ಬೆಂಗಳೂರು ಔಟ್‌; ರಾಜಸ್ಥಾನ್‌ ಪ್ಲೇ ಆಫ್ ಪ್ರವೇಶ ಜೀವಂತ


Team Udayavani, May 20, 2018, 11:56 AM IST

pti5192018000129b.jpg

ಜೈಪುರ: ಉತ್ಕೃಷ್ಟ ಮಟ್ಟದ ಬೌಲಿಂಗ್‌ ದಾಳಿ ಸಂಘಟಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಶನಿವಾರದ ಮೊದಲ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು 30 ರನ್ನುಗಳಿಂದ ಸೋಲಿಸಿದೆ. 

ಇದು ಎರಡೂ ತಂಡಗಳಿಗೆ ಕೊನೆಯ ಲೀಗ್‌ ಪಂದ್ಯವಾಗಿದ್ದು ಗೆಲುವು ಅನಿವಾರ್ಯವಾಗಿತ್ತು. ಸೋತ ಆರ್‌ಸಿಬಿ ತಂಡವು ಕೂಟದಿಂದ ಹೊರಬಿದ್ದಿದೆ. ಗೆಲುವು ಸಾಧಿಸಿದ ರಾಜಸ್ಥಾನ್‌ ತಂಡವು ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವನ್ನು ಜೀವಂತವಿರಿಸಿಕೊಂಡಿದೆ. ಲೀಗ್‌ನಲ್ಲಿ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿದ್ದು ಈ ಪಂದ್ಯಗಳ ಫ‌ಲಿತಾಂಶದ ಬಳಿಕ ಪ್ಲೇ ಆಫ್ಗೆ ತೇರ್ಗಡೆಯಾಗುವ ಎರಡು ತಂಡಗಳು ಯಾವುವು ಎಂಬುದು ನಿರ್ಧಾರವಾಗಲಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ ರಾಯಲ್ಸ್‌ ತಂಡವು ಆರಂಭಿಕ ರಾಹುಲ್‌ ತ್ರಿಪಾಠಿ ಅವರ ಆಕರ್ಷಕ ಆಟದಿಂದಾಗಿ 5 ವಿಕೆಟಿಗೆ 164 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಇದಕ್ಕೆ$ಉತ್ತರವಾಗಿ ಘೋರ ಕುಸಿತಕ್ಕೆ ಒಳಗಾದ ಆರ್‌ಸಿ ಬೆಂಗಳೂರು ತಂಡವು 19.2 ಓವರ್‌ಗಳಲ್ಲಿ 134 ರನ್ನಿಗೆ ಆಲೌಟಾಗಿ ನಿರಾಶೆ ಅನುಭವಿಸಿತು. 

ತ್ರಿಪಾಠಿ ಭರ್ಜರಿ ಆಟ
ಆರಂಭಿಕ ತ್ರಿಪಾಠಿ ಅವರ ಭರ್ಜರಿ ಆಟದಿಂದಾಗಿ ರಾಜಸ್ಥಾನ್‌ ಸಾಧಾರಣ ಮೊತ್ತ ಪೇರಿಸುವಂತಾಯಿತು. ಜೋಫ್ರಾ ಆರ್ಚರ್‌ ಅವರನ್ನು ಬೇಗನೇ ಕಳೆದುಕೊಂಡ ಬಳಿಕ ತ್ರಿಪಾಠಿ ಮತ್ತು ನಾಯಕ ಅಜಿಂಕ್ಯ ರಹಾನೆ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ದ್ವಿತೀಯ ವಿಕೆಟಿಗೆ 99 ರನ್ನುಗಳ ಜತೆ ಯಾಟ ನಡೆಸಿದರು. ಆದರೆ ಇಬ್ಬರೂ ನಿಧಾನವಾಗಿ ಆಡಿದ್ದರಿಂದ ತಂಡ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

ರಹಾನೆ ಮತ್ತು ಸ್ಯಾಮ್ಸನ್‌ ಅವರನ್ನು ಸತತ ಎರಡು ಎಸೆತಗಳಲ್ಲಿ ಉಮೇಶ್‌ ಯಾದವ್‌ ಉರುಳಿಸಿದಾಗ ಬೆಂಗಳೂರು ಮೇಲುಗೈ ಸಾಧಿಸಬಹುದೆಂದು ಭಾವಿಸ ಲಾಗಿತ್ತು. ಆದರೆ ತ್ರಿಪಾಠಿ ಸಹಿತ ಕ್ಲಾಸೆನ್‌ ಮತ್ತು ಗೌತಮ್‌ ಕೊನೆ ಹಂತದಲ್ಲಿ ಸಿಡಿದ ಕಾರಣ ತಂಡದ ಮೊತ್ತ 150ರ ಗಡಿ ದಾಟುವಂತಾಯಿತು. ತಾಳ್ಮೆಯ ಆಟ ವಾಡಿದ ತ್ರಿಪಾಠಿ ಪೂರ್ತಿ 20 ಓವರ್‌ ಆಡಿ ಅಜೇಯರಾಗಿ ಉಳಿದರು. 58 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 80 ರನ್‌ ಹೊಡೆದರು.

ಬಿಗು ದಾಳಿ ಸಂಘಟಿಸಿದ ಉಮೇಶ್‌ ಯಾದವ್‌ 25 ರನ್ನಿಗೆ 3 ವಿಕೆಟ್‌ ಕಿತ್ತರು.ಗೆಲ್ಲಲು 165 ರನ್‌ ತೆಗೆಯುವ ಅವಕಾಶ ಪಡೆದ ಬೆಂಗಳೂರು ತಂಡವು ನಾಯಕ ಕೊಹ್ಲಿ ಅವರನ್ನು ಬೇಗನೇ ಕಳೆದುಕೊಂಡಿತು. ಕೊಹ್ಲಿ 9 ಎಸೆತ ಎದುರಿಸಿ 4 ರನ್‌ ಹೊಡೆದು ಗೌತಮ್‌ಗೆ ಕ್ಲೀನ್‌ಬೌಲ್ಡ್‌ ಆದರು. ಆಬಳಿಕ ಪಾರ್ಥಿವ್‌ ಪಟೇಲ್‌ ಮತ್ತು ಎಬಿ ಡಿ’ವಿಲಿಯರ್ ದ್ವಿತೀಯ ವಿಕೆಟಿಗೆ 55 ರನ್‌ ಪೇರಿಸಿದರು. ಆದರೆ ಈ ಜೋಡಿ ಮುರಿದ ಬಳಿಕ ಬೆಂಗಳೂರು ನಾಟಕೀಯ ಕುಸಿತ ಕಂಡಿತು. ಈ ಆಘಾತದಿಂದ ಕೊನೆಯತನಕವೂ ಅದು ಚೇತರಿಸಿಕೊಳ್ಳಲೇ ಇಲ್ಲ.

ಗೋಪಾಲ್‌ ಮಾರಕ ದಾಳಿ
ರಾಜಸ್ಥಾನ್‌ ಗೆಲುವಿನಲ್ಲಿ ಶ್ರೇಯಸ್‌ ಗೋಪಾಲ್‌ ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದ ಗೋಪಾಲ್‌ ಸ್ಮರಣೀಯ ದಾಳಿ ಸಂಘಟಿಸಿ ಬೆಂಗಳೂರಿಗೆ ಪ್ರಬಲ ಹೊಡೆತ ನೀಡಿದರು. ಪಾರ್ಥಿವ್‌ ಮತ್ತು ಡಿ’ವಿಲಿಯರ್ ಜೋಡಿಯನ್ನು ಮುರಿದ ಅವರು ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 16 ರನ್ನಿಗೆ 4 ವಿಕೆಟ್‌ ಕಿತ್ತು ಮಿಂಚಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಸಿಕೊಂಡರು. ಕ್ಲಾಸೆನ್‌ ಮೂರು ಸ್ಟಂಪ್‌ ಔಟ್‌ ಮಾಡಿಸಿ ಗೆಲುವಿಗೆ ತನ್ನ ಕೊಡುಗೆ ಸಲ್ಲಿಸಿದರು. 

ಗೋಪಾಲ್‌ ಅವರ ಈ ದಾಳಿಯಿಂದಾಗಿ ಬೆಂಗಳೂರು 33 ರನ್‌ ಅಂತರದಲ್ಲಿ 7 ವಿಕೆಟ್‌ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಒಂದು ಹಂತದಲ್ಲಿ 1 ವಿಕೆಟಿಗೆ 75ರನ್‌ ಗಳಿಸಿದ್ದ ಬೆಂಗಳೂರು ತಂಡವು 108 ರನ್‌ ತಲುಪಿದಾಗ 8 ವಿಕೆಟ್‌ ಕಳೆದುಕೊಂಡಿತ್ತು. ಎಬಿ ಡಿ’ ವಿಲಿಯರ್ ಹೋರಾಟದ 53 ರನ್‌ ಗಳಿಸಿದರು. ಅವರು 6ನೆಯವರಾಗಿ ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು.

ಸ್ಕೋರ್‌ಪಟ್ಟಿ
ರಾಜಸ್ಥಾನ್‌ ರಾಯಲ್ಸ್‌

ರಾಹುಲ್‌ ತ್ರಿಪಾಠಿ    ಔಟಾಗದೆ    80
ಜೋಫ್ರಾ ಆರ್ಚರ್‌    ಸಿ ಪಟೇಲ್‌ ಬಿ ಯಾದವ್‌    0
ಅಜಿಂಕ್ಯ ರಹಾನೆ    ಎಲ್‌ಬಿಡಬ್ಲ್ಯು ಯಾದವ್‌    33
ಸಂಜು ಸ್ಯಾಮ್ಸನ್‌    ಸಿ ಅಲಿ ಬಿ ಯಾದವ್‌    0
ಹೆನ್ರಿಕ್‌ ಕ್ಲಾಸೆನ್‌    ಸಿ ಅಲಿ ಬಿ ಸಿರಾಜ್‌    32
ಕೃಷ್ಣಪ್ಪ ಗೌತಮ್‌    ರನೌಟ್‌    14
ಇತರ:        5
ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    164
ವಿಕೆಟ್‌ ಪತನ: 1-2, 2-101, 3-101, 4-149, 5-164
ಬೌಲಿಂಗ್‌:
ಯಜುವೇಂದ್ರ ಚಹಲ್‌        4-0-26-0
ಉಮೇಶ್‌ ಯಾದವ್‌        4-1-25-3
ಮೊಯಿನ್‌ ಅಲಿ        2-0-19-0
ಟಿಮ್‌ ಸೌಥಿ        4-0-37-0
ಮೊಹಮ್ಮದ್‌ ಸಿರಾಜ್‌        4-0-33-1
ಕಾಲಿನ್‌         2-0-23-0
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ    ಬಿ ಗೌತಮ್‌    4
ಪಾರ್ಥಿವ್‌ ಪಟೇಲ್‌    ಸ್ಟಂಪ್ಡ್ ಕ್ಲಾಸೆನ್‌ ಬಿ ಗೋಪಾಲ್‌    33
ಎಬಿ ಡಿ’ವಿಲಿಯರ್    ಸ್ಟಂಪ್ಡ್ ಕ್ಲಾಸೆನ್‌ ಬಿ ಗೋಪಾಲ್‌    53
ಮೊಯಿನ್‌ ಅಲಿ    ಸಿ ಮತ್ತು ಬಿ ಗೋಪಾಲ್‌    1
ಮನ್‌ದೀಪ್‌ ಸಿಂಗ್‌    ಸ್ಟಂಪ್ಡ್ ಕ್ಲಾಸೆನ್‌ ಬಿ ಗೋಪಾಲ್‌    3
ಕಾಲಿನ್‌     ಸಿ ರಹಾನೆ ಬಿ ಸೋಧಿ    2
ಸಫ‌ìರಾಜ್‌ ಖಾನ್‌    ಸಿ ಕ್ಲಾಸೆನ್‌ ಬಿ ಲಾಲಿನ್‌    7
ಟಿಮ್‌ ಸೌಥಿ    ಸಿ ಗೌತಮ್‌ ಬಿ ಉನಾದ್ಕತ್‌    14
ಉಮೇಶ್‌ ಯಾದವ್‌    ಬಿ ಲಾಲಿನ್‌    0
ಮೊಹಮ್ಮದ್‌ ಸಿರಾಜ್‌    ಸಿ ಗೌತಮ್‌ ಬಿ ಉನಾದ್ಕತ್‌    14
ಯಜುವೇಂದ್ರ ಚಹಲ್‌    ಔಟಾಗದೆ    0
ಇತರ:        3
ಒಟ್ಟು  (19.2 ಓವರ್‌ಗಳಲ್ಲಿ ಆಲೌಟ್‌)    134
ವಿಕೆಟ್‌ ಪತನ: 1-20, 2-75, 3-77, 4-85, 5-96, 6-98, 7-108, 8-108, 9-128
ಬೌಲಿಂಗ್‌:
ಕೃಷ್ಣಪ್ಪ ಗೌತಮ್‌        2-0-6-1
ಜೋಫ್ರಾ ಆರ್ಚರ್‌        4-0-37-0
ಬೆನ್‌ ಲಾಲಿನ್‌        2-0-15-0
ಜೈದೇವ್‌ ಉನಾದ್ಕತ್‌        3.2-0-27-2
ಶ್ರೇಯಸ್‌ ಗೋಪಾಲ್‌        4-0-16-4
ಐಶ್‌ ಸೋಧಿ        4-0-31-1
ಪಂದ್ಯಶ್ರೇಷ್ಠ: ಶ್ರೇಯಸ್‌ ಗೋಪಾಲ್‌

ಟಾಪ್ ನ್ಯೂಸ್

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್‌ಗೆ 48 ಗಂಟೆ ಪ್ರಚಾರ ನಿಷೇಧ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.