ಕಾವೇರಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ
Team Udayavani, May 18, 2018, 9:35 AM IST
ಹೊಸದಿಲ್ಲಿ: ಕೇಂದ್ರ ಸರಕಾರ ರಚಿಸಿದ ಕಾವೇರಿ ನಿರ್ವಹಣೆ ಸ್ಕೀಮ್ ಅಂತಿಮಗೊಳಿಸುವಿಕೆಗೆ ಸಂಬಂಧಿಸಿದಂತೆ ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ನದಿಯಲ್ಲಿ ನಿರಂತರ ಹರಿವು ಕಾಯ್ದುಕೊಳ್ಳಲು ತಮಿಳುನಾಡು ಮತ್ತು ಕರ್ನಾಟಕದ ಪರವಾಗಿ ನಿರ್ದಿಷ್ಟ ಪ್ರಮಾಣದ ನೀರನ್ನು ಆಣೆಕಟ್ಟಿನಲ್ಲಿ ಬಿಡಬೇಕು ಎಂದು ಕಾವೇರಿ ನ್ಯಾಯಮಂಡಳಿ ಈ ಹಿಂದೆ ಪ್ರಸ್ತಾವಿಸಿರುವ ನಿಯಮವನ್ನು ರಾಜ್ಯ ಗುರುವಾರ ಪ್ರಸ್ತಾವಿಸಿತು. ಈ ಪ್ರಸ್ತಾನೆಯು ಕೇಂದ್ರ ಸರಕಾರ ಸಲ್ಲಿಸಿದ ಸ್ಕೀಮ್ನಲ್ಲಿ ಒಳಗೊಂಡಿರಲಿಲ್ಲ. ಅದಕ್ಕೆ ತಮಿಳುನಾಡು ವಿರೋಧಿಸಿದ್ದು, ಫೆಬ್ರವರಿ 16ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವ ಮತ್ತೂಂದು ಪ್ರಯತ್ನ ಎಂದು ಆಕ್ಷೇಪಿಸಿತು.
ಈ ಮಧ್ಯೆ ತೀರ್ಪಿಗೆ ಅನುಗುಣವಾಗಿಯೇ ಕರಡು ಸ್ಕೀಮ್ ಇರಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ. ಅಲ್ಲದೆ ಸ್ಕೀಮ್ ಗೆ ಸಂಬಂಧಿಸಿದಂತೆ ಶುಕ್ರವಾರ ಅಥವಾ ಮೇ 22 ಅಥವಾ 23ರಂದು ಆದೇಶ ಹೊರಡಿಸಲಾಗುತ್ತದೆ. ಕಾವೇರಿ ನದಿ ನೀರಿಗೆ ಸಂಬಂಧಿಸಿದ ಎಲ್ಲ ರಾಜ್ಯಗಳ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು ತೀರ್ಪು ನೀಡಲಾಗುತ್ತದೆ ಎಂದು ಹೇಳಿದ್ದಾರೆ.