ಶಿರ್ವ: ನರ್ಮ್ ಬಸ್ಸಂಚಾರ ಸೇವೆ ಸ್ಥಗಿತ
Team Udayavani, Jun 14, 2018, 6:20 AM IST
ಶಿರ್ವ : ಕೆ.ಎಸ್.ಆರ್.ಟಿ.ಸಿಯ ಗ್ರಾಮೀಣ ನರ್ಮ್ ಬಸ್ಸುಗಳ ಸಂಚಾರ ಕಳೆದ ಆರು ತಿಂಗಳಿನಿಂದ ಸ್ಥ ಗಿತಗೊಂಡಿದ್ದು ಗ್ರಾಮೀಣ ಭಾಗದ ಜನರು ಬಸ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಡುಪಿಯಿಂದ -ಶಿರ್ವ, ಉಡುಪಿಯಿಂದ -ಮೂಡುಬೆಳ್ಳೆ ಮತ್ತು ಉಡುಪಿಯಿಂದ ಕಾಪು-ಮುದರಂಗಡಿ ಮಾರ್ಗವಾಗಿ ಶಿರ್ವಕ್ಕೆ ಚಲಿಸುತ್ತಿದ್ದ ನರ್ಮ್ ಬಸ್ ಸಂಚರಿಸುತ್ತಿದ್ದು ಸ್ಥಗಿತಗೊಂಡಿದೆ.
ಉಡುಪಿಯಿಂದ ಉದ್ಯಾವರ-ಕಟಪಾಡಿ -ಶಂಕರಪುರ ಮಾರ್ಗವಾಗಿ ಶಿರ್ವಕ್ಕೆ ನರ್ಮ್ ಬಸ್ಗಳ ಸಂಚಾರ ಕಳೆದ ವರ್ಷ ಪ್ರಾರಂಭಗೊಂಡಿತ್ತು. ಶಿರ್ವದಿಂದ ಶಂಕರ ಪುರ ಮಾರ್ಗವಾಗಿ ಉಡುಪಿಗೆ ಮತ್ತು ಉಡುಪಿಯಿಂದ ಅದೇ ಮಾರ್ಗವಾಗಿ ಶಿರ್ವಕ್ಕೆ ದಿನನಿತ್ಯ 2 ಬಸ್ಸುಗಳು ಸೇವೆ ಆರಂಭಿಸಿದ್ದು ದಿನಕ್ಕೆ 11 ಟ್ರಿಪ್ ನರ್ಮ್ ಬಸ್ ಸೇವಾ ಸೌಲಭ್ಯ ಶಿರ್ವದ ಜನತೆಗೆ ದೊರೆಯುತ್ತಿತ್ತು.
ಕೆ.ಎಸ್.ಆರ್.ಟಿ.ಸಿ ಶಾಲಾ ವಿದ್ಯಾರ್ಥಿ ಗಳಿಗೆ ಮತ್ತು ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೌಕರ್ಯ ಕಲ್ಪಿಸಿತ್ತು. ಆದರೆ ನಿಗದಿತ ವೇಳಾಪಟ್ಟಿ ಇಲ್ಲದೆ ಸರಕಾರಿ ಬಸ್ಸಂಚಾರ ಪ್ರಾರಂಭಿಸಿದ್ದ ರಿಂದಾಗಿ ಸಮಸ್ಯೆ ಉದ್ಭವಿಸಿತ್ತು.
ಪರ್ಮಿಟ್ ಕ್ಯಾನ್ಸಲ್
ಖಾಸಗಿಯವರು ಕಾನೂನು ಸಮರ ನಡೆಸಿದ್ದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಬಸ್ಗಳ ಪರ್ಮಿಟ್ ಕ್ಯಾನ್ಸಲ್ ಆಗಿದೆ. ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಸ್ ಸಂಚಾರ ಪ್ರಾರಂಭಿಸಲು ಪ್ರಯತ್ನ ನಡೆಸುತ್ತಿದ್ದೇವೆ .
– ಉದಯ್ ,ಕೆ.ಎಸ್.ಆರ್.ಟಿ.ಸಿ ಉಡುಪಿಯ ಡಿಪೋ ಮೆನೇಜರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…