ಗ್ಲಾಮರ್ ಲುಕ್ನ ಬೆಡಗಿಯ ‘ಕಾರಣಿಕ’ದ ಕಥೆ!
Team Udayavani, May 31, 2018, 4:14 PM IST
ತುಳು ಆಲ್ಬಂ ಮೂಲಕವೇ ಬಣ್ಣದ ಲೋಕಕ್ಕೆ ಕಾಲಿರಿಸಿ ಬಳಿಕ, ತೆಲುಗು, ಕನ್ನಡ ಸಿನೆಮಾದಲ್ಲಿ ವಿಭಿನ್ನ ರೋಲ್ನಲ್ಲಿ ಮಿಂಚುತ್ತಿದ್ದ ಕರಾವಳಿಯ ಬೆಡಗಿ ಚಾಂದಿನಿ ಅಂಚನ್ ಈಗ ತುಳು ಸಿನೆಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷವೆಂದರೆ ಗ್ಲಾಮರ್ ಲುಕ್ನಲ್ಲಿ ಮಿಂಚುತ್ತಿದ್ದ ಚಾಂದಿನಿ ಈಗ ಪಕ್ಕಾ
‘ಕಾರಣಿಕ ಕಥೆ’ಯಾಧಾರಿತ ತುಳು ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮಂಗಳೂರಿನ ಸೈಂಟ್ ಆ್ಯನ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಚಾಂದಿನಿ ಕುವೆಂಪು ವಿ.ವಿ.ಯಲ್ಲಿ ಬಿಎಸ್ಸಿ ಮುಗಿಸಿದ್ದರು. ಶಾಲಾ-ಕಾಲೇಜು ದಿನದಲ್ಲಿ ಉತ್ತಮ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಅವರು ಮಾಡೆಲಿಂಗ್ನಲ್ಲೂ ಕೈಯಾಡಿಸಿದ್ದಾರೆ. 2014ರಲ್ಲಿ ಹೊಸದಿಲ್ಲಿಯಲ್ಲಿ ಜರಗಿದ ಮಿಸ್ ಗ್ಲೋರಿ ಆಫ್ ಇಂಡಿಯಾದಲ್ಲಿಯೂ ಭಾಗವಹಿಸಿದ್ದಾರೆ.
ಮಂಗಳೂರಿನ ಯುವ ಉದ್ಯಮಿ ಮಹೇಂದ್ರ ಕುಮಾರ್ ಅವರು ತಮ್ಮ ‘ಫಿಯೋನಿಕ್ಸ್ ಫಿಲಂಸ್’ ಲಾಂಛನದ ಮೂಲಕ ಪ್ರಥಮ ಸಿನೆಮಾವಾಗಿ ನಡೆಸುತ್ತಿರುವ ‘ಸತ್ಯದಪ್ಪೆ ಕಲ್ಲುರ್ಟಿ’ ಸಿನೆಮಾದಲ್ಲಿ ‘ಕಲ್ಲುರ್ಟಿ’ ಪಾತ್ರದಲ್ಲಿ ಅವರು ಮಿಂಚುತ್ತಿದ್ದಾರೆ.
ಈಗಾಗಲೇ ಶೇ. 50ರಷ್ಟು ಶೂಟಿಂಗ್ ಕಂಡಿರುವ ಈ ಸಿನೆಮಾ ಮಳೆ ಮುಗಿದ ಬಳಿಕ ಎರಡನೇ ಹಂತದ ಶೂಟಿಂಗ್ ಕಾಣಲಿದೆ. ಭಕ್ತ ಜನರ ರಕ್ಷೆ ಮತ್ತು ದುಷ್ಟ ಜನರ ಶಿಕ್ಷೆಗಾಗಿ ಕಲ್ಲುರ್ಟಿ ತಾಯಿ ಧರೆಗಿಳಿದು ಬರಲು ಕಾರಣವಾಗಿದೆ. ಈ ಕುರಿತ ತಾಯಿಯ ಹುಟ್ಟು, ಬೆಳೆದು ಬಂದ ಬಗೆ, ತುಳುನಾಡಿನಲ್ಲಿ ನೆಲೆಯಾದ ಕಥೆಯನ್ನು ಒಳಗೊಂಡಂತೆ ‘ಸತ್ಯದಪ್ಪೆ ಕಲ್ಲುರ್ಟಿ’ ಮೂಡಿಬರುತ್ತಿದೆ.
ತುಳು ಆಲ್ಬಂನಲ್ಲಿ ಮೊದಲು ಕಾಣಿಸಿದ ಚಾಂದಿನಿ ಬಳಿಕ ತೆಲುಗು ಸಿನೆಮಾದತ್ತ ಕಣ್ಣಿಟ್ಟಿದ್ದರು. ಅಲ್ಲಿ ‘ರುದ್ರ ಐಪಿಎಸ್’ ಸಿನೆಮಾದಲ್ಲಿ ಚಾಂದಿನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅನಂತರ ಕನ್ನಡಕ್ಕೆ ಆಗಮಿಸಿದ ಚಾಂದಿನಿ ಉಪೇಂದ್ರ ಅವರ ಜತೆಗೆ ಸಿನೆಮಾ ಮಾಡಿದರು. ‘ಹೋಂ ಮಿನಿಸ್ಟರ್’ ಸಿನೆಮಾದಲ್ಲಿ ಕಾಣಿಸಿಕೊಂಡ ಚಾಂದಿನಿ ಇನ್ನಷ್ಟು ಸಿನೆಮಾದ ಆಫರ್ನಲ್ಲಿದ್ದಾರೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್