ಶಾಲೆಯ ಬಳಿ ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ವಿರೋಧ
Team Udayavani, Jun 4, 2018, 2:55 PM IST
ಹರಪನಹಳ್ಳಿ: ಪಟ್ಟಣದ 8ನೇ ವಾರ್ಡ್ನ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡದಂತೆ ಸ್ಥಳೀಯರು ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ವಾಲ್ಮೀಕಿ ನಗರದಲ್ಲಿರುವ 8ನೇ ವಾರ್ಡ್ ಸರ್ಕಾರಿ ಶಾಲೆಯಿಂದ ನಿಯೋಜಿತ ಪೆಟ್ರೋಲ್ ಬಂಕ್ ಕೇವಲ 30 ಮೀಟರ್ ಅಂತರದಲ್ಲಿದೆ. ಪೆಟ್ರೋಲ್ ಬಂಕ್ ನಿರ್ಮಾಣದಿಂದ ವಾಹನ ದಟ್ಟಣೆ ಹೆಚ್ಚಾಗಿ ಇಲ್ಲಿ ಓಡಾಡುವ ಮಕ್ಕಳಿಗೆ ಅಪಾಯ ಎದುರಾಗಲಿದೆ. ಆದ್ದರಿಂದ ಕೂಡಲೇ ಪೆಟ್ರೋಲ್ ಬಂಕ್ ನಿರ್ಮಾಣವನ್ನು ತಡೆಯುವಂತೆ ಒತ್ತಾಯಿಸಿದರು. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಶಾಲೆಯ ಮಕ್ಕಳೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಟಿ. ತಿಮ್ಮಣ್ಣ, ಎಂ. ಮಂಜುನಾಥ, ಪಟ್ನಾಮದ ವೆಂಕಟೇಶ್, ಕೆ. ಶಿವಣ್ಣ, ಮಂಜಪ್ಪ, ಎ.ನಾಗರಾಜ್, ಇಟ್ಟಿಗುಡಿ ತಿಮ್ಮಣ್ಣ, ಹನುಮಂತ ನಾಯ್ಕ, ಹಾಲೇಶ್, ಮಾರುತಿ, ಎಚ್. ರಮೇಶ್, ಕರಿಬಸಪ್ಪ, ಪರಸಪ್ಪ ಮತ್ತಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ