ರಿಯಾಲಿಟಿಯೇಕೆ ಕಾಣಿಸುತ್ತಿಲ್ಲ?


Team Udayavani, May 24, 2018, 12:30 AM IST

x-12.jpg

ಕೇವಲ ಐದಾರು ವರ್ಷದ ಹೆಣ್ಣು ಮಗು ವೇದಿಕೆಯಲ್ಲಿ ಅಡ್ಡಾದಿಡ್ಡಿ ಕುಣಿಯುತ್ತಿರುತ್ತದೆ. ಜತೆಗೆ ಅದೇ ಪ್ರಾಯದ ಒಬ್ಬ ಹುಡುಗ ಕುಣಿಯುತ್ತಿರುತ್ತಾನೆ. ಹಿನ್ನೆಲೆಯಲ್ಲಿ ಅಬ್ಬರದ ಸಂಗೀತ ಕೇಳಿ ಬರುತ್ತದೆ. ಎಂತಹ ಹಾಡು ಗೊತ್ತೇ? ಯಾರಿಗೂ ಮತ್ತೇರಿಸುವಂತಹ ಜೋಶ್‌ ಹಾಡು. ಪುಟ್ಟ ಹುಡುಗ ಪುಟ್ಟ ಹುಡುಗಿಯ ಸೊಂಟ ಹಿಡಿದು ಹಾಡಿಗೆ ತಕ್ಕ ಹೆಜ್ಜೆ ಹಾಕುತ್ತಾ ಕುಣಿಯತೊಡಗುತ್ತಾನೆ. ಇಬ್ಬರ ಮುಖದಲ್ಲಿ ಒಂದು ರೀತಿಯ ಮಾದಕ ಮಂದಹಾಸ. 

ಸಂವಿಧಾನದ ಪ್ರಕಾರ ಯಾರಾದರೂ ಇತರರ ಜೀವನದ ಪರಿಧಿಯನ್ನು ಅನಗತ್ಯವಾಗಿ ಪ್ರವೇಶಿಸಿದರೆ ಅದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಂತೆ. ಇದು ಒಂದು ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಶಾರೀರಿಕವಾಗಿ ಕೊಡುವ ತೊಂದರೆ ಹಲ್ಲೆ ಶಿಕ್ಷಾರ್ಹ ಅಪರಾಧ. ಆದರೆ ಮಾನಸಿಕವಾಗಿ ಮಾಡುವ ಹಲ್ಲೆ? ಎಳೆಯ ಮುಗ್ಧ ಮನಸ್ಸುಗಳ ಮಾರಣ ಹೋಮ. ಇದಕ್ಕೆ ಏನನ್ನೋಣ? ಗರ್ಭದೊಳಗೆ ಮಗು ಹೇಗೆ ಹಂತ ಹಂತವಾಗಿ ಪೂರ್ಣ ಬೆಳೆದು ಹೊರ ಜಗತ್ತನ್ನು ಪ್ರವೇಶಿಸುತ್ತದೋ, ಅದೇ ರೀತಿ ಬೆಳವಣಿಗೆಗೆ ಒಳಪಡುವ ಮನಸ್ಸೂ ಕೂಡಾ ಶೈಶಾವಸ್ಥೆಯಿಂದ ಪ್ರಬುದ್ಧತೆಯವರೆಗೆ ಹಂತ ಹಂತವಾಗಿ ಬೆಳೆಯಬೇಕಷ್ಟೆ. ಬದಲಾಗಿ ಶೈಶಾವಸ್ಥೆ ಯಲ್ಲಿಯೇ ಪ್ರಬುದ್ಧತೆಯನ್ನು ಹೇರತೊಡಗಿದರೆ ಅದು ಆ ಮನಸ್ಸಿನ ಮೇಲೆ ನಾವು ಮಾಡುವ ಹಲ್ಲೆ, ಆಂತರಿಕವಾಗಿ ಮುಗಿಸಿ ದರೆ ಅದೂ ಹತ್ಯೆ ಅಲ್ಲವೇ? ಮೊದಲನೆಯದು ಶಾರೀರಿಕ ಕೊಲೆ, ಎರಡನೆಯದು ಮಾನಸಿಕ ಕೊಲೆ. ಇದಕ್ಕೇನು ಶಿಕ್ಷೆ? 

ಏಕೆ ಈ ಮಾತುಗಳನ್ನು ಹೇಳಿದೆನೆಂದರೆ ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಈ ರೀತಿಯಾಗಿ ಮಕ್ಕಳನ್ನು ಮಾನಸಿಕವಾಗಿ ಹಿಂಸಿಸ ಲಾಗುತ್ತಿದೆ. ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ, ಅದರಲ್ಲೂ ನಿರ್ದಿಷ್ಟವಾಗಿ ಹಿಂದಿ ಭಾಷೆಯ ರಿಯಾಲಿಟಿ ಶೋಗಳನ್ನು ನೋಡಿ ದರೆ ನೀವು ಬೆಚ್ಚಿಬೀಳುವುದೂ ಖಂಡಿತ. ಅದನ್ನು ನೋಡಿ ಖುಷಿಪಡುವ ವರ್ಗವೂ ಇದೆ ಅನ್ನುವುದು ಒಂದು ವಾಸ್ತವ. ಆದರೆ ಸರಳ, ಮೌಲ್ಯಾಧಾರಿತ, ಸಭ್ಯ ಮನಸ್ಸು ಇಂತಹ ಅಸಂಬದ್ಧ ಪ್ರದರ್ಶನಗಳನ್ನು ಜೀರ್ಣಿಸಿಕೊಳ್ಳುವುದು ಕಠಿಣವೇ ಸರಿ. ಕೇವಲ ಐದಾರು ವರ್ಷದ ಹೆಣ್ಣು ಮಗು ವೇದಿಕೆಯಲ್ಲಿ ಅಡ್ಡಾದಿಡ್ಡಿ ಕುಣಿಯುತ್ತಿರುತ್ತದೆ. ಜತೆಗೆ ಅದೇ ಪ್ರಾಯದ ಒಬ್ಬ ಹುಡುಗ ಕುಣಿಯುತ್ತಿರುತ್ತಾನೆ. ಇಬ್ಬರ ನಡುವೆ ಮೈಕ್‌ ಹಿಡಿದು ನಿರೂಪಕಿ ಮಕ್ಕಳನ್ನು ಹುರಿದುಂಬಿಸುತ್ತಾ ಪುಂಖಾನುಪುಂಖವಾಗಿ ಮಾತಿನ ಮುತ್ತುಗಳನ್ನು ಉರುಳಿಸುತ್ತಿರುತ್ತಾಳೆ. ಹಿನ್ನೆಲೆಯಲ್ಲಿ ಅಬ್ಬರದ ಸಂಗೀತ ಕೇಳಿ ಬರುತ್ತದೆ. ಎಂತಹ ಹಾಡು ಗೊತ್ತೇ? ಯಾರಿಗೂ ಮತ್ತೇರಿಸುವಂತಹ ಜೋಶ್‌ ಹಾಡು.  ಪುಟ್ಟ ಹುಡುಗ ಪುಟ್ಟ ಹುಡುಗಿಯ ಸೊಂಟ ಹಿಡಿದು ಹಾಡಿಗೆ ತಕ್ಕ ಹೆಜ್ಜೆ ಹಾಕುತ್ತಾ ಕುಣಿಯತೊಡಗುತ್ತಾನೆ. ಇಬ್ಬರ ಮುಖದಲ್ಲಿ ಒಂದು ರೀತಿಯ ಮಾದಕ ಮಂದಹಾಸ. 

ಇನ್ನೊಂದು ದೃಶ್ಯ: ನಿರೂಪಕಿ ಪುಟ್ಟ ಹುಡುಗನೊಬ್ಬನನ್ನು ಮಾತನಾಡಿಸುತ್ತಿರುತ್ತಾಳೆ. ಮೈ ಕುಲುಕಿಸುತ್ತ, ಮಾತನಾಡುವ ನಿರೂಪಕಿ ಕುಚೇಷ್ಟೆಯ ನಗು ಸೂಸುತ್ತಿರುವ ಹುಡುಗನನ್ನು ಕೇಳುತ್ತಾಳೆ, ನಿನಗೆ ಹುಡುಗಿ ಅಂದರೆ ಇಷ್ಟಾನಾ? ಆಕೆಯನ್ನು ಲವ್‌ ಮಡುತ್ತೀಯಾ?  ಹುಡುಗ ಕಣ್ಣು ಮಿಟುಕಿಸಿ ಹೇಳುತ್ತಾನೆ, ಇಲ್ಲ, ನಾನು ನಿಮ್ಮನ್ನು ಲವ್‌ ಮಾಡುತ್ತೇನೆ. ಕೈ ಕಾಲು ಮುಖಗಳೆ ಉದುರಿ ಹೋಗುವಂತೆ ನಿರೂಪಕಿ ನಗುತ್ತಾಳೆ. ಸೂರು ಹಾರಿ ಹೋಗುವಂತೆ ಅಲ್ಲಿನ ಪ್ರೇಕ್ಷಕರು ನಗುತ್ತಾರೆ. 

ಇದೇನಾ ನಾವು ಕಲಿತ ಸಂಸ್ಕೃತಿ? ಇದೇನಾ ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ? ಸಭ್ಯತೆ ಸತ್ತುಹೋಗುವ ಸನ್ನಿವೇಶಗಳಿವು. ಆಶ್ಚರ್ಯವೇನೆಂದರೆ, ಇಂತಹ ರಿಯಾಲಿಟಿ ಶೋಗಳಿಗೆ ಹೆತ್ತವರು ತಮ್ಮ ಮಕ್ಕಳನ್ನು ಹೆಮ್ಮೆಯಿಂದ ಕಳುಹಿಸುತ್ತಾರೆ. ಆರರ ಪುಟ್ಟ ಪೋರ ಇಪ್ಪತ್ತಾರರ ಯುವಕನಂತೆ ಮಾತಾಡುತ್ತಾನೆ, ವರ್ತಿಸುತ್ತಾನೆ. ಅದೇ ವಯಸ್ಸಿನ ಪೋರಿ ಆಗಷ್ಟೇ ಪ್ರಬುದ್ಧತೆಯನ್ನು ಪಡೆದಂತೆ ಪ್ರಣಯದಾಟವಾಡುತ್ತಾಳೆ.

ಮನೆಯೊಳಗಣ ಹಾಲಿನಲ್ಲಿ ಎಲ್ಲರೊಂದಿಗೆ ಕುಳಿತು ಇಂತಹ ಕಾರ್ಯಕ್ರಮಗಳನ್ನು ನೋಡುವ ದುರ್ದೆಶೆ ಈಗಿನ ಪ್ರೇಕ್ಷಕನದ್ದು. ವಿಷಯ ವಾಸನೆಯ ಪ್ರಣಯ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ಮುಗ್ಧತೆಯನ್ನು , ಮಾನಸಿಕ ಸ್ನಿಗ್ಧತೆಯನ್ನು ಕತ್ತು ಹಿಸುಕಿ ಕೊಲ್ಲುವ ಇಂತಹ ಕಾರ್ಯಕ್ರಮಗಳು ಅಪರಾಧವೇ ಅಲ್ಲವೇ? ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವ ಪ್ರಸಾರ ಭಾರತಿ ಕಾಯಿದೆ ಇದೆ . ಆದರೆ ಅದೂ ಕೂಡ ಮಿತಿಯೊಳಗೆ ಮಾತನಾಡಿ ಮತ್ತೆ ಮೌನವಹಿಸುತ್ತದೆ. ಮುದ್ರಣ ಮಾಧ್ಯಮದಲ್ಲಿ ಇಂತಹ ಕೆಲವು ನ್ಯೂನತೆಗಳು ಗೋಚರಿಸಿದಾಗ ಅದು ನಿರ್ಣಾಯಕ ನಿರ್ಧಾರಗಳನ್ನು ತಳೆಯಲು ವಿಫ‌ಲವಾ ದುದೂ ಒಂದು ವಾಸ್ತವ. ಅದರ ಪ್ರತಿಕ್ರಿಯೆ ಗಾಯವನ್ನು ಗರಿಯಿಂದ ಸವರಿದಂತೆ. ಸಮಾಧಾನಕರ ವಿಷಯವೆಂದರೆ, ಮುದ್ರಣ ಮಾಧ್ಯಮ ಮಾತ್ರ ಒಂದಿಷ್ಟು ಶುದ್ಧತೆಯನ್ನು ಉಳಿಸಿಕೊಂಡಿದೆ. ಆದರೆ ದೃಶ್ಯ ಮಾಧ್ಯಮಗಳಿಗೆ ಯಾವುದೇ ಲಗಾಮು ಇಲ್ಲ. ಹೀಗಾಗಿ ಈ ರೀತಿಯ ಅಸಂಬದ್ಧ, ತರ್ಕರಹಿತ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ದೃಶ್ಯ ಮಾಧ್ಯಮಗಳಿಗೆ ಅಂಕುಶ ಹಾಕುವ ಪ್ರಬಲವಾದ ವ್ಯವಸ್ಥೆಯೊಂದರ ಅಗತ್ಯವಿದೆ.

ಬಿ.ಎನ್‌. ರಾಮಚಂದ್ರ 

ಟಾಪ್ ನ್ಯೂಸ್

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.