ಒಂದು ಅಂಕಿ ತಪ್ಪು ಒತ್ತಿದ್ದರಿಂದ ಸಾವಿರಾರು ರೂ. ಕಳೆದುಕೊಂಡ!


Team Udayavani, Jun 23, 2018, 6:00 AM IST

b-29.jpg

ನವದೆಹಲಿ: ಕಲಬುರಗಿಯಲ್ಲಿ ಕ್ಯಾಶ್‌ ಡೆಪಾಸಿಟ್‌ ಮಶಿನ್‌ನಲ್ಲಿ ತನ್ನ ಖಾತೆಗೆ ನಗದು ಡೆಪಾಸಿಟ್‌ ಮಾಡುವಾಗ ಕೇವಲ ಒಂದು ಅಂಕಿ ತಪ್ಪಾಗಿ ಒತ್ತಿದ್ದರಿಂದ ಮಹೇಂದ್ರ ಕುಮಾರ್‌ ಯಮನಪ್ಪ 49,500 ರೂ. ಕಳೆದುಕೊಂಡಿದ್ದಾರೆ. ಕಳೆದ ವರ್ಷ ಜುಲೈ 18ರಂದು ಮಶಿನ್‌ನಲ್ಲಿ ಹಣ ಡೆಪಾಸಿಟ್‌ ಮಾಡಿದ್ದರು. ಕ್ಯಾಶ್‌ ಡೆಪಾಸಿಟ್‌ ಮಾಡಿದ ನಂತರ ತನ್ನ ಖಾತೆಯಲ್ಲಿ ಬ್ಯಾಲೆನ್ಸ್‌ ಚೆಕ್‌ ಮಾಡಿದಾಗ ಹಣ ಡೆಪಾಸಿಟ್‌ ಆಗಿದ್ದನ್ನು ತೋರಿಸಿರಲಿಲ್ಲ. ನಂತರ ಟೆಂಪಲ್‌ ರೋಡ್‌ನ‌ಲ್ಲಿರುವ ಶಾಖೆಗೆ ಹೋಗಿ ವಿಚಾರಿಸಿದರು. ಅಷ್ಟೇ ಅಲ್ಲ, ದೂರನ್ನೂ ಕೊಟ್ಟರು. ಆದರೆ ತಾನು ಒಂದು ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದು ಅವರಿಗೆ ಗಮನಕ್ಕೆ ಬಂದಿರಲೇ ಇಲ್ಲ.

ಒಂದು ತಿಂಗಳಾದರೂ ಬ್ಯಾಂಕ್‌ ಅಧಿಕಾರಿಗಳು ಕ್ರಮ ಕೈಗೊಳ್ಳದ್ದರಿಂದ ಆಗಸ್ಟ್‌ನಲ್ಲಿ ಮತ್ತೂಂದು ದೂರು ನೀಡಿದರು. ಅಷ್ಟೇ ಅಲ್ಲ, ತನ್ನ ಬ್ಯಾಂಕ್‌ ಖಾತೆ ಹ್ಯಾಕ್‌ ಆಗಿದೆ ಎಂದು ಪೊಲೀಸರಿಗೂ ದೂರು ನೀಡಿದರು. ಆದರೆ ಇದೇ ವೇಳೆ ತೆಲಂಗಾಣದ ಅಡಿಲಾಬಾದ್‌
ನಲ್ಲಿನ ವ್ಯಕ್ತಿ ಸರಿಯಾಗಿ ಹದಿನಾರು ದಿನಗಳ ನಂತರ ಎಟಿಎಂಎ ಹೋಗಿ ತನ್ನ ಖಾತೆ ಚೆಕ್‌ ಮಾಡಿದಾಗ 49,500 ರೂ. ಹೆಚ್ಚುವರಿ ಇರುವುದು ಕಂಡುಬಂತು. ಖಾನ್‌ ಶಬಾಬ್‌ ತಡ ಮಾಡದೇ ಅಷ್ಟೂ ಹಣವನ್ನು ತೆಗೆದುಕೊಂಡಿದ್ದರು.

ಶಬಾಬ್‌ ಹಣವನ್ನೆಲ್ಲ ತೆಗೆದುಕೊಂಡ ನಂತರ, ಬ್ಯಾಂಕ್‌ ಅಧಿಕಾರಿಗಳು ತಪಾಸಣೆ ನಡೆಸಿ ಯಮನಪ್ಪ ತನ್ನ ಖಾತೆಗೆ ಹಣ ಡೆಪಾಸಿಟ್‌ ಮಾಡುವುದರ ಬದಲಿಗೆ ಶಬಾಬ್‌ ಖಾತೆಗೆ ಹಣ ಡೆಪಾಸಿಟ್‌ ಮಾಡಿದ್ದರು ಎಂದು ವರದಿ ನೀಡಿದ್ದರು. ಯಮನಪ್ಪ ಎಟಿಎಂನಲ್ಲಿ ತನ್ನ ಖಾತೆ ಸಂಖ್ಯೆಯನ್ನು ಒತ್ತುವಾಗ 0 ಬದಲಿಗೆ 8 ಒತ್ತಿದ್ದರು. ಎಟಿಎಂ ಹಾಗೂ ಕ್ಯಾಶ್‌ ಡೆಪಾಸಿಟ್‌ ಮಶಿನ್‌ಗಳಲ್ಲಿ 8 ರ ಬಟನ್‌ ಕೆಳಗೆ 0
ಇರುತ್ತದೆ. ಕಲಬುರಗಿ ಎಸ್‌ಬಿಐ ಅಧಿಕಾರಿಗಳು ಅಡಿಲಾಬಾದ್‌ ಶಾಖೆಯನ್ನು ಸಂಪರ್ಕಿಸಿದರಾದರೂ ಫ‌ಲ ನೀಡಲಿಲ್ಲ. ಹೀಗಾಗಿ ಯಮನಪ್ಪ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಆದರೆ ಇದು ಗ್ರಾಹಕರದ್ದೇ ದೋಷವಾಗಿರುವುದರಿಂದ ನ್ಯಾಯಾಲಯವು ಯಮನಪ್ಪ ದೂರನ್ನು ವಜಾಗೊಳಿಸಿತು. ಹೀಗಾಗಿ ಒಂದು ಅಂಕಿ ತಪ್ಪು ಒತ್ತಿದ್ದರಿಂದಾಗಿ ಯಮನಪ್ಪ 49,500 ರೂ. ಕಳೆದುಕೊಂಡಂತಾಗಿದೆ.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.