ಸವಾಲು ಎದುರಿಸೋ ಮನಸ್ಥಿತಿ ಬೆಳೆಸಿಕೊಳ್ಳಿ
Team Udayavani, Jun 21, 2018, 1:50 PM IST
ಚಿಕ್ಕಮಗಳೂರು: ಧೈರ್ಯ, ಆತ್ಮವಿಶ್ವಾಸದ ಜತೆಗೆ ಜವಾಬ್ದಾರಿ ಇದ್ದಲ್ಲಿ ಅಸಾಧ್ಯವಾದದು ಯಾವುದೂ
ಇಲ್ಲ. ಸವಾಲು ಎದುರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ದಕ್ಷಿಣ ಭಾರತದಿಂದ ಭಾರತೀಯ ವಾಯುಸೇನೆಗೆ ಆಯ್ಕೆಯಾಗಿರುವ ಮೊದಲ ಯುದ್ಧ ವಿಮಾನ ಮಹಿಳಾ ಪೈಲೆಟ್ ಕಾಫಿನಾಡಿನ ಮೇಘನಾ ಶ್ಯಾನಭಾಗ್ ಹೇಳಿದರು.
ನಗರದ ರಂಗಣ್ಣನವರ ಛತ್ರದಲ್ಲಿ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ
ಅವರು ಮಾತನಾಡಿದರು. ನಾನು ಮನೆಗಿಂತ ವಿದ್ಯಾರ್ಥಿ ನಿಲಯ, ಪಿಜಿಯಲ್ಲೇ ಓದಿದ್ದೇ ಹೆಚ್ಚು. ಓದಿಗೆ ಸೀಮಿತ ಅವಧಿ ನೀಡಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಮಗಳು ಓದಿನಲ್ಲಿ ಹಿಂದೆ ಬೀಳುತ್ತಾಳೆ ಎಂಬ ಆತಂಕ ಎಲ್ಲ ಪೋಷಕರಂತೆ ನಮ್ಮವರಿಗೂ ಇತ್ತು. ಆದರೆ, ಬರಿ ಅಂಕಗಳಿಸುವ ಓದಿಗಾಗಿ ಇಡೀ ಸಮಯ ವ್ಯರ್ಥ ಮಾಡಬೇಕಾ ಎಂದು ನನ್ನಲ್ಲಿ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಿದ್ದೆ.
ಆಗ ನನಗೆ ಹೊಳೆದದ್ದೇ ಸಾಹಸ ಚಟುವಟಿಕೆಗಳಾದ ಗ್ಲೈಡಿಂಗ್, ಟ್ರಕ್ಕಿಂಗ್, ಮೌಂಟನೇರಿಂಗ್ ಮತ್ತಿತರೆ ಕ್ರಿಯಾತ್ಮಕ ಚಟುವಟಿಕೆಗಳು. ಅವುಗಳತ್ತ ನನ್ನ ಗಮನ ಹರಿಸಿದೆ. ಇದರ ಜತೆಗೆ ಜವಾಬ್ದಾರಿ ಎಂಬುದು ನನ್ನಲ್ಲಿ ಆಳವಾದ ಆಲೋಚನೆಗೆ ದೂಡಿತು ಎಂದರು.
ಕಾಲೇಜಿನಲ್ಲಿದ್ದಾಗ ನಾನೇನು ಹೆಚ್ಚು ಓದುತ್ತಿರಲಿಲ್ಲ. ಆದರೂ ನಾನು ಪ್ರಥಮ ದರ್ಜೆಯಲ್ಲಿ ಪಾಸಾಗಿರುತ್ತಿದ್ದೆ. ಇದು
ನನ್ನ ಹೆತ್ತವರಿಗೆ ಸಮಾಧಾನ ತರುತ್ತಿತ್ತು. ಪರೀಕ್ಷೆ ಪಾಸು ಮಾಡಲು ನನಗೆ 3 ತಿಂಗಳು ಸಾಕಿತ್ತು. ಸುಮ್ಮನೆ 8 ತಿಂಗಳು ವ್ಯಯ ಮಾಡುತ್ತಿದ್ದೇನೆ ಎನ್ನಿಸುತ್ತಿತ್ತು.ಇತರೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡುತ್ತಿಲ್ಲವಲ್ಲ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ನಾನು ಏನೇ ಮಾಡಿದರೂ ಅದು ನನಗೆ ಖುಷಿ ಕೊಡಬೇಕಿತ್ತು ಎಂದರು.
ಕಾಲೇಜು ಪ್ರಥಮ ವರ್ಷದಲ್ಲಿ ನಮ್ಮ ಕಾಲೇಜ್ಲ್ಲಿ ಸಾಕಷ್ಟು ಕ್ಲಬ್ ಗಳಿದ್ದವು. ಅದರ ಮೂಲಕ 26 ದಿನ ಹಿಮಾಲಯ ಹತ್ತಿ ಇಳಿಯುವ ತರಬೇತಿ ನನಗೆ ಅದ್ಬುತ ಅನುಭವ ನೀಡಿತು. ಅದಾದ ನಂತರ ಕಾಲೇಜಿನಲ್ಲಿ ನಾವೇ ಏಕೆ ಒಂದು ಅಡ್ವೆಂಚರ್ ಕ್ಲಬ್ ಸ್ಥಾಪಿಸಬಾರದು ಎಂಬ ಆಲೋಚನೆ ಹಾಕಿದಾಗ ಹುಟ್ಟಿದ್ದೇ ಸಾಹಸ್ ಅಡ್ವೆಂಚರ್ ಕ್ಲಬ್.
ಇದರ ಮೂಲಕ ಸಾಕಷ್ಟು ವಿದ್ಯಾರ್ಥಿಗಳು ಹಿಮಾಲಯ ಹತ್ತುವಂತಾಯಿತು. ಕಾಲೇಜಿನ ಬಳಿಕ ಅಪ್ಪನ ಆಸೆಯಂತೆ ಐಎಎಸ್ ಮಾಡಲು ದೆಹಲಿಗೆ ತೆರಳಿದೆ. ಅಲ್ಲಿ ಐಎಎಸ್ ಪೂರ್ವಭಾವಿ ಪರೀಕ್ಷೆಗೆ ಮುನ್ನವೇ ಆಫ್ಕ್ಯಾಟ್ (ಎಫ್ಸಿಎಟಿ) ಪರೀಕ್ಷೆ ಬರೆದಿದ್ದೆ. ಈ ವಿಚಾರ ಮನೆಯಲ್ಲಿ ಹೇಳಿರಲಿಲ್ಲ. ನಂತರ ಅಪ್ಪ, ಅಮ್ಮನಿಗೆ ಹೇಳುವುದು ಎಂದು ತೀರ್ಮಾನಿಸಿದ್ದೆ ಅದು ಪಾಸಾಯಿತು. ಆಗ ಅವರಿಗಾದ ಸಂತೋಷಕ್ಕೆ ಪಾರವೆ ಇರಲಿಲ್ಲ ಎಂದರು. ನಂತರ ಎಸ್ಎಸ್ಬಿ, ಮೆಡಿಕಲ್ ನಿಂದಲೂ ಆಯ್ಕೆಯಾದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಧೈರ್ಯ, ಆತ್ಮವಿಶ್ವಾಸ ಹಾಗೂ ಸವಾಲನ್ನು ಎದುರಿಸುವ ಮನಸ್ಥಿತಿ ಬೆಳೆಸಿಕೊಂಡಲ್ಲಿ ಯಾವ ಸಾಧನೆಯೂ ಕಷ್ಟಸಾಧ್ಯವೇನಲ್ಲ ಎಂದು ಹೇಳಿದರು.
ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ ಮಾತನಾಡಿ, ನಮ್ಮಲ್ಲಿ ಸಾತ್ವಿಕವಾಗಿ ನಡೆದುಕೊಳ್ಳುವವರು ಬಹಳ ಜನ ಇದ್ದಾರೆ. ಆದರೆ ಧೈರ್ಯವಾಗಿ ಮುನ್ನೆಡೆಯುವವರು ತುಂಬಾ ಕಡಿಮೆ. ಇಂತಹ ಧೈರ್ಯ ಯುದ್ಧ ಪೈಲೆಟ್ ಆಗಿರುವ ಮೇಘನಾ ಅವರಿಗೆ ಬಂದಿದೆ ಎಂದರು.
ಮೇಘನಾ ತಂದೆ ಎಂ.ಕೆ. ರಮೇಶ್ ಮಾತನಾಡಿದರು. ಹಿರಿಯ ವಕೀಲ ದತ್ತಾತ್ರಿ ದಂಪತಿ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಶಿ, ಕಾರ್ಯದರ್ಶಿ ಅಶ್ವಿನ್, ಮೋಹನ್ ಮತ್ತಿತರೆ ಸಮಾಜದ ಗಣ್ಯರು ಮೇಘನಾ ಅವರನ್ನು ಸನ್ಮಾನಿಸಿದರು. ಬ್ರಾಹ್ಮಣ ಮಹಾಸಭಾದ ನಿರ್ದೇಶಕರಾದ ಎನ್. ಮೂರ್ತಿ, ಪ್ರಕಾಶ್ ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ