24 ತಾಸು ನೀರಿಗೆ ಬೇಕು ಇನ್ನೂ 3 ವರ್ಷ


Team Udayavani, Jun 5, 2018, 2:41 PM IST

dvg-1.jpg

ದಾವಣಗೆರೆ: ನೀರಿನ ಸಮಸ್ಯೆ ದಾವಣಗೆರೆಯಲ್ಲಿ ಇಂದು, ನಿನ್ನೆಯದಲ್ಲ, ಈ ಹಿಂದೆ ನಗರದ ಜನತೆಗೆ ಬಾತಿ ಕೆರೆಯಿಂದ ನೀರು ಪೂರೈಸಲಾಗುತ್ತಿತ್ತು. ಕಾಲ ಕ್ರಮೇಣ ದೂರದರ್ಶನ ಕೆರೆ, ಕುಂದುವಾಡ ಕೆರೆ ಅಭಿವೃದ್ಧಿಯಾದವು. ಇದರ ಜೊತೆ ಜೊತೆಗೆ ರಾಜನಹಳ್ಳಿ ಬಳಿ ಜಾಕ್‌ವೆಲ್‌ ನಿರ್ಮಿಸಿ, ಬಾತಿ ಗುಡ್ಡದ ಬಳಿ ನೀರಿನ ಟ್ಯಾಂಕ್‌ ಕಟ್ಟಿ ಪ್ರತಿನಿತ್ಯ ನಗರಕ್ಕೆ ಸಾಕಾಗುವಷ್ಟು ನೀರು ಪೂರೈಸಲಾಗುತ್ತಿತ್ತು. ನಂತರ ನೀರಿನ ಸಮಸ್ಯೆ ನಮ್ಮನ್ನು ಅಷ್ಟಾಗಿ ಕಾಡಿಲ್ಲ. ಆದರೆ, ನೀರುಗಂಟಿ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ನೀರು ನಿರ್ವಹಣೆಯಲ್ಲಿ ವ್ಯತ್ಯಯದಿಂದಾಗಿ ನೀರಿದ್ದರೂ ಸಕಾಲಕ್ಕೆ ಬಿಡದೇ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.

ಇದೀಗ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರಕ್ಕೆ ಜಲಸಿರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿದ್ಧವಾಗಿದೆ. ಈ ಯೋಜನೆ ಅನುಷ್ಠಾನವಾದ ನಂತರ ದಿನದ 24 ತಾಸು ನಗರದ ಜನರಿಗೆ ನೀರು ಸಿಗಲಿದೆ. ನೀರಿಗಾಗಿ ಕೊಡಪಾನ ಹಿಡಿದು, ಬೀದಿ ಬೀದಿ ಅಲೆಯಬೇಕಿಲ್ಲ. ಅಂತಹದ್ದೊಂದು ಮಹತ್ವದ ಯೋಜನೆ ಇದೀಗ ಸಮೀಕ್ಷೆ ಹಂತದಲ್ಲಿದೆ. ಒಟ್ಟು 452.32 ಕೋಟಿ ರೂ.ನ ಈ ಯೋಜನೆಯನ್ನು ಸುಯೇಜ್‌ ಪ್ರೊಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿದೆ.

ಇನ್ನೂ 3 ವರ್ಷ: ದಿನದ 24 ತಾಸೂ ನೀರು ಲಭ್ಯವಾಗಲು ಇನ್ನೂ 3 ವರ್ಷ ಬೇಕು. ಸರ್ಕಾರ ವಿಧಿಸಿರುವ ಷರತ್ತುಗಳ ಅನ್ವಯ ಯೋಜನೆ ಕಳೆದ ಮೇ 18ರಿಂದ ಆರಂಭ ಆಗಿದೆ. 5 ತಿಂಗಳ ಕಾಲ ಸಮೀಕ್ಷೆ ನಡೆಯಲಿದೆ. ಅದಾದ ನಂತರ 3 ವರ್ಷದ ಒಳಗೆ ಬ್ಯಾರೇಜ್‌ ನಿರ್ಮಾಣ, ಪೈಪ್‌ ಲೈನ್‌ ಅಳವಡಿಕೆ, ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣ ನಡೆಯಲಿದೆ. ಇಷ್ಟೆಲ್ಲಾ ಮುಗಿದ ಮೇಲೆ ಮನೆಗಳಿಗೆ ನೀರು ಹರಿಯಲಿದೆ. ಎಲ್ಲಾ ನಳಗಳಿಗೆ ಮೀಟರ್‌ ಅಳವಡಿಕೆ ಕಡ್ಡಾಯವಾಗಿ ಇರಲಿದೆ. 

ಹರಿಹರ ಬಳಿ ಬ್ಯಾರೇಜ್‌: ಹರಿಹರ- ರಾಜನಹಳ್ಳಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಬಳಿ ಬ್ಯಾರೇಜ್‌ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ವರ್ಷಪೂರ್ತಿ ಪ್ರತಿದಿನ 120 ಎಂಎಲ್‌ಡಿ (ಪ್ರತಿದಿನ 10 ಲಕ್ಷ ಲೀಟರ್‌) ನೀರು ಸಂಗ್ರಹಣೆಗೆ ಇಲ್ಲಿ ಬ್ಯಾರೇಜ್‌ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಎತ್ತಿದ ನೀರನ್ನು ಬಾತಿಕೆರೆ ಬಳಿಯ ಶುದ್ಧೀಕರಣ ಘಟಕಕ್ಕೆ ಹರಿಸಲಾಗುವುದು. ಅಲ್ಲಿಂದ ನೀರನ್ನು ನಗರದ ಓವರ್‌ ಹೆಡ್‌ ಟ್ಯಾಂಕ್‌ ಗಳಿಗೆ ತುಂಬಿಸಿ, ಮನೆ ಮನೆಗೆ ಸರಬರಾಜು ಮಾಡಲಾಗುವುದು. ಇದರ ಜೊತೆಗೆ ನಾಲ್ಕು ಕೆರೆಗಳನ್ನೂ ಸಹ ನೀರಿನ ಅಭಾವ ನೀಗಿಸಲು
ತುಂಬಿಸಿಕೊಳ್ಳಲಾಗುತ್ತದೆ. 

19 ಓವರ್‌ ಹೆಡ್‌ ಟ್ಯಾಂಕ್‌: ಪಾಲಿಕೆ ವ್ಯಾಪ್ತಿಯಲ್ಲೀಗ 5 ಲಕ್ಷ ಲೀಟರ್‌ನಿಂದ 15 ಲಕ್ಷ ಲೀಟರ್‌ ಶೇಖರಣೆ ಸಾಮರ್ಥ್ಯ ಹೊಂದಿರುವ 31 ಓವರ್‌ ಹೆಡ್‌ ಟ್ಯಾಂಕ್‌ ಇವೆ. ಇವುಗಳ ಜೊತೆಗೆ ಇನ್ನೂ 19 ಟ್ಯಾಂಕ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಟ್ಯಾಂಕ್‌ಗಳು ಸಹ 3.5 ಲಕ್ಷ ಲೀಟರ್‌ನಿಂದ 15 ಲಕ್ಷ ಲೀಟರ್‌ ವರೆಗೆ ಶೇಖರಣೆ ಸಾಮರ್ಥ್ಯದ್ದಾಗಿರಲಿವೆ. ಒಟ್ಟಾರೆ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ಗೆ ಒಂದೊಂದು ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಲಾಗುತ್ತದೆ.

70 ಅಡಿ ಎತ್ತರದವರೆಗೆ ಜಲಸಿರಿ ಅಡಿ ಕೇವಲ ನೆಲಮಹಡಿ ಮನೆಗೆ ಮಾತ್ರವಲ್ಲ, ಅಂತಸ್ತಿನಲ್ಲಿರುವ ಮನೆಗಳಿಗೂ ಸಹ ನೀರು ಹರಿಸುವ ಉದ್ದೇಶ ಇದೆ. ಹಾಲಿ ಯೋಜನೆಯಲ್ಲಿ ಕನಿಷ್ಠ 20 ಅಡಿ (7 ಮೀಟರ್‌) ಗರಿಷ್ಠ 70 ಅಡಿ (22 ಮೀಟರ್‌) ಎತ್ತರದಲ್ಲಿರುವ ಮನೆಗೂ ಸಹ ನೀರು ಕೊಡುವ ಉದ್ದೇಶ ಇದೆ. ಯೋಜನೆ ಅನ್ವಯ ಪ್ರತೀ ಮನೆಗೆ ಒಂದು ನಳ ಹಾಕಿಸಿಕೊಳ್ಳಲೇಬೇಕು. ನಳಗಳಿಗೆ ಕಡ್ಡಾಯವಾಗಿ ಮೀಟರ್‌ ಇರಲಿದೆ. 

1.34 ಲಕ್ಷ ನಳ: ಈಗ ರೂಪಿಸಲಾಗಿರುವ ಯೋಜನೆ ದೂರದೃಷ್ಟಿ ಯೋಜನೆ ಆಗಿದೆ. 2046ರಲ್ಲಿ ಇರಬಹುದಾದ ಜನಸಂಖ್ಯೆ ಆಧರಿಸಿ, ಯೋಜನೆ ರೂಪಿಸಲಾಗಿದೆ. ಯೋಜನೆ ಅನ್ವಯ ಒಟ್ಟು 1,34,618 ನಳ ಅಳವಡಿಸಲು ಅವಕಾಶ ಮಾಡಿಕೊಳ್ಳಲಾಗಿದೆ. ಹಾಲಿ 2011ರ ಗಣತಿ ಪ್ರಕಾರ ಮಹಾನಗರ ಪಾಲಿಕೆಯಲ್ಲಿ 80,316 ಗೃಹಬಳಕೆ, 12,805 ವಾಣಿಜ್ಯ ಬಳಕೆ ನಳ ಇವೆ. ಇದರ ಜೊತೆಗೆ 41,618 ನಿವೇಶಗಳು ಡೋರ್‌ ನಂಬರ್‌ ಹೊಂದಿದ್ದು, ಇವುಗಳಿಗೂ ಸಹ ನಳ ಅಳವಡಿಸುವ ಗುರಿಯೊಂದಿಗೆ ಯೋಜನೆ ರೂಪಿಸಲಾಗಿದೆ.

ಇತರೆ ಅಂಶಗಳು
1. ಯೋಜನೆಗೆ ಮೂರು 1000 ಎಚ್‌ಪಿ ಸಾಮರ್ಥ್ಯದ ಪಂಪ್‌ ಒದಗಿಸಲಾಗುವುದು. ಇದರಲ್ಲಿ 2 ಮೋಟಾರ್‌ ಕಾರ್ಯನಿರ್ವಹಿಸಿದರೆ, ಇವುಗಳಲ್ಲಿ ಏನಾದರೂ ಸಮಸ್ಯೆ ಉಂಟಾದಲ್ಲಿ ಇನ್ನೊಂದು ಮೋಟಾರ್‌ ಬಳಕೆ.

2. ನದಿಯಿಂದ ಎತ್ತಿದ ನೀರನ್ನು ಶುದ್ಧೀಕರಣ ಘಟಕಕ್ಕೆ ಸಾಗಿಸಲು 10.34 ಕಿಮೀ ಉದ್ದದ 1100 ಎಂಎಂ
ವ್ಯಾಸದ ಪೈಪ್‌ಲೈನ್‌ ಅಳವಡಿಕೆ.  

3. ಶುದ್ಧೀಕರಿಸಲ್ಪಟ್ಟ ನೀರನ್ನು ಓವರ್‌ ಹೆಡ್‌ ಟ್ಯಾಂಕ್‌ಗೆ ಸಾಗಿಸಲು 59.65ಕಿಮೀ ಉದ್ದದ ಪೈಪ್‌ಲೈನ್‌
ಅಳವಡಿಕೆ. 

4. ಮನೆ ಮನೆಗೆ ನೀರು ಹರಿಸಲು 1162.51ಕಿಮೀ ಪೈಪ್‌ಲೈನ್‌ ಅಳವಡಿಕೆ.

ಪಾಟೀಲ ವೀರನಗೌಡ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.