STARS ಎಫೆಕ್ಟ್


Team Udayavani, Jul 4, 2018, 11:50 AM IST

stars-effect.jpg

“ದಿ ವಿಲನ್‌’, “ಅಂಬಿ ನಿಂಗೆ ವಯಸ್ಸಾಯ್ತೋ’, “ಕುರುಕ್ಷೇತ್ರ’ ….. ನೀವು ಒಮ್ಮೆ ಆಗಸ್ಟ್‌ನತ್ತ ಕಣ್ಣು ನೆಟ್ಟರೆ ಈ ಮೂರು ಸಿನಿಮಾಗಳು ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಅದಕ್ಕೆ ಕಾರಣ ಈ ಸಿನಿಮಾಗಳ ಬಿಡುಗಡೆ. ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾ ಬಿಡುಗಡೆ ಮಾಡಬೇಕೆಂದು “ದಿ ವಿಲನ್‌’ ತಂಡ ಇನ್ನಿಲ್ಲದಂತೆ ಕೆಲಸ ಮಾಡುತ್ತಿದೆ. ನಿರ್ದೇಶಕ ಪ್ರೇಮ್‌ ಚೆನ್ನೈ-ಬೆಂಗಳೂರು ಮಧ್ಯೆ ಓಡಾಡುತ್ತಾ “ವಿಲನ್‌’ಗೆ ಅಂತಿಮ ರೂಪ ಕೊಡುತ್ತಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿರುವ ಸಿನಿಮಾ ವಿಲನ್‌. ಇತ್ತ ಕಡೆ ಅಂಬರೀಶ್‌ ಹಾಗೂ ಸುದೀಪ್‌ ಅವರ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ಕೂಡಾ ಆಗಸ್ಟ್‌ನಲ್ಲಿ ಬರುವುದಾಗಿ ಹೇಳಿಕೊಂಡಿದೆ. ಇನ್ನು, ಕನ್ನಡ ಚಿತ್ರರಂಗದ ಅದ್ಧೂರಿ ಹಾಗೂ ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರ ಕೂಡಾ ಆಗಸ್ಟ್‌ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ಇದಲ್ಲದೇ, ಇನ್ನೂ ಒಂದಷ್ಟು ನಿರೀಕ್ಷಿತ ಚಿತ್ರಗಳು ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ಬರಲು ಪ್ಲ್ರಾನ್‌ ಮಾಡಿಕೊಂಡಿವೆ. ಒಂದರ್ಥದಲ್ಲಿ ಅದು ಸಿನಿಹಬ್ಬ ಎಂದರೆ ತಪ್ಪಲ್ಲ. ಆರು ತಿಂಗಳು ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗಿದ್ದು ಕಡಿಮೆ. ಆದರೆ, ಮುಂದಿನ ಆರು ತಿಂಗಳು ಸ್ಟಾರ್‌ಗಳು ಫೀಲ್ಡ್‌ಗೆ ಇಳಿಯುತ್ತಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಎಫೆಕ್ಟ್ ಈಗಿನಿಂದಲೇ ಶುರುವಾಗಿದೆ.

ಅದು ಹೊಸಬರ ಮೇಲೆ. ಕಳೆದ ವಾರದಿಂದಲೇ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆಯ ಆ ಭರಾಟೆ ಈ ವಾರವೂ ಮುಂದುವರೆದಿದ್ದು, ಆಗಸ್ಟ್‌ ಎರಡನೇ ವಾರದವರೆಗೆ ಮುಂದುವರೆಯುವ ಸಾಧ್ಯತೆ ಇದೆ. ಸ್ಟಾರ್‌ಗಳ ಸಿನಿಮಾ ಬಿಡುಗಡೆಯಾದರೆ ಮುಂದೆ ಥಿಯೇಟರ್‌ ಸಿಗೋದಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಸ್ಟಾರ್‌ಗಳ ಅಬ್ಬರದ ಮಧ್ಯೆ ಕಳೆದು ಹೋಗುತ್ತೇವೆ ಎಂಬ ಭಯ ಮತ್ತೂಂದು ಕಡೆ.

ಈ ಕಾರಣದಿಂದಲೇ ಸಾಲು ಸಾಲು ಹೊಸಬರ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ವಾರ ವಾರ ಕಲರ್‌ಫ‌ುಲ್‌: ನೀವು ಕಳೆದ ವಾರದಿಂದಲೇ ಸಿನಿಮಾ ಬಿಡುಗಡೆಯ ಭರಾಟೆಯನ್ನು ತೆಗೆದುಕೊಂಡರೆ ಕಳೆದ ವಾರ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಈ ವಾರ ಅದರ ಸಂಖ್ಯೆ ಹೆಚ್ಚಿದೆ. ಬರೋಬ್ಬರಿ 9 ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

“6ನೇ ಮೈಲಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’, “ಕುಚ್ಚಿಕು ಕುಚ್ಚಿಕು’, “ಪರಸಂಗ’, “ಧಾಂಗಡಿ’, “ಅಸತೋಮ ಸದ್ಗಮಯ’, “ಹಸಿರು ರಿಬ್ಬನ್‌’, “ವಜ್ರ’, “ಕ್ರಾಂತಿವೀರ ಮಹಾಯೋಗ’ ಚಿತ್ರಗಳು ಈ ವಾರ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದು ಈ ವಾರದ ಕಥೆಯಾದರೆ, ಜುಲೈ ಹಾಗೂ ಆಗಸ್ಟ್‌ ಎರಡನೇ ವಾರದವರೆಗೆ ಬಿಡುಗಡೆಯ ಭರಾಟೆ ಜೋರಾಗಿದೆ. “ಕರಾಳ ರಾತ್ರಿ’, “ಡಬಲ್‌ ಇಂಜಿನ್‌’, “ಟ್ರಂಕ್‌’, “ಅಥರ್ವ’ ಚಿತ್ರಗಳು ಮುಂದಿನ ವಾರ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಇದರಲ್ಲದೇ ಜುಲೈನಲ್ಲಿ “ವಾಸು ಪಕ್ಕಾ ಕಮರ್ಷಿಯಲ್‌’, “ಸಂಕಷ್ಟಹರ ಗಣಪತಿ’, “ನವೋದರ ಡೇಸ್‌’, “ಮೊಗ್ಯಾಂಬೋ’, “ಆದಿ ಪುರಾಣ’, “ಲವ್‌ ಯೂ 2′, “ಕುಮಾರಿ 21 ಎಫ್’, “ಮಟಾಶ್‌’,”ಕರ್ಷಣಂ’, “ಗೋಸಿ ಗ್ಯಾಂಗ್‌’, “ಅಂತ್ಯವಲ್ಲ ಆರಂಭ’, “ಮೂರ್ಕಲ್‌ ಎಸ್ಟೇಟ್‌’  ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಸಿನಿಮಾಗಳು ಆಗಸ್ಟ್‌ ಕೊನೆ ವಾರದ ಒಳಗೆ ಬಿಡುಗಡೆಯಾಗಲಿದೆ. 

ಸ್ಟಾರ್‌ ಧಮಕಾ: ಮೊದಲೇ ಹೇಳಿದಂತೆ ಈ ಬಿಡುಗಡೆಯ ಭರಾಟೆಗೆ ಕಾರಣ ಸ್ಟಾರ್‌ ಸಿನಿಮಾಗಳು. ವರಮಹಾಲಕ್ಷ್ಮೀ ಹಬ್ಬದಿಂದ ಸ್ಟಾರ್‌ಗಳ ಸಿನಿಮಾಗಳ ಬಿಡುಗಡೆ ಆರಂಭವಾಗಲಿದೆ. ಸಹಜವಾಗಿಯೇ ಸ್ಟಾರ್‌ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚಿರುತ್ತದೆ. ಜೊತೆಗೆ ಆರು ತಿಂಗಳಿನಿಂದ ಹೆಚ್ಚೇನು ಸ್ಟಾರ್‌ಗಳ ಸಿನಿಮಾಗಳು ಕೂಡಾ ಬಿಡುಗಡೆಯಾಗಿಲ್ಲ.

ಈ ಕಾರಣದಿಂದ ಸ್ಟಾರ್‌ಗಳ ಹವಾ ಜೋರಾಗಿರುತ್ತದೆ. ಈ ಹವಾದ ಮುಂದೆ ಹೊಸಬರು ಬಂದರೆ ಕಳೆದು ಹೋಗೋದು ಗ್ಯಾರಂಟಿ. ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಅದು ಸ್ಟಾರ್‌ಗಳ ಅಬ್ಬರದ ಮುಂದೆ ಜನರಿಗೆ ತಲುಪದೇ ಹೋಗಬಹುದು, ಜೊತೆಗೆ ಸ್ಟಾರ್‌ ಸಿನಿಮಾಗಳು 300ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡು ಮುಂದುವರೆಯುವುದರಿಂದ ಚಿತ್ರಮಂದಿರಗಳ ಕೊರತೆ ಕೂಡಾ ಕಾಡುತ್ತದೆ.

ಅವಸರಕ್ಕೆ ಬಿದ್ದು ಬಿಡುಗಡೆ ಮಾಡಿದರೆ ಒಂದು ವಾರಕ್ಕೆ ಚಿತ್ರಮಂದಿರದಿಂದ ಎತ್ತಂಗಡಿಯಾಗಬಹುದೆಂಬ ಭಯ ಕೂಡಾ ಹೊಸಬರನ್ನು ಕಾಡುತ್ತಿದೆ.  ಈ ಎಲ್ಲಾ ಕಾರಣದಿಂದ ಸ್ಟಾರ್‌ಗಳ ಹವಾ ಶುರುವಾಗುವ ಮುನ್ನವೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ. 

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ: 6ನೇ ಮೈಲಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಕುಚ್ಚಿಕು ಕುಚ್ಚಿಕು, ಪರಸಂಗ, ಧಾಂಗಡಿ, ಅಸತೋಮ ಸದ್ಗಮಯ, ಹಸಿರು ರಿಬ್ಬನ್‌, ವಜ್ರ, ಕರಾಳ ರಾತ್ರಿ, ಡಬಲ್‌ ಇಂಜಿನ್‌, ಟ್ರಂಕ್‌, ಅಥರ್ವ, ವಾಸು ಪಕ್ಕಾ ಕಮರ್ಷಿಯಲ್‌, ಸಂಕಷ್ಟಹರ ಗಣಪತಿ, ನವೋದರ ಡೇಸ್‌, ಮೊಗ್ಯಾಂಬೋ, ಆದಿ ಪುರಾಣ, ಲವ್‌ ಯೂ 2, ಕುಮಾರಿ 21 ಎಫ್, ಮಟಾಶ್‌, ಕರ್ಷಣಂ, ಗೋಸಿ ಗ್ಯಾಂಗ್‌, ಅಂತ್ಯವಲ್ಲ ಆರಂಭ, ಮೂರ್ಕಲ್‌ ಎಸ್ಟೇಟ್‌, ಲೈಫ್ ಜೊತೆಗೊಂದ್‌ ಸೆಲ್ಫಿ

ಟಾಪ್ ನ್ಯೂಸ್

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

ʼಟಾಕ್ಸಿಕ್ʼ ಅಪ್ಡೇಟ್‌ಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Rishi; ರುದ್ರ ಗರುಡ ಪುರಾಣ ಫಸ್ಟ್ ಲುಕ್ ಬಿಡುಗಡೆ

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

1-wewwqewq

Bantwal: ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ್ಯು

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.