ಎಚ್ಸಿಎಲ್ ಇಂಜಿನಿಯರ್ ಅಪಹರಣ; 15 ಲಕ್ಷ ಒತ್ತೆಹಣಕ್ಕೆ ಬೇಡಿಕೆ
Team Udayavani, May 26, 2018, 10:57 AM IST
ಗಾಜಿಯಾಬಾದ್ : ನೋಯ್ಡಾದಲ್ಲಿನ ಎಚ್ಸಿಎಲ್ ಟೆಕ್ನಾಲಜಿ ಲಿಮಿಟೆಡ್ನ ಇಂಜಿನಿಯರ್ ರಾಜೀವ್ ಕುಮಾರ್ ಅವರನ್ನು ಒತ್ತೆ ಹಣಕ್ಕಾಗಿ ಅಪಹರಿಸಿರುವ ಘಟನೆ ನಿನ್ನೆ ಶುಕ್ರವಾರ ನಡೆದಿದೆ.
ಗಾಜಿಯಾಬಾದ್ ನಿವಾಸಿಯಾಗಿರುವ ರಾಜೀವ್ ಕುಮಾರ್ ಗುರುವಾರ ತಡರಾತ್ರಿ ವರೆಗೂ ಮನೆಗೆ ವಾಪಸಾಗಿರಲಿಲ್ಲ. ಅವರ ಪತ್ನಿಗೆ ಅಪಹರಣಕಾರರಿಂದ ಮೊಬೈಲ್ ಮೆಸೇಜ್ ಬಂದಿದ್ದು ಅದರಲ್ಲಿ ಅವರು 15 ಲಕ್ಷ ರೂ. ಒತ್ತೆಹಣದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಪೊಲೀಸರಿಗೆ ವಿಷಯ ತಿಳಿಸಿದರೆ ನಿಮ್ಮ ಪತಿಯನ್ನು ಕೊಲ್ಲಲಾಗುವುದು ಎಂದು ಅಪಹರಣಕಾರರು ಬೆದರಿಕೆ ಹಾಕಿದ್ದಾರೆ. ಆದರೂ ಬೇರೆ ಉಪಾಯವಿಲ್ಲದೆ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿಯನ್ನು ಸುರಕ್ಷಿತವಾಗಿ ಪಾರು ಮಾಡುವ ಭರವಸೆಯನ್ನು ಪೊಲೀಸ್ ಅಧಿಕಾರಿ ಆತಿಷ್ ಕುಮಾರ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ