ಸ್ವಂತ ಖರ್ಚಿನಿಂದ ತೆರವು ಕಾರ್ಯಕ್ಕೆ ಮುಂದಾದ ಯುವಕರು
Team Udayavani, Jun 21, 2018, 6:25 AM IST
ಮಲ್ಪೆ: ಕಡಿದ ಮರದ ತುಂಡುಗಳು ರಸ್ತೆಯ ಬದಿಯ ಅಂಚನ್ನು ಚಾಚಿಕೊಂಡು ವಾಹನಗಳ ಸುಗಮ ಸಂಚಾರಕ್ಕೆ ತೊಡಕನ್ನು ಉಂಟು ಮಾಡುತ್ತಿದ್ದು ಇದನ್ನು ಮನಗಂಡ ಸ್ಥಳೀಯ ಯುವಕರು ಬೃಹತ್ ಗಾತ್ರದ ಮರದ ತುಂಡನ್ನು ಹಿಟಾಚಿ ಮೂಲಕ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.
ಕಳೆದ ಮೂರು ವಾರದ ಹಿಂದೆ ಸುರಿದ ಮಳೆಗೆ ಕಲ್ಮಾಡಿ ಮುಖ್ಯ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ಅದನ್ನು ನಗರಸಭೆಯ ವತಿಯಿಂದ ಕಡಿದು ತೆರವುಗೊಳಿಸಲಾಗಿತ್ತು. ಆದರೆ ಕಡಿದ ಮರದ ತುಂಡುಗಳು ಮಾತ್ರ ರಸ್ತೆಯಲ್ಲೇ ಬಾಕಿ ಉಳಿದಿದ್ದವು. ರಸ್ತೆಗೆ ಚಾಚಿಕೊಂಡಿದ್ದ ಮರದ ತುಂಡುಗಳು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದವು. ಮರದ ಚೂಪಾದ ಭಾಗಗಳು ರಸ್ತೆಯ ಬದಿಯಲ್ಲಿ ಸಾಗುವ ದ್ವಿಚಕ ವಾಹನ ಸಾವಾರಿಗೆ ತಾಗಿ ಅನಾಹುತಗಳು ನಡೆಯುತ್ತಿದ್ದವು.ಈ ಬಗ್ಗೆ ನಾಗರಿಕರು ಹಲವು ಬಾರಿ ನಗರಸಭೆಗೆ ದೂರಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಮಾಡಿಯ ಸ್ಥಳೀಯ ಯುವಕರು ಸುಂದರ್ ಜೆ. ಕಲ್ಮಾಡಿ ನೇತೃತ್ವದಲ್ಲಿ ತಮ್ಮ ಸ್ವಂತ ಖರ್ಚಿನಿಂದ ಹಿಟಾಚಿ ಮೂಲಕ ಮರದ ತುಂಡುಗಳನ್ನು ತೆರವುಗೊಳಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಮನವಿಗೆ ಸ್ಪಂದಿಸಲಿಲ್ಲ
ರಸ್ತೆ ಬದಿಯ ಮರವನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದೇªವೆ. ಯಾವ ಸ್ಪಂದನೆಯೂ ದೊರೆಯದಿದ್ದಾಗ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೇ ಸ್ವಂತ ಖರ್ಚು ಹಾಕಿ ಈ ಕಾರ್ಯಕ್ಕೆ ಮುಂದಾಗಿದೇªವೆ.
– ಸುಂದರ್ ಜೆ. ಕಲ್ಮಾಡಿ,ಸಮಾಜ ಸೇವಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ