ಮೃತ್ಯುಕೂಪ ನೀರಿನ ಹೊಂಡಗಳ ಬಗ್ಗೆ ಎಚ್ಚರ 


Team Udayavani, May 24, 2018, 6:00 AM IST

2105kota4e.jpg

ಕೋಟ: ಪ್ರತಿ ವರ್ಷ ಮಳೆಗಾಲದಲ್ಲಿ ಕಲ್ಲುಕೋರೆ, ಆವಿಮಣ್ಣಿನ ಹೊಂಡ, ಕೆರೆ, ಮದಗಳಲ್ಲಿ ಸಂಭವಿಸುವ ದುರಂತಗಳಲ್ಲಿ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ.  ತಡೆಬೇಲಿ, ಎಚ್ಚರಿಕೆ ಫಲಕ ಮುಂತಾದ ಮುಂಜಾಗೃತೆ ಕ್ರಮಗಳಿದ್ದರೂ ಜೀವ ಹಾನಿ ನಿಲ್ಲುತ್ತಿಲ್ಲ. ಹೀಗಾಗಿ ಈ ಬಾರಿಯಾದರೂ ದುರಂತ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. 
 
ಕೋಟದಲ್ಲಿ ಅತಿ ಹೆಚ್ಚು 
ಕೋಟ ಹೋಬಳಿಯಲ್ಲಿ  ಕಲ್ಲುಕೋರೆ, ಆವೆಮಣ್ಣಿನ ಹೊಂಡ ವ್ಯಾಪಕ ಪ್ರಮಾಣದಲ್ಲಿದೆ. 2015ನೇ ಸಾಲಿನಲ್ಲಿ  ಇಲ್ಲಿನ ಹೆಗ್ಗುಂಜೆ, ಯಡ್ತಾಡಿ, ಹಳ್ಳಾಡಿಯಲ್ಲಿ  ಮೂರು ದುರಂತಗಳು ನಡೆದಿದ್ದು, ಮೂವರು ಸಾವನ್ನಪಿದ್ದಾರೆ. 2016ರಲ್ಲಿ ಅಲ್ತಾರಿನಲ್ಲಿ ತಾಯಿ ಹಾಗೂ ಮಗು ಬಲಿಯಾಗಿದ್ದಾರೆ. ಅದೇ ವರ್ಷ ಬೇಳೂರಿನಲ್ಲಿ  ಒಂದು ಸಾವು ಸಂಭವಿಸಿದೆ. 2017ರಲ್ಲಿ ಬೇಳೂರು ದೇಲಟ್ಟಿನಲ್ಲಿ ಕೃಷಿ ಹೊಂಡಕ್ಕೆ ತಾಯಿ, ಇಬ್ಬರು ಹೆಣ್ಣು ಮಕ್ಕಳು ಸೇರಿ ಮೂರು ಜೀವಗಳು ಬಲಿಯಾಗಿವೆ. ಅದೇ ವರ್ಷ ಕೋಟ ಹಾಗೂ ಯಡ್ತಾಡಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 2018 ಮೇ 17ರಂದು ಆವರ್ಸೆಯ ಆನೆಗುಂಡಿ ಎನ್ನುವಲ್ಲಿ ಇಬ್ಬರು ಯುವಕರು ಮೃತ ಪಟ್ಟಿದ್ದಾರೆ. ಹೀಗೆ 2015ರಿಂದ 2018 ಮೇ ತನಕ ಕೋಟ ಹೋಬಳಿಯಲ್ಲಿ  10 ದುರಂತಗಳು ನಡೆದಿದ್ದು 14ಮಂದಿ ಮೃತಪಟ್ಟಿದ್ದು, ಜಿಲ್ಲೆಯಲ್ಲೇ  ದಾಖಲಾದ ಅತೀ ದೊಡ್ಡ ಸಾವಿನ ಸಂಖ್ಯೆಯಾಗಿದೆ.

ಎಚ್ಚರ ವಹಿಸಿ
ಮಳೆಗಾಲದಲ್ಲಿ  ಮಕ್ಕಳು ನೀರಾಟಕ್ಕೆ ತೆರಳುವ ಕುರಿತು ಹೆತ್ತವರು ನಿಗಾವಹಿಸ ಬೇಕು ಹಾಗೂ ಅಗತ್ಯ ಸಂದರ್ಭದಲ್ಲಿ ಈಜು ಗೊತ್ತಿರುವ ಹಿರಿಯರ ಜತೆಗೆ ನೀರಿಗಿಳಿಯುವಂತೆ ತಿಳಿಸಬೇಕು.  ನೀರಿನ ಹೊಂಡಗಳಲ್ಲಿ  ಬಟ್ಟೆ ಒಗೆಯಲು ತೆರಳುವಾಗ ಮಕ್ಕಳನ್ನು ಜತೆಯಲ್ಲಿ ಕರೆದೊಯ್ಯ ದಿರುವುದು, ಶಿಕ್ಷಕರು ದುರಂತಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು, ಅಪಾಯಕಾರಿ ಹೊಂಡಗಳನ್ನು ಮುಚ್ಚುವುದು ಮತ್ತು ತಡೆಬೇಲಿ ಅಳವಡಿಸುವುದನ್ನು ಸಂಘಟನೆಗಳ ನೆರವಿನೊಂದಿಗೆ ಮಾಡಬೇಕು.   

ಮಾಲಕರೇ ಹೊಣೆಗಾರರು
ಗಣಿಗಾರಿಕೆಗೆ ಪರವಾನಿಗೆ ಹೊಂದಿದ ವರು, ಪಟ್ಟಸ್ಥಳದ ಮಾಲೀಕರು ಮುಂಜಾಗ್ರತೆ ಕೈಗೊಳ್ಳಬೇಕು. ಇಲ್ಲವಾದರೆ ಅವರೇ ಹೊಣೆಗಾರರಾಗಿರುತ್ತಾರೆ. ಮಾಲಕರಿಲ್ಲದ ಹೊಂಡಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೆ.ಆರ್‌.ಐ.ಡಿ.ಎಲ್‌. ಮೂಲಕ ಬೇಲಿ ಅಳವಡಿಸುವ ಯೋಜನೆ ಇದೆ. ಕಳೆದ ಬಾರಿ ಜಿಲ್ಲೆಯಲ್ಲಿ 13 ಅಪಾಯಕಾರಿ ಹೊಂಡ ಗುರುತಿಸಿ ಬೇಲಿ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಆದರೆ ಅನುದಾನ ಕೊರತೆ ಇದೆ. ಅಪಾಯಕಾರಿ ಹೊಂಡಗಳ ಬಗ್ಗೆ ಸಾರ್ವಜನಿಕರಲ್ಲೂ ಜಾಗೃತಿ ಅಗತ್ಯ.  
 - ಪ್ರಿಯಾಂಕ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿಗಳು, ಉಡುಪಿ

– ವಿಶೇಷ ವರದಿ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.