ವಿದ್ಯುತ್ ಅವಘಡ: ವ್ಯಕ್ತಿ ಸಾವು
Team Udayavani, May 28, 2018, 6:12 PM IST
ನಾಲತವಾಡ: ಗಾಳಿ ರಭಸಕ್ಕೆ ವಿದ್ಯುತ್ ತಂತಿಯೊಂದು ಹೊಟೇಲ್ ಶೆಡ್ ಮೇಲೆ ಹರಿದು ಬಿದ್ದ ನಡೆದ ವಿದ್ಯುತ್ ಅವಘಡದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು 6 ಜನ ಗಾಯಗೊಂಡ ಘಟನೆ ಪಟ್ಟಣದ ಜಗದೇವ ನಗರದ ತಾಳಿಕೋಟೆ ರಸ್ತೆಯಲ್ಲಿ ರವಿವಾರ ನಡೆದಿದೆ.
ಗಾಳಿ ಜೋರಾಗಿ ಬಿಸಿದ್ದರಿಂದ ವಿದ್ಯುತ್ ತಂತಿಗಳು ಪಟ್ಟಣದ ವೀರಭದ್ರಪ್ಪ ಹೆಬ್ಟಾಳ ಎಂಬುವರ ಹೊಟೇಲ್ ಮೇಲೆ ಹರಿದು ಬಿದ್ದಿದ್ದು ಹೊಟೇಲ್ನಲ್ಲಿದ್ದ ಮಾಲೀಕ ಹಾಗೂ ಪತ್ನಿ, ಪುತ್ರ ಸೇರಿ ಸುಮಾರು 7 ಜನರಿಗೂ ವಿದ್ಯುತ್ ಸ್ಪರ್ಶಿಸಿದೆ.
ಗಾಯಗೊಂಡ ಗಂಗಪ್ಪ ಚಲವಾದಿ, ಬಾಲಕ ಶಂಕ್ರಪ್ಪ ಹೆಬ್ಟಾಳ, ದುರ್ಗಪ್ಪ ವಡ್ಡರ, ಹೊಟೇಲ್ ಮಾಲೀಕನ ಪತ್ನಿ ಪದ್ಮಾವತಿ ಅವರಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಗೊಂಡಿದ್ದ ಗದ್ದೆಪ್ಪ ಬಂಡಿವಡ್ಡರ (52) ಮುದ್ದೇಬಿಹಾಳ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಶಿವಪ್ಪ ದಿಂಡವಾರ ಸ್ಥಿತಿ ಚಿಂತಾಜನಕವಾಗಿದೆ. ಇನ್ನುಳಿದ ಮೂವರು ಗಾಯಾಳುಗಳನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ