ಅಮೃತ ಸಂಜೀವಿನಿ; ಅಡ್ಯಾರ್‌ನಲ್ಲಿ ಎರಡು ಕುಟುಂಬಗಳಿಗೆ ನೆರವು


Team Udayavani, Jun 5, 2018, 4:10 AM IST

adyaar-4-6.jpg

ಮಹಾನಗರ: ಶ್ರೀ ರಾಜಶೇಖರಾನಂದ ಸ್ವಾಮೀಜಿಯ ಮಾರ್ಗದರ್ಶನದಿಂದ ಮುಂದುವರಿಯುತ್ತಿರುವ ‘ಅಮೃತ ಸಂಜೀವಿನಿ ಮಂಗಳೂರು’ ಸಂಘಟನೆಯೂ ಎರಡು ಕುಟುಂಬಗಳಿಗೆ ಮಾಸಿಕ ಯೋಜನೆಯನ್ನು ಇತ್ತೀಚೆಗೆ ಅಡ್ಯಾರ್‌ ಗ್ರಾಮದ ಅಡ್ಯಾರ್‌ ಪದವಿನಲ್ಲಿ ಪ್ರದಾನಿಸಲಾಯಿತು. ಸಂಘಟನೆಯು ಸೇವಾಪಯಣದಲ್ಲಿ 33 ಮಾಸಿಕ ಯೋಜನೆ ಹಾಗೂ 68 ತುರ್ತು ಯೋಜನೆಯ ಮೂಲಕ 101 ಅಶಕ್ತ ಕುಟುಂಬಗಳಿಗೆ 24 ಲಕ್ಷ ರೂ.ಗಳಿಗೂ ಮಿಕ್ಕೂ ಸಹಾಯಧನವನ್ನು ವಿತರಿಸಿದೆ.

ಯೋಜನೆ 1: ಬಡತನದಲ್ಲೇ ಹುಟ್ಟಿದ ಮಾಧವ ಅವರು ದಿನ ಕೂಲಿ ಮಾಡುತ್ತಾ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಒಂದು ಹಳೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಪುತ್ರ ಡ್ರೈವರ್‌ ಕೆಲಸ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಮನೆಯ ಯಜಮಾನ ಮಾಧವ ಕಿಡ್ನಿ ವೈಫಲ್ಯಕ್ಕೆ ತುತ್ತಾದರು. ಎದೆಗುಂದದೆ ಸಾಲ ಮಾಡಿ ಒಂದು ಮನೆ ನಿರ್ಮಿಸಿದ ಆ ಕುಟುಂಬಕ್ಕೆ ಮನೆ ಯ ಯಜಮಾನಿಯ ಸಾವು ಇನ್ನಷ್ಟು ಅಧೀರರನ್ನಾಗಿಸಿತು. ಮನೆಯೊಡತಿಯ ಕಾರ್ಯಗಳೆಲ್ಲ ಮುಗಿಯುವ ಹೊತ್ತಿಗೆ ಮನೆಯ ಯಜಮಾನ ಮಾಧವ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ಸೇರುವಂತಾಯಿತು. ವಾರಕ್ಕೆ ಡಯಾಲಿಸಿಸ್‌ ಹಾಗೂ ವೈದ್ಯಕೀಯ ಖರ್ಚು ಎಲ್ಲ ಸೇರಿ 5,000 ಮಿಕ್ಕೂ ಖರ್ಚು ಬರುತ್ತಿದ್ದು ಮನೆಯ ಆಧಾರವಾದ ವಸಂತ್‌ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇವರ ಈ ನೋವಿಗೆ ಸ್ಪಂದಿಸುವ ಸಲುವಾಗಿ ಅಮೃತಸಂಜೀವಿನಿ ತನ್ನ ಮಾಸಿಕ ಯೋಜನೆಗೆ ಈ ಕುಟುಂಬವನ್ನು ಆರಿಸಿಕೊಂಡಿದೆ.

ಯೋಜನೆ-2: ಮಂಗಳೂರು ತಾಲೂಕಿನ ಅಡ್ಯಾರು ಗ್ರಾಮದ ಅಡ್ಯಾರ್‌ ಪದವು ನಿವಾಸಿಗಳಾದ ಸತೀಶ್‌ ಹಾಗೂ ಕುಟುಂಬ ತೀರಾ ಬಡತನದಲ್ಲೇ ಕಾಲ ಕಳೆಯುತ್ತಿದೆ. ಹೊಟ್ಟೆ ಪಾಡಿಗಾಗಿ ಮನೆಯ ಯಜಮಾನ ಕೂಲಿ ಕೆಲಸ ಮಾಡುತ್ತಿದ್ದರು. ಕೈ ತುಂಬಾ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಮನೆಯೊಡತಿ ಬೀಡಿ ಕಟ್ಟಿ ಗಂಡನ ಕಷ್ಟಕ್ಕೆ ಅಲ್ಪ ಮಟ್ಟಿಗೆ ಹೆಗಲಾಗುತ್ತಾರೆ. 2 ಹೆಣ್ಣು ಮಕ್ಕಳಿರುವ ಇವರು ಅನೇಕ ವರ್ಷಗಳಿಂದ ಒಂದು ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದು ಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಸಣ್ಣ ಮನೆ ಕಟ್ಟಲು ಹೊರಟಿರುವ ಈ ಹಿಂದೂ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಅಮೃತ ಸಂಜೀವಿನಿ ಸ್ವಲ್ಪ ಮಟ್ಟಿಗೆ ಹೆಗಲಾಗುವ ಉದ್ದೇಶದಿಂದ 33ನೇ ಯೋಜನೆಯನ್ನಾಗಿಸಿ ಸಮಾಜದ ಮುಂದಿಟ್ಟು ಸಶಕ್ತ ಸಮಾಜದಿಂದ ಕೂಡಿಸಿ ಸಂಗ್ರಹವಾದ ಒಟ್ಟು 60,000ರೂ. ಹಣವನ್ನು ಎರಡು ಕುಟುಂಬಗಳಿಗೆ ಎಲ್ಲಾ ಸಂಜೀವಿನಿಗಳ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲಾಯಿತು.

ಜತೆಗೆ ಅಮೃತಸಂಜೀವಿನಿ ತನ್ನ 66, 67, 68ನೇ ತುರ್ತು ಸೇವ ಯೋಜನೆಗಳನ್ನು ಪೂರೈಸಿದೆ. 66ನೇ ತುರ್ತು ಸೇವಾ ಯೋಜನೆಯಡಿ ಮಗುವಿನ ಅನಾರೋಗ್ಯದ ನಿಮಿತ್ತ ಅಶೋಕ್‌ ಕುತ್ತಾರ್‌ ಅವರಿಗೆ ಸಾಂತ್ವನ ಧನ 5,000ರೂ., 67ನೇ ತುರ್ತು ಸೇವ ಯೋಜನೆಯಡಿ ಅನಾರೋಗ್ಯದ ನಿಮಿತ್ತ ಸಿದ್ದಕಟ್ಟೆ ನಿವಾಸಿ ಜಾನಕಿ ಪೂಜಾರಿ ಅವರಿಗೆ ಚಿಕಿತ್ಸೆ ಖರ್ಚಿಗಾಗಿ ನೀಡಿದ ಧನ ಸಹಾಯ 5,000ರೂ., 68ನೇ ತುರ್ತು ಸೇವ ಯೋಜನೆಯಡಿ ವಿದ್ಯಾಭ್ಯಾಸದ ನಿಮಿತ್ತ ಬಡತನದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿನಿ ಫರಂಗಿಪೇಟೆಯ ಪೂರ್ಣಿಮಾ ಅವರಿಗೆ ಮಾಡಿದ ಸಹಾಯ 5,000 ರೂ.ಧನ ಸಹಾಯ ನೀಡುವುದರೊಂದಿಗೆ ಅಮೃತಸಂಜೀವಿನಿ 33ನೇ ತಿಂಗಳಲ್ಲಿ ಸಹೃದಯಿ ಸಂಜೀವಿನಿಗಳಿಂದ ಸಂಗ್ರಹಿಸಿದ ಒಟ್ಟು 75,000 ರೂ.ಗಳನ್ನು ಅಶಕ್ತರಿಗೆ ನೀಡಿದೆ ಎಂದು ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

16-

ಮೂಡುಬಿದಿರೆ: ಹಿಟಾಚಿಗಳ ಬ್ಯಾಟರಿ ಕಳವು

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; 40.40 ಲಕ್ಷ ರೂ. ಮೌಲ್ಯದ ಚಿನ್ನ ವಶ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.