ಸಂತ ಕಬೀರ್ ಸಮಾಧಿ ಸ್ಥಳದಿಂದ ಪ್ರಧಾನಿ ಮೋದಿ ಪ್ರಚಾರ ಆರಂಭ?
Team Udayavani, Jun 27, 2018, 11:18 AM IST
ಮಘರ್ (ಉ.ಪ್ರ): ಹಿಂದಿನ ಲೋಕ ಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ವಾರಾಣಸಿಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 2019ರ ಮಹಾ ಚುನಾವಣೆಗಾಗಿ ಪ್ರಧಾನಿ ಮೋದಿಯ ವರು ಉತ್ತರ ಪ್ರದೇಶದ ಸಂತ ಕಬೀರ್ ನಗರ್ ಜಿಲ್ಲೆಯಲ್ಲಿರುವ ಮಘರ್ ಎಂಬಲ್ಲಿಂದ ಪ್ರಚಾರ ಆರಂಭಿಸುವ ಸಾಧ್ಯತೆಗಳಿವೆ.
ಕಬೀರ್ ಇದ್ದ 15ನೇ ಶತಮಾನದಲ್ಲಿ “ಮೋಕ್ಷಕ್ಕಾಗಿ ಕಾಶಿ (ವಾರಾಣಸಿ)ಗೆ ತೆರಳಬೇಕು. ಸಾಯಬೇಕಾಗಿದ್ದರೆ ಮಘರ್ಗೆ ತೆರಳಬೇಕು’ ಎಂಬ ಜನಜನಿತ ಮಾತುಗಳಿದ್ದವು. ಅದನ್ನು ಸುಳ್ಳು ಮಾಡಲೆಂದೇ ಅವರು ಇಲ್ಲಿಗೆ ಬಂದು ಸಮಾಧಿ ಹೊಂದಿದರು ಎನ್ನುವುದು ಐತಿಹ್ಯ.
ಈ ಕ್ಷೇತ್ರದ ಸಂಸದರಾಗಿರುವ ಶರದ್ ತ್ರಿಪಾಠಿ ಮಾತನಾಡಿ, “ಗುರುವಾರ ಪ್ರಧಾನಿ ಮೋದಿಯವರು ಇಲ್ಲಿಗೆ ಆಗಮಿಸಲಿದ್ದಾರೆ. ಸಂತ ಕಬೀರ್ ಅವರ ಸಮಾಧಿಗೆ ತೆರಳಿ ಪ್ರಧಾನಿ ಗೌರವ ಅರ್ಪಿಸಿದ ಬಳಿಕ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆ ದಿನ ಕಬೀರ್ ಅವರ 500ನೇ ಪುಣ್ಯ ತಿಥಿಯ ದಿನವೂ ಹೌದು. ಮೋದಿಯವರ ಸಬ್ ಕಾ ಸಾಥ್; ಸಬ್ ಕಾ ವಿಕಾಸ್ಗೆ ಧಾರ್ಮಿಕ ಸಂತನೇ ಪ್ರರೇಣೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !