ಠಾಣಾಕುಶನೂರನಲ್ಲಿ ಅಖಂಡ ಹರಿನಾಮ-ಶಿವನಾಮ ಸಪ್ತಾಹ
Team Udayavani, Jun 16, 2018, 3:12 PM IST
ಕಮಲನಗರ: ಠಾಣಾಕುಶನೂರ ಗ್ರಾಮದ ಮಹಾದೇವ ಮಂದಿರದಲ್ಲಿ ಅಖಂಡ ಹರಿನಾಮ, ಶಿವನಾಮ ಸಪ್ತಾಹ ಹಾಗೂ ಸೇವೆಯಿಂದ ನಿವೃತ್ತರಾದ ಶಿಕ್ಷಕ ರಘುನಾಥ ಶರಣಪ್ಪಾ ರೊಟ್ಟೆ ಅವರ ಸನ್ಮಾನ ಸಮಾರಂಭ ನಡೆಯಿತು.
ಏಳು ನಗಳ ಕಾಲ ಪ್ರತಿನಿತ್ಯ 7ರಿಂದ 9 ಗಂಟೆ ವರೆಗೆ ಶಿವಲಿಲಾಮೃತ ಪಾರಾಯಣ, ಬೆಳಗ್ಗೆ 11ರಿಂದ 1
ಗಂಟೆ ವರೆಗೆ ಗಾಥಾ ಭಜನೆ, ಮಧ್ಯಾಹ್ನ 3ರಿಂದ 4ರ ವರೆಗೆ ಶಿವಭಜನೆ, ಪ್ರತಿದಿನ ಸಂಜೆ 5 ರಿಂದ 6ರ ವರೆಗೆ ಪ್ರವಚನ, ಸಂಜೆ 7ರಿಂದ 8ರ ವರೆಗೆ ಹರಿಪಠಣ, ರಾತ್ರಿ 9ರಿಂದ 11ರ ವರೆಗೆ ಹರಿ ಕೀರ್ತನೆ, ರಾತ್ರಿ ಹರಿಜಾಗರಣ ಹಾಗೂ ಬೆಳಗ್ಗೆ 5 ಗಂಟೆಗೆ ಕಾಕಡಾರತಿ ಕಾರ್ಯಕ್ರಮಗಳು ಜರುಗಿದವು.
ಏಳು ದಿನಗಳ ಕಾಲ ವಿವಿಧ ಮಹಾತ್ಮರು, ಶರಣರು, ಕೀರ್ತನೆಕಾರರು, ಪ್ರವಚನಕಾರರು, ಗಾಯಕರು ಹಾಗೂ ಸುಮಾರು 30 ಗ್ರಾಮಗಳಿಂದ ಶಿವ-ಹರಿ ಭಜನಾ ತಂಡಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ
ನಿವೃತ್ತ ಶಿಕ್ಷಕ ಹಾಗೂ ಈ ಕಾರ್ಯಕ್ರಮದ ರೂವಾರಿ ರಘುನಾಥ ಶರಣಪ್ಪಾ ರೊಟ್ಟೆ ದಂಪತಿಯನ್ನು ಗ್ರಾಮಸ್ಥರು ಸನ್ಮಾನಿಸಿದರು.
ವಿರಕ್ತ ಮಠ, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಸಂಘ ಸಂಸ್ಥೆ ಹಾಗೂ ಶಿಕ್ಷಕರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಸಾನ್ನಿಧ್ಯ ವಹಿಸಿದ್ದ ಡಾ| ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಶಿಕ್ಷಕ ರಘುನಾಥ ರೊಟ್ಟೆ ಅವರು ತಮ್ಮ ಜೀವನ ಪರ್ಯಂತ ಮಕ್ಕಳಿಗೆ ಒಳ್ಳೆ ಪಾಠ, ಬೋಧನೆ ಮಾಡಿ ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿದ್ದಾರೆ.
ಶಿಕ್ಷಕ ವೃತ್ತಿಯೊಂದಿಗೆ ಶರಣ ತತ್ವ, ಸಂತರ ತತ್ವಗಳನ್ನು ಕೀರ್ತನೆ ಮತ್ತು ಪ್ರವಚನಗಳ ಮೂಲಕ ಜನಜಾಗೃತಿಗೊಳಿಸಿದ್ದಾರೆ ಎಂದರು. ಶ್ರೀ ಮುರಲಿಧರ ಮಹಾರಾಜ, ಜಗನ್ನಾಥ ಮೂಲಗೆ ಮಾತನಾಡಿದರು.
ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಇಲಾಖೆ ಅಧಿಕಾರಿಗಳಾದ ಉಮಾಕಾಂತ ಮಹಾಜನ ವೇದಿಕೆಯಲ್ಲಿದ್ದರು. ಪ್ರವಿಣ ಕಾರಬಾರಿ, ಶಿವಕುಮಾರ ಸಜ್ಜನಶೆಟ್ಟೆ, ಜಗನ್ನಾಥ ಜಿರ್ಗೆ, ಸತೀಶ ಜಿರ್ಗೆ, ರಾಮದಾಸ ಮಾಸ್ಟರ್, ವಸಂತ ದೆಸಾಯಿ, ಶರಣಪ್ಪಾ ಬೆಲ್ದಾಳ, ಮಹಾದಪ್ಪಾ ಸಜ್ಜನಶೆಟ್ಟೆ, ಬಾಬುರಾವ್ ಜಾಧವ ಡಾ| ರವಿಂದ್ರ ಬಾವಗೆ, ಬಾಲಾಜಿ ವಾಗಮೊಡೆ, ರಮೇಶ ಬೊಚರೆ, ಸೋಪಾನ ಕೊರೆಕಲ ಇನ್ನಿತರರು ಇದ್ದರು. ಸಂಜು ಕದಂ ಸ್ವಾಗತಿಸಿದರು. ರಾಮಶೇಟ್ಟಿ ಪನ್ನಾಳೆ ನಿರೂಪಿಸಿದರು. ಬಾಲಾಜಿ ವಾಗಮೊಡೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ