ಹಡಿಲು ಬಿದ್ದ ಭೂಮಿಗೆ ಹಸಿರು ಸ್ಪರ್ಶ: ಕೃಷಿಗೆ ಪ್ರೋತ್ಸಾಹಕ ಯೋಜನೆ
Team Udayavani, Jun 24, 2018, 6:30 AM IST
ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಕೊರತೆಯಿಂದ ಅದೆಷ್ಟೋ ಎಕರೆಗಟ್ಟಲೆ ಕೃಷಿ ಭೂಮಿ ಹಡಿಲು ಬಿದ್ದಿವೆ . ಇದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡಲು ವಿಶೇಷ ಪ್ರೋತ್ಸಾಹಕ ಯೋಜನೆ ಮಾಡಿದೆ. ಇದರನ್ವಯ ಕಳೆದ ವರ್ಷ 50 ಜನರಿಗೆ ತಲಾ 1 ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ನೀಡಲಾಗಿದ್ದು ಈ ವರ್ಷ 100 ಜನರಿಗೆ ತಲಾ 1 ಸಾವಿರ ರೂ.ಗಳಂತೆ ಒಟ್ಟು 1 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಯೋಜನೆಯ ಕೃಷಿ ಅಧಿಕಾರಿ ಚೇತನ್ ಕುಮಾರ್, ಪ್ರಗತಿ ಬಂಧು ತಂಡಗಳ ಮೂಲಕ ಗ್ರಾಮಾಭಿವೃದ್ಧಿ ಯೋಜನೆಯ ಅನುದಾನದ ಜತೆಗೆ ಹಡಿಲು ಭೂಮಿ, ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಇದಕ್ಕಾಗಿ ತಂಡದ ಸದಸ್ಯರೇ ಕೃಷಿ ಮಾಡುವುದರೊಂದಿಗೆ ಸರಕಾರಿ ಇಲಾಖೆಗಳ ಮೂಲಕವೂ ಮಾಹಿತಿ ನೀಡಿ ಉಪಯೋಗವಾಗುವಂತೆ ಮಾಡಲಾಗುತ್ತದೆ. ಇದರಿಂದ ಹಲವಾರು ಕುಟುಂಬಗಳು ಅಭಿವೃದ್ಧಿ ಕಂಡಿವೆ ಎಂದು ಹೇಳಿದ್ದಾರೆ.
ಶ್ರಮ ವಿನಿಮಯ
ಸಂಘಗಳನ್ನು ಕಟ್ಟಿಕೊಂಡ ಪ್ರಗತಿ ಬಂಧು ತಂಡದ ಸದಸ್ಯರು ವಾರದ ಶ್ರಮ ವಿನಿಮಯದಲ್ಲಿ ಕೂಲಿಯಾಳುಗಳ ಸಮಸ್ಯೆ ಇರುವುದರಿಂದ ತಮ್ಮ ತಮ್ಮ ಮನೆಯ ಕೆಲಸದ ಜೊತೆಗೆ ಹಡಿಲು ಭೂಮಿ ಕೃಷಿ, ವಾಣಿಜ್ಯ ಬೆಳೆ, ಜಾಗದ ಸಮತಟ್ಟು ಇನ್ನಿತ್ಯಾದಿ ಕೆಲಸ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿದೆ.
ಕೃಷಿಗೆ ಉತ್ತೇಜನ
ಯೋಜನೆಯಡಿ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಆಸಕ್ತರಿಗೆ ಕೃಷಿ ಇಲಾಖಾ ಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಯಲ್ಲಿ ಮಾಹಿತಿಯೊಂದಿಗೆ ಸಸಿ ವಿತರಣೆ, ಅಧ್ಯಯನ ಪ್ರವಾಸ, ಕೃಷಿ ಉತ್ತೇಜನಕ್ಕೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಸ್ವಂತ ಭೂಮಿ ಇಲ್ಲದವರು ಕೂಡಾ ಹಡಿಲು ಬಿದ್ದ ಇತರರ ಭೂಮಿಯನ್ನು ಒಪ್ಪಂದದ ಮೇರೆಗೆ ಪಡೆದುಕೊಂಡು ಕೃಷಿ ನಡೆಸುತ್ತಿರುವುದು ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ.
ಸಾಕಷ್ಟು ಯಶಸ್ವಿ
ಹಡಿಲು ಬಿದ್ದ ಭೂಮಿಯಲ್ಲಿ ಹಸಿರು ಬೆಳೆಸಲು ಯೋಜನೆ ಕೈಗೊಂಡ ಪ್ರೋತ್ಸಾಹಕ ಕಾರ್ಯಕ್ರಮ ಸಾಕಷ್ಟು ಯಶಸ್ವಿಯಾಗಿದೆ. ಹಡಿಲು ಭೂಮಿಯನ್ನು ಇತರರಿಗೆ ಒಪ್ಪಂದದ ಮೂಲಕ ನೀಡಿ ಅಲ್ಲಿ ತರಕಾರಿ, ಭತ್ತ ಬೆಳೆಯುತ್ತಿದ್ದಾರೆ.
– ಮುರಳೀಧರ ಶೆಟ್ಟಿ, ಯೋಜನಾಧಿಕಾರಿ, ಧರ್ಮಸ್ಥಳ ಯೋಜನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ