ಉಡುಪಿಯಲ್ಲಿ  ಹಲಸು ಮೇಳದ ಘಮ ಘಮ


Team Udayavani, Jun 24, 2018, 6:00 AM IST

230618astro15.jpg

ಉಡುಪಿ: ಇಲ್ಲಿನ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣಕ್ಕೆ ಕಾಲಿಟ್ಟರೆ ಎಲ್ಲೆಡೆ ಹಲಸಿನ ಘಮ ಘಮ. ಬಿಡಿಸಿಟ್ಟ ಹಲಸಿನ ಸೊಳೆಗಳು, ವಿವಿಧ ಉತ್ಪನ್ನಗಳು, ಹಲವು ಜಾತಿಯ ಹಲಸಿನ ಸಸಿಗಳು ಆಕರ್ಷಿಸುತ್ತಿವೆ. 
 
ಜಿಲ್ಲಾಡಳಿತ, ಜಿ.ಪಂ, ತೋಟಗಾರಿಕಾ ಇಲಾಖೆ ಹಾಗೂ ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಹಯೋಗದಲ್ಲಿ ಆಯೋಜಿಸಲಾದ 2 ದಿನಗಳ (ಜೂ.23 ಮತ್ತು 24) “ಜಿಲ್ಲಾಮಟ್ಟದ ಹಲಸು ಮೇಳ-2018′ ಹಲಸಿನ ವೈಶಿಷ್ಟéಗಳನ್ನು ಸಾದರಪಡಿಸಿವೆ.  

ತುಳುನಾಡಿನ ಸಾಂಪ್ರದಾಯಿಕ ಹಲಸಿನ ಕಡುಬಿನಿಂದ ಹಿಡಿದು, ಐಸ್‌ಕ್ರೀಂ ವರೆಗೆ ವಿವಿಧ ರುಚಿಕರ ತಿನಿಸು, ಪೇಯಗಳು ಹಲಸಿನ ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ಗಮನಸೆಳೆದವು.  

ಹಲಸು-ಸೊಗಸು
ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಇಡ್ಲಿ, ಪೋಡಿ (ಸೊಳೆ ಪೋಡಿ, ರಚ್ಚೆ ಪೋಡಿ ಮತ್ತು ಗೂಂಜಿ ಪೋಡಿ), ಹಲಸಿನ ಜ್ಯೂಸ್‌, ಹಪ್ಪಳ, ವಿವಿಧ ರೀತಿಯ ಚಿಪ್ಸ್‌ಗಳು, ಹಲಸಿನ ಹೋಳಿಗೆ, ಪಾಯಸ, ಹಲಸಿನ ಕಬಾಬ್‌ ಮೇಳದಲ್ಲಿ ಹಲಸು ಪ್ರಿಯರ ಮನಗೆದ್ದವು. “ನಾನು ಕಳೆದ ವರ್ಷವಷ್ಟೇ ಕಂಡು ಹಿಡಿದ ಹಲಸಿನ ಹೊಸ ತಿನಿಸು ಉಂಡ್ಲಿಕಾಕ್ಕೆ ಉತ್ತಮ ಬೇಡಿಕೆ ಇದೆ’ ಎಂದರು ಮಂಗಳೂರಿನ ಸರಸ್ವತಿ ಭಟ್‌. 

ದೇಶೀ, ವಿದೇಶಿ ತಳಿಗಳು
ರುದ್ರಾಕ್ಷಿ, ಚಂದ್ರಬಕ್ಕೆ, ಡಂಗ್‌ ಸೂರ್ಯ, ಜೇನು ಬಕ್ಕೆ, ಸಿಂಧೂರ, ಗಂಲೆಸ್‌(ಅಂಟು ರಹಿತ), ಸಮೃದ್ಧಿ, ಸಿಂಗಾಪುರ, ಸೂಪರ್‌ ಅರ್ಲಿ, ಎ ಟು ಝೆಡ್‌ ಮೊದಲಾದ ದೇಶಿ ತಳಿಗಳ ಜತೆಗೆ ಥೈಲ್ಯಾಂಡ್‌ ಪಿಂಕ್‌, ಸಿಂಗಾಪುರಿ ವಾಡಾ ಮೊದಲಾದ ವಿದೇಶಿ ತಳಿಗಳ ಸಸಿಗಳು ಕೂಡ ಲಭ್ಯವಿದ್ದವು. 

ಸೀಡ್‌ಲೆಸ್‌ ಹಲಸು ಕೂಡ ಇದೆ!
ಸಾಣೂರು ಹಲಸು ಬೆಳೆಗಾರರ ಸಂಘದ ಶಂಕರ ಪ್ರಭು ಸಾಣೂರು ಅವರಿಗೆ ಹಲಸು ಬೆಳೆ, ಹಲಸಿನ ಹಣ್ಣಿನ ಉತ್ಪನ್ನ, ಹಲಸುಗಳ ವಿವಿಧ ಜಾತಿಗಳ ಬಗ್ಗೆ ಅಪಾರ ಅನುಭವ. ಹಲಸಿನೊಟ್ಟಿಗೆ 10 ವರ್ಷದಿಂದ ಅವರ ವಿಶೇಷ ಒಡನಾಟ ಹಲಸಿನ ಮೌಲ್ಯವರ್ಧನೆಗೆ ಕೊಡುಗೆ ನೀಡಿದವರಲ್ಲಿ ಅವರೂ ಕೂಡ ಓರ್ವರು. “ಬೇಕಲ ಸೀಡ್‌ಲೆಸ್‌’ ಎಂಬ ಬೀಜರಹಿತ ಹಲಸಿನ ಸಸಿ ನನ್ನ ಬಳಿ ಇದೆ ಎಂದರು ಶಂಕರ ಪ್ರಭು ಅವರು.

ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕ ಮಂದಿ ಹಲಸಿನ ಹಣ್ಣಿನ ರುಚಿ ಸವಿದು ಮನೆಗೂ ಕೊಂಡೊಯ್ದರು. ಹಲಸಿನ ಹಣ್ಣಿನ ಉತ್ಪನ್ನಗಳನ್ನು ಮಾಡುವ ವಿಧಾನವನ್ನು ಅರಿಯುವ ಪ್ರಯತ್ನವನ್ನೂ ಕೆಲವರು ನಡೆಸಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರೂ ಪುತ್ರಿಯೊಂದಿಗೆ ಆಗಮಿಸಿ ಹಲಸಿನ ಹಣ್ಣು ಸವಿದರು. ಗಿಡಗಳ ಖರೀದಿಗೂ ಜನತೆ ಉತ್ಸಾಹ ತೋರಿಸಿದರು.

ಹಲಸು ಐಸ್‌ಕ್ರೀಂಗೆ ಬೇಡಿಕೆ  
ಹಲಸಿನ ಹಣ್ಣಿನ ಐಸ್‌ಕ್ರೀಂ ಪುತ್ತೂರಿನ ಸುಹಾನ್‌ ಮತ್ತು ಮಾನಸ ಅವರು ಮಳೆಯ ನಡುವೆಯೂ ಅನೇಕ ಮಂದಿಗೆ ಹಲಸಿನ ಐಸ್‌ಕ್ರೀಂನ ರುಚಿ ಹತ್ತಿಸುವಲ್ಲಿ ಯಶಸ್ವಿಯಾದರು. “ನಾವು ಸಣ್ಣ ಉದ್ಯಮವೊಂದನ್ನು ಮನೆಪಕ್ಕದಲ್ಲಿಯೇ ನಡೆಸುತ್ತಿದ್ದು ಮಾವು, ಪೇರಳೆ ಹಣ್ಣಿನ ಐಸ್‌ಕ್ರೀಂ ಕೂಡ ಮಾಡುತ್ತೇವೆ. ಉತ್ತಮ ಬೇಡಿಕೆ ಇದೆ’ ಎಂದರು ಸುಹಾನ್‌. ಬೆಳ್ತಂಗಡಿ ಕೈಳಾರಿನ ಗಣಪತಿ ಭಟ್‌ ಅವರು ಕೂಡ ಹಲಸಿನ ಐಸ್‌ಕ್ರೀಂನ್ನು ಮೇಳದಲ್ಲಿ ಪರಿಚಯಿಸಿದರು. 

ದೊಡ್ಡ ಬಳ್ಳಾಪುರ ಹಲಸು ಕೃಷಿಕರ ಯಶೋಗಾಥೆ…
ದೊಡ್ಡಬಳ್ಳಾಪುರ ತೂಬೆಗೆರೆ ಹೋಬಳಿ ಹಲಸು ಬೆಳೆಗಾರರ ರೈತ ಸಂಘದ ಕಾರ್ಯದರ್ಶಿ ರವಿ ಕುಮಾರ್‌ ಅವರ ನೇತೃತ್ವದಲ್ಲಿ ಬಂದಿದ್ದ ಅಲ್ಲಿನ ರೈತರು ಚಂದ್ರಹಲಸು, ಕೆಂಪು ಮತ್ತು ಹಳದಿ ರುದ್ರಾಕ್ಷಿ ಸಹಿತ ಹಲವು ಬಗೆಯ ಹಲಸುಗಳನ್ನು ಜನರಿಗೆ ಪರಿಚಯಿಸಿದರು. “ನಮ್ಮ ಸಂಘ 2008ರಲ್ಲಿ ಕೇವಲ 4 ಲ.ರೂ. ವ್ಯವಹಾರ ಮಾಡುತ್ತಿತ್ತು. ಈಗ 28 ಲ.ರೂ. ವ್ಯವಹಾರ ನಡೆಸುತ್ತಿದೆ. ವರ್ಷಕ್ಕೆ 800 ಟನ್‌ನಷ್ಟು ವ್ಯವಹಾರವಾಗುತ್ತದೆ. ಆಂಧ್ರಪ್ರದೇಶಕ್ಕೆ ಹೆಚ್ಚು ರಫ್ತಾಗುತ್ತಿದೆ. ಬೆಂಗಳೂರು ನಗರದಲ್ಲೇ ಅಪಾರ ಹಲಸು ಖರ್ಚಾಗುತ್ತದೆ. ಒಂದು ಸಂಸ್ಥೆಯಂತೂ ವರ್ಷಕ್ಕೆ 13-18 ಲ.ರೂ. ಮೌಲ್ಯದ ಹಲಸನ್ನು ನಮ್ಮಿಂದ ಖರೀದಿಸಿ ಉಪಕಾರ ಮಾಡುತ್ತಿದೆ. ಹಲಸು ಬೆಳೆಗಾರರು ಲಾಭ ಪಡೆಯುತ್ತಿದ್ದಾರೆ’ ಎಂದರು ರವಿಕುಮಾರ್‌.

ಟಾಪ್ ನ್ಯೂಸ್

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.