗೆ ಕರೆ ಮಾಡಿದರಂತೆ… “ನಿಮ್ಮ ಎಂಎಲ್ಎಗಳ ಮೇಲೆ ಕಣ್ಣಿಡಲು ಸಿಸಿಟಿವಿ ಕ್ಯಾಮೆರಾ ಕೊಟ್ಟು ಕಳುಹಿಸುತ್ತೇನೆ’ ಎಂದಿದ್ದಾರಂತೆ.
-ಸಿದ್ಧಾರ್ಥ್ ಮೊಹಂತಿ.
ಇನ್ನೊಂದು ತಿಂಗಳು ರೆಸಾರ್ಟ್ ಮಾಲೀಕರಿಗೆ ಹಬ್ಬವೋ ಹಬ್ಬ. ನಮ್ಮ ಪಕ್ಷಗಳು ರೆಸಾರ್ಟ್ಗಳಲ್ಲಿ ಏನು ಮಾಡುತ್ತವೆ ಎನ್ನುವುದು ನಮಗೆ ಗೊತ್ತು. ಆದರೂ ನಾವವನ್ನು ಬೆಂಬಲಿಸುತ್ತೇವೆ. ಮತದಾರ ದೊಡ್ಡ ಮೂರ್ಖ!
-ಅನಂತ್ ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Bengaluru: ಬ್ರೇಕ್ ಬದಲು ಆ್ಯಕ್ಸಿಲೇಟರ್ ಒತ್ತಿದ ಆ್ಯಂಬುಲೆನ್ಸ್ ಚಾಲಕ: ಸರಣಿ ಅಪಘಾತ
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ