ಗಿರಡ್ಡಿ ಶ್ರಮಿಸಿದು ಎಡ-ಬಲದ ಸಮತೋಲನಕ್ಕೆ: ಪ್ರೊ| ಚಂಪಾ


Team Udayavani, May 27, 2018, 4:48 PM IST

27-may-19.jpg

ಧಾರವಾಡ: ಹಿರಿಯ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ್‌ ಅವರಿಗೆ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌, ಮನೋಹರ ಗ್ರಂಥ ಮಾಲೆ, ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌, ಸಾಹಿತ್ಯ ಪ್ರಕಾಶನ, ಚಿತ್ರಾ ಫಿಲ್ಮ್ ಸೊಸೈಟಿ, ರಂಗಾಯಣ ಸೇರಿದಂತೆ ವಿವಿಧ ಸಂಘ-ಸಂಸ್ಥೆಯಿಂದ ಶನಿವಾರ ನುಡಿ ನಮನ ಸಲ್ಲಿಸಲಾಯಿತು.

ನಗರದ ರಂಗಾಯಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ದೇಶದಲ್ಲಿ ಎಡ-ಬಲಗಳ ಮಧ್ಯೆ ಬಹುದೊಡ್ಡ ಕಂದಕ ನಿರ್ಮಾಣಗೊಳ್ಳುತ್ತಿರುವ ಈ ಸಮಯದಲ್ಲಿ ಅವೆರಡನ್ನೂ ಸಮತೋಲಿಸುವ ಮಹತ್ವದ ಭಾರ ಗಿರಡ್ಡಿ ಮೇಲಿತ್ತು. ಅವರು ಜೀವನಪೂರ್ತಿ ಯಾವುದೇ ಇಸಂಗಳಿಗೆ ಜೋತು ಬೀಳಲಿಲ್ಲ ಎಂದರು.

ಡಾ| ಗಿರಡ್ಡಿ ಬದುಕಿನುದ್ದಕ್ಕೂ ಒಂದೇ ವೇಗ, ಒಂದೇ ಲಯ ಹಾಗೂ ಸಮಾಧಾನವಾಗಿ ಹರಿಯುವ ನದಿಯಂತೆ ಬಾಳಿದ. ರಾಜ್ಯ, ದೇಶದಲ್ಲಿ ನಡೆದ ಯಾವ ಚಳವಳಿಯಲ್ಲೂ ನೇರವಾಗಿ ಭಾಗಿಯಾಗಲಿಲ್ಲ. ಯಾವುದೇ ಚಳವಳಿ ಬಗ್ಗೆಯೂ ನಿರ್ದಿಷ್ಟವಾಗಿ ಮಾತನಾಡಬಲ್ಲವನಾಗಿದ್ದ, ಅಂತಹ ಅಪರೂಪದ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.

ಸಾಹಿತಿ ಗುರುಲಿಂಗ ಕಾಪಸೆ ಮಾತನಾಡಿ, ಗಿರಡ್ಡಿ ಅವರ ಓದು ವ್ಯಾಪಕ ಹಾಗೂ ವಿಶಿಷ್ಟವಾಗಿತ್ತು. ಗೋಕಾಕ ಅವರಿಗಿಂತ ಗಿರಡ್ಡಿ ಅವರು ಒಂದು ಹೆಜ್ಜೆ ಮುಂದಿದ್ದರು. ವ್ಯಾಪಕ ಓದು ಅಳವಡಿಸಿಕೊಂಡಿದ್ದರಿಂದಲೇ ಅವರು ವಿಮರ್ಶಕರಾಗಲು ಅನುಕೂಲವಾಯಿತು. ಎಂ.ಎಂ. ಕಲಬುರ್ಗಿ ಹಾಗೂ ಡಾ| ಗಿರಡ್ಡಿ ಗೋವಿಂದರಾಜ್‌ ಅವರನ್ನು ಕಳೆದುಕೊಂಡಿರುವುದು ಅಪಾರ ನಷ್ಟವಾದಂತಾಗಿದೆ ಎಂದರು.

ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಗಿರಡ್ಡಿ ಹಾಗೂ ನನ್ನದು 62 ವರ್ಷಗಳ ಸ್ನೇಹ. ಅವನೊಂದಿಗೆ ಮಾಡದಿದ್ದ ಚರ್ಚೆಗಳಿರಲಿಲ್ಲ. ಎಂದೂ ಅವನು ತನ್ನತನವನ್ನು ಬಿಟ್ಟು ಕೊಡಲಿಲ್ಲ. ಕಾಲೇಜು ದಿನಗಳಿಂದಲೇ ವಿಮರ್ಶೆ ಗುಣ ಬೆಳೆಸಿಕೊಂಡ ಗಿರಡ್ಡಿ, ನಮ್ಮ ನಡುವಿನ ಮಧ್ಯಮವೇ ಆಗಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಚನ್ನವೀರ ಕಣವಿ ಮಾತನಾಡಿ, ಈ ವರ್ಷದ ಅಡ್ಡ ಮಳೆ ಹಾಗೂ ಸಿಡಿಲಿನ ಆಘಾತಕ್ಕಿಂತ ಗಿರಡ್ಡಿ ಅವರ ಸಾವು ಬಹು ದೊಡ್ಡ ಆಘಾತ ನೀಡಿದೆ. ಅಪಾರ ಪ್ರತಿಭೆ ಹೊಂದಿದ್ದ ಗಿರಡ್ಡಿ ಅವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ವಿಮರ್ಶೆಯಲ್ಲಿ ಪ್ರಖರ ಹಾಗೂ ಪಕ್ವವಾಗಿದ್ದರು. ಸಾಹಿತ್ಯ ಸಂಭ್ರಮ ಯಶಸ್ಸಿಗೆ ಅವರೇ ಕಾರಣ ಎಂದು ಹೇಳಿದರು.

ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ| ವೀಣಾ ಸಂಕನಗೌಡರ, ರಮಾಕಾಂತ್‌ ಜೋಶಿ, ಅನ್ವೇಷಣಾ ಕೂಟದ ನರಸಿಂಹ ಪರಾಂಜಪೆ, ಆಲೂರು ಟ್ರಸ್ಟ್‌ನ ಟ್ರಸ್ಟಿ ವೆಂಕಟೇಶ ದೇಸಾಯಿ, ಅಭಿನಯ ಭಾರತಿಯ ಅರವಿಂದ ಕುಲಕರ್ಣಿ, ಶಶಿಧರ ತೋಡ್ಕರ, ಆನಂದ ಜುಂಝರವಾಡ, ಎಂ.ಎ. ಸುಬ್ರಹ್ಮಣ್ಯ, ಪ್ರಕಾಶ ಭಟ್‌, ಬಸು ಬೇವಿನಗಿಡದ, ರಾಘವೇಂದ್ರ ಪಾಟೀಲ, ರಜನಿ ಗರುಡ, ಬಿ.ಎಲ್‌. ಪಾಟೀಲ, ನಿರ್ಮಲಾ ಹಂಚಿನಮನಿ, ಮಾಲತೇಶ ಹುಬ್ಬಳ್ಳಿ ಮಾತನಾಡಿದರು. ಸಮೀರ ಜೋಶಿ, ಇತರರು ಇದ್ದರು. ಹಾ.ವೆ. ಕಾಖಂಡಕಿ ನಿರೂಪಿಸಿದರು. 

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್‌ಐಆರ್‌ ಹಾಕಲಿಲ್ಲವೇ?’

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.