ಗೂಳಿ ರೂಪದ ಜಾಕನಪಲ್ಲಿ ಶಿವಯೋಗೀಶ್ವರರು ಲಿಂಗೈಕ್ಯ
Team Udayavani, May 25, 2018, 11:55 AM IST
ಸೇಡಂ: ತಾಲೂಕಿನ ಜಾಕನಪಲ್ಲಿ ಶ್ರೀ ಗವಿಸಿದ್ಧಲಿಂಗೇಶ್ವರ ದೇವಾಲಯದ ನಾಲ್ಕನೇ ಪೀಠಾಧಿಧೀಶ್ವರ ಎಂದೇ
ಕರೆಯಿಸಿಕೊಳ್ಳುತ್ತಿದ್ದ ಗೂಳಿ ರೂಪದ ಶಿವಯೋಗೀಶ್ವರರು ಲಿಂಗೈಕ್ಯರಾಗಿದ್ದು, ಅವರ ಅಂತ್ಯಸಂಸ್ಕಾರ ಗುರುವಾರ
ಸಾವಿರಾರು ಭಕ್ತರ ಮಧ್ಯೆ ನಡೆಯಿತು.
ನೂರಾರು ಭಕ್ತರು ಬುಧವಾರ ರಾತ್ರಿ ಲಿಂಗೈಕ್ಯರಾದ ಶಿವಯೋಗೀಶ್ವರರ ಅಂತಿಮ ದರ್ಶನ ಪಡೆದರು. ಇಷ್ಟಾರ್ಥ
ಸಿದ್ಧಿಸುವ ತಮ್ಮ ನಿಜ ದೈವನ ನೆನೆದು ಕಣ್ಣೀರು ಹಾಕಿದರು. ಜಾಕಪನಲ್ಲಿಯಲ್ಲಿರುವ ಶ್ರೀ ಗವಿಸಿದ್ಧಲಿಂಗೇಶ್ವರ
ದೇವಾಲಯ ಇತಿಹಾಸ ಹೊಂದಿದೆ. ದೇವಾಲಯದ ಮೊದಲ ಶಿವಯೋಗೀಶ್ವರರು ಲಿಂಗೈಕ್ಯರಾದ ನಂತರ ಪ್ರತಿ ಬಾರಿ ಗೂಳಿರೂಪದಲ್ಲಿ ಜನಿಸಿ ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದರು ಎಂಬುದು ಭಕ್ತರ ನಂಬಿಕೆ.
ಕಲಕಂಭ ಗ್ರಾಮದ ವಿಶ್ವನಾಥರೆಡ್ಡಿ ಎಂಬುವರು ಶಿವಯೋಗೀಶ್ವರರು ಚಿಕ್ಕ ಕರುವಿದ್ದಾಗ ದೇವಾಲಯಕ್ಕೆ ಬಿಟ್ಟಿದ್ದರು. ಆವಾಗಿನಿಂದಲೂ ದೇವಾಲಯದ ಹಿಂದಿನ ಶಿವಯೋಗೀಶ್ವರರು ಮಾಡುವ ಪೂಜೆ ಪುನಸ್ಕಾರಗಳಂತೆಯೇ ಈ ಗೂಳಿಯೂ ಮಾಡ ತೊಡಗಿತ್ತು. ಭಜನೆ ನಡೆಯುವಾಗ ಶ್ರೀಗಳು ಪಾಲಿಸುತ್ತಿದ್ದ ಪ್ರತಿಯೊಂದು ಕ್ರಿಯಾಚಾರವನ್ನು
ಗೂಳಿ ಪಾಲಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಭಜನೆ ಪೂರ್ಣಗೊಂಡು ಪೂಜೆ ನೆರವೇರುವವರೆಗೂ ಪಕ್ಕದಲ್ಲಿನ
ನೆಲ ಹಾಸು ಮೇಲೆ ನಿಂತು ನಂತರ ಭಕ್ತರಿಂದ ಪೂಜೆ ಸ್ವೀಕರಿಸಿ ನಿರ್ಗಮಿಸುತ್ತಿತ್ತು.
ಶ್ರಾವಣ ಮಾಸದಲ್ಲಿ ನಡೆಯುವ ಪರ್ವ ಎಂಬ ಧಾರ್ಮಿಕ ಕಾರ್ಯದ ಮರುದಿನ ಭಕ್ತರು ಮುಂದಿಟ್ಟ ಬೇಡಿಕೆಗಳು
ಈಡೇರುವುದಾದರೆ ಯಾರ ಸಹಾಯವೂ ಇಲ್ಲದೆ ಅವರ ಮನೆಗೆ ತೆರಳಿ ದೇವರ ಮನೆ ಎದುರು ನಿಲ್ಲುತ್ತಿದ್ದ ಬಸವಣ್ಣ
(ಗೂಳಿ) ಪೂಜೆ ಸ್ವೀಕರಿಸಿಯೇ ಹೊರ ಬರುತ್ತಿತ್ತು. ದುಷ್ಟ ಶಕ್ತಿಗಳಿಂದ ದೂರವಿರಲು ತಮ್ಮ ಮಕ್ಕಳನ್ನು ರಸ್ತೆ ಮೇಲೆ
ಮಲಗಿಸಿದಾಗ ಯಾರನ್ನೂ ತುಳಿಯದೇ ಹೆಜ್ಜೆ ಇಡುವ ಬಸವಣ್ಣ ಭಕ್ತರು ಕಷ್ಟ ದೂರ ಮಾಡುವ ನಿಜ ದೈವವಾಗಿದ್ದರು
ಎಂಬ ನಂಬಿಕೆ ಜನರಲ್ಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
Prajwal Revanna: ಪ್ರಜ್ವಲ್ ಶೀಘ್ರ ಬಂಧನ: ಡಾ| ಜಿ. ಪರಮೇಶ್ವರ್
Kamalapur: ಜಾತಿ ನಿಂದನೆ ಕೇಸ್ಗೆ ಹೆದರಿ ಯುವಕ ಆತ್ಮಹತ್ಯೆ
ಬಿಜೆಪಿ ವರ್ಚಸ್ಸು ಕುಸಿತ; ಸೋಲಿನ ಭೀತಿಯಿಂದ ಮೋದಿ ದ್ವೇಷ ಭಾಷಣ: ಬಿ.ಆರ್.ಪಾಟೀಲ್
MUST WATCH
ಹೊಸ ಸೇರ್ಪಡೆ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು
Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ
IPL: ಪ್ಲೇ ಆಫ್ ರೇಸ್ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್ ಬೌಲರ್