ನೀವೂ ಆರಂಭಿಸಿ ತೋಟಗಾರಿಕಾ ಸ್ಟಾರ್ಟಪ್‌


Team Udayavani, Jun 19, 2018, 6:05 AM IST

nayak.jpg

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಐಟಿ ಸ್ಟಾರ್ಟ್‌ ಅಪ್‌ ಗಳ ಹಬ್‌ ಆಗಿ ಬೆಳಗುತ್ತಿರುವ ರಾಜಧಾನಿ, ಇದೀಗ ದೇಶದಲ್ಲಿ ಅತಿದೊಡ್ಡ ತೋಟಗಾರಿಕಾ ಸ್ಟಾರ್ಟ್‌ಅಪ್‌ ಉದ್ಯಮಿಗಳನ್ನು ತಯಾರು ಮಾಡುವ ಕೇಂದ್ರವಾಗಿಯೂ ಹೊರಹೊಮ್ಮುತ್ತಿದೆ.ಮಾಹಿತಿ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗ್ಳ ಸ್ಥಾಪನೆ ಮಾದರಿಯಲ್ಲೇ ತೋಟಗಾರಿಕಾ ಉದ್ಯಮಿಗಳನ್ನು ಸಜ್ಜು ಗೊಳಿಸುವ ಕೆಲಸ ಬೆಂಗಳೂರಿನ ಹೆಸರ ಘಟ್ಟದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅಲ್ಲಿ 
ತೋಟಗಾರಿಕೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗ್ಳನ್ನು ಸ್ಥಾಪಿಸಲು ಆಸಕ್ತಿ ಇರುವವರಿಗೆ ಸೂಕ್ತ ತರಬೇತಿ ನೀಡಿ, ಕಚೇರಿ ಮತ್ತು ಪ್ರಯೋಗಾಲಯಕ್ಕೆ ಜಾಗವನ್ನೂ ಕೊಟ್ಟು, ಹೊರತಂದ ಉತ್ಪಾದನೆಗಳಿಗೆ ಮಾರುಕಟ್ಟೆ ಜಾಲವನ್ನೂ 
ಒದಗಿಸಲಾಗುತ್ತಿದೆ.

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಸ್ಟಾರ್ಟ್‌ಅಪ್‌ ಇನ್‌ಕ್ಯೂಬೇಷನ್‌ ಸೆಂಟರ್‌ ಅಡಿ ಈ ಹೊಸ ಪ್ರಯೋಗಕ್ಕೆ ವೇದಿಕೆ ಕಲ್ಪಿಸಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ಜನ ಇಲ್ಲಿ ತರಬೇತಿ ಪಡೆದು, ಬೇರೆ ಬೇರೆ ಕಡೆಗಳಲ್ಲಿ ಸ್ಟಾರ್ಟ್‌ಅಪ್‌ ಗಳನ್ನು ಆರಂಭಿಸಿದ್ದಾರೆ. 80ಕ್ಕೂ ಅಧಿಕ ಮಂದಿ ಆಫ್ ಸೈಟ್‌ ಇನ್‌ಕ್ಯು ಬೇಟರ್‌ (ತಾವಿದ್ದಲ್ಲಿಯೇ ತರಬೇತಿ ಪಡೆದವರು) ಗಳಾಗಿದ್ದಾರೆ. ವೈಜ್ಞಾನಿಕವಾಗಿ ತೋಟಗಾರಿಕೆ ಉದ್ಯಮ ಸ್ಥಾಪನೆಗೆ ಹಣಕಾಸು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವ ಈ ವ್ಯವಸ್ಥೆ ಲಾಭದಾಯಕವಾಗಿ ಪರಿಣಮಿಸಿದ್ದು,
ಇದರಿಂದ ಹೊಸ ವರ್ಗವನ್ನು ಕೃಷಿಯತ್ತ ಸೆಳೆಯುವಂತೆ ಮಾಡಿದೆ.

ಓದಿದ್ದು ಎಂಟೆಕ್‌; ಬಂದಿದ್ದು ಕೃಷಿ ಉದ್ಯಮಕ್ಕೆ: “ನಾನು ಓದಿದ್ದು ಎಂಟೆಕ್‌. ಆದರೆ, ಆಸಕ್ತಿ ಇದ್ದದ್ದು ಕೃಷಿಯಲ್ಲಿ. ತೋಟಗಾರಿಕೆಯಲ್ಲಿ ಸ್ಟಾರ್ಟ್‌ಅಪ್‌ ಸ್ಥಾಪನೆಗೆ ಪೂರಕ ನೆರವು ನೀಡುವ ಐಐಎಚ್‌ಆರ್‌ನ ಕೃಷಿ ವಾಣಿಜ್ಯೀಕರಣ ಇನ್‌ಕ್ಯುಬೇಷನ್‌ ಕೇಂದ್ರದಲ್ಲಿ ತರಬೇತಿ ಪಡೆದಿದ್ದೇನೆ. ಆದರೆ, ಹೊಸದಾಗಿ ಉದ್ಯಮ ಸ್ಥಾಪನೆಗೆ ಸಾಕಷ್ಟು ಹೂಡಿಕೆ ಮಾಡಬೇಕಾಗುತ್ತದೆ. ಇದಕ್ಕೆ ಸ್ವತಃ ಸಂಸ್ಥೆಯಲ್ಲೇ ಜಾಗ ಮತ್ತು ಯಂತ್ರೋಪಕರಣಗಳನ್ನು ನೀಡಿತು. ಇದರ ಸಹಾಯದಿಂದ ಬಾಳೆ ಇಳುವರಿ ಹೆಚ್ಚಿಸುವ ಔಷಧವನ್ನು ಉತ್ಪಾದಿಸುತ್ತಿದ್ದೇನೆ.ಮಾರುಕಟ್ಟೆ ಜಾಲ ಕೂಡ ಸಂಸ್ಥೆಯೇ ಕಲ್ಪಿಸಿದೆ.

ತಿಂಗಳಿಗೆ ಒಂದು ಟನ್‌ “ಬಾಳೆ ಸ್ಪೆಷಲ್‌’ ಸಿಂಪರಣೆ ಔಷಧ ಮಾರಾಟ ಮಾಡುತ್ತಿದ್ದೇನೆ’ ಎಂದು ಕೇರಳದ
ಕಲ್ಲಿಕೋಟೆಯ ಲಿಬಿನ್‌ ವಿವರಿಸಿದರು. ಇಂಜಿನಿಯರ್‌ ಕ್ಷೇತ್ರದಲ್ಲೇ ಮುಂದುವರಿದಿದ್ದರೆ, ಹೆಚ್ಚೆಂದರೆ ತಿಂಗಳಿಗೆ 20ರಿಂದ 25 ಸಾವಿರ ರೂ. ಸಿಗುತ್ತಿತ್ತು. ಆದರೆ, ತಿಂಗಳಿಗೆ ಈಗ 75 ಸಾವಿರ ರೂ. ಗಳಿಸುತ್ತಿದ್ದೇನೆ. ಇನ್ನೆರಡು ತಿಂಗಳಲ್ಲಿ ಮೂರು ಟನ್‌ ಔಷಧ ಮಾರಾಟದ ಗುರಿ ಇದೆ. ಆಗ, ಮಾಸಿಕ ಆದಾಯ 2.75 ಲಕ್ಷ ಆಗಲಿದೆ ಎಂದು ಲಿಬಿನ್‌ ಹೇಳಿದರು.

ತಿಂಗಳಿಗೆ 60 ಸಾವಿರ ಗಳಿಕೆ ಗುರಿ: ಕೊಪ್ಪಳದ ಭರತ್‌ ನಾಯಕ್‌ ಕಲಿತಿದ್ದು ಬಿಇ ಕೆಮಿಕಲ್‌ ಇಂಜಿನಿಯರಿಂಗ್‌. ಇದೀಗ ಈ ಕ್ಷೇತ್ರ ಆಯ್ಕೆ ಮಾಡಿಕೊಂಡು ದಾಳಿಂಬೆ, ಮೆಣಸಿನಕಾಯಿಗೆ ಸಿಂಪಡಿಸುವ ಸೂಕ್ಷ್ಮ ಜೀವಾಣುಗಳ ಮಿಶ್ರಣದ ಘನ
ಮತ್ತು ದ್ರವ್ಯಗಳನ್ನು ಉತ್ಪಾದಿಸಿ, ಮಾರಾಟ ಮಾಡುತ್ತಿದ್ದಾರೆ. ತಿಂಗಳಿಗೆ 350 ಲೀ. ಮಾರಿ 30 ಸಾವಿರ ರೂ. ಗಳಿಸುತ್ತಿದ್ದೇನೆ. ದುಪ್ಪಟ್ಟು ಮಾಡುವ ಗುರಿ ಹೊಂದಿದ್ದೇನೆ ಎಂದು ಭರತ್‌ ತಿಳಿಸಿದ್ದಾರೆ.

120 ಉತ್ಪನ್ನಗಳು ಲಭ್ಯ
ಕೃಷಿ ವಾಣಿಜ್ಯೀಕರಣ ಇನ್‌ಕ್ಯುಬೇಷನ್‌ನಲ್ಲಿ ಬೀಜ ಮತ್ತು ನಾಟಿ, ಗಿಡಗಳ ಆರೋಗ್ಯ ನಿರ್ವಹಣೆ ತಂತ್ರಜ್ಞಾನ, ಕೊಯ್ಲೋತ್ತರ ತಂತ್ರಜ್ಞಾನ, ಯಂತ್ರೋಪಕರಣ, ಜೈವಿಕ ತಂತ್ರಜ್ಞಾನ ಹೀಗೆ ಐದು ಪ್ರಕಾರದ ತಂತ್ರಜ್ಞಾನಗಳಲ್ಲಿ ಸಂಶೋಧನೆಗೆ ಅವಕಾಶ ಇದೆ. ಇದರಲ್ಲಿ ಒಟ್ಟಾರೆ 120 ಉತ್ಪನ್ನಗಳು ಲಭ್ಯ ಇವೆ. ಇದರಲ್ಲಿ ಯಾವುದಾದರೂ ಉತ್ಪನ್ನವನ್ನು ಆಯ್ಕೆ ಮಾಡಿಕೊಂಡು ಅಭಿವೃದಿಟಛಿಪಡಿಸಬಹುದು. ಈ ಉತ್ಪನ್ನಗಳ ಮಾರುಕಟ್ಟೆಗೆ ಐಐಎಚ್‌ಆರ್‌
ಲೋಗೋ ಬಳಸಿಕೊಳ್ಳಲೂ ಅವಕಾಶ ಇದೆ

ಎಸ್ಸೆಸ್ಸೆಲ್ಸಿ ಪಾಸಾದವರೂ ಕಲಿಯಬಹುದು
ಈ ತರಬೇತಿ ಪಡೆಯಲು ಯಾವುದೇ ಡಿಗ್ರಿ ಅವಶ್ಯಕತೆಯಿಲ್ಲ. ಎಸ್ಸೆಸ್ಸೆಲ್ಸಿ ಪಾಸಾಗಿದ್ದರೂ ಸಾಕು. ಕನಿಷ್ಠ 4 ದಿನಗಳಿಂದ ತಿಂಗಳುಗಳ ಕಾಲ ವಿವಿಧ ರೀತಿಯ ತರಬೇತಿ ನೀಡಲಾಗುತ್ತದೆ. ಅದು ಆಯಾ ಉತ್ಪನ್ನಗಳನ್ನು ಅವಲಂಬಿಸಿರುತ್ತದೆ. ಐಐಎಚ್‌ಆರ್‌ನಲ್ಲಿರುವ ಇನ್‌ಕ್ಯುಬೇಷನ್‌ ಕೇಂದ್ರ ದೇಶದ ಅತಿದೊಡ್ಡ ಸೆಂಟರ್‌ ಆಗಿದೆ.
2013ರಲ್ಲಿ ಆರಂಭಗೊಂಡ ಈ ಕೇಂದ್ರಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ದೇಶದ ನಾನಾ ಭಾಗಗಳಿಂದ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಅಲ್ಲದೆ, ನಮ್ಮ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಕೂಡ ನೀಡಲಾಗುತ್ತದೆ. 500ಕ್ಕೂ ಅಧಿಕ ಪರವಾನಗಿಗಳನ್ನು ನೀಡಲಾಗಿದೆ ಎಂದು ಐಐಎಚ್‌ಆರ್‌ ಅಗ್ರಿ ಬ್ಯುಸಿನೆಸ್‌ ಇನ್‌ಕ್ಯುಬೇಷನ್‌ ಸೆಂಟರ್‌ ಮುಖ್ಯಸ್ಥೆ ಡಾ.ಸುಧಾ ಮೈಸೂರು ಮಾಹಿತಿ ನೀಡಿದರು. ಡಾ.ಸುಧಾ ಸಂಪರ್ಕ ಸಂಖ್ಯೆ: 9448073198

– ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.