ಬಿಂದಿ ಧರಿಸಿದ್ದಕ್ಕೆ ಕೇರಳ ಮದ್ರಸದಿಂದ 5ನೇ ತರಗತಿ ಬಾಲಕಿ ಉಚ್ಚಾಟನೆ
Team Udayavani, Jul 7, 2018, 11:08 AM IST
ತಿರುವನಂತಪುರ : ಕಿರು ಚಿತ್ರವೊಂದರಲ್ಲಿ ತನಗೆ ನೀಡಲಾದ ಪಾತ್ರವನ್ನು ವಹಿಸುವುದಕ್ಕಾಗಿ ಹಣೆಯಲ್ಲಿ ಶ್ರೀಗಂಧದ ಬಿಂದಿಯನ್ನು ಹಾಕಿಕೊಂಡ ಕಾರಣಕ್ಕೆ ಐದನೇ ತರಗತಿಯ, 10 ವರ್ಷ ಪ್ರಾಯದ ವಿದ್ಯಾರ್ಥಿನಿಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ.
ಬಾಲಕಿಯ ತಂದೆ ಮದ್ರಸದ ಈ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ. “ನನ್ನ ಮಗಳನ್ನು ಮದ್ರಸದಿಂದ ಉಚ್ಚಾಟಿಸಲಾಗಿರುವುದು ದುರದೃಷ್ಟಕರ; ಆಕೆಗೆ ಕಲ್ಲು ಹೊಡೆಯದಿರುವುದೇ ನಮ್ಮ ಅದೃಷ್ಟ’ ಎಂದು ವಿದ್ಯಾರ್ಥಿನಿಯ ತಂದೆ ಉಮ್ಮರ್ ಮಲಾಯಿಲ್ ಅವರು ಫೇಸ್ ಬುಕ್ನಲ್ಲಿ ಹಾಕಿರುವ ಪೋಸ್ಟ್ಗೆ 7,500 ಲೈಕ್ಗಳು ಬಂದಿದ್ದು 2,700 ಮಂದಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ.
“ನನ್ನ ಮಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾಳೆ. ನೃತ್ಯ, ಹಾಡುಗಾರಿಕೆಯಲ್ಲಿ ನಿರತಳಾಗಿದ್ದಾಳೆ. ಮದ್ರಸ ಮಟ್ಟದ ಸ್ಪರ್ಧೆಯಲ್ಲಿ ಆಕೆ ತನ್ನ ಶಾಲೆಗೆ ಹಲವಾರು ಬಹುಮಾನಗಳನ್ನು ಗೆದ್ದು ತಂದಿದ್ದಾಳೆ; ಇದರ ಹೊರತಾಗಿಯೂ ಆಕೆಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ. ಇದಕ್ಕೆ ಕೊಡಲಾಗಿರುವ ಉದಾಹರಣೆ ಆಘಾತಕಾರಿಯಾಗಿದೆ; ಆಕೆ ತನ್ನ ಹಣೆಯಲ್ಲಿ, ಅದೂ ಕಿರುಚಿತ್ರವೊಂದರಲ್ಲಿ ನಟಿಸುವುದಕ್ಕಾಗಿ, ಬಿಂದಿ ಹಾಕಿಕೊಂಡದ್ದಕ್ಕಾಗಿ ಆಕೆಯನ್ನು ಮದ್ರಸದಿಂದ ಉಚ್ಚಾಟಿಸಲಾಗಿದೆ’ ಎಂದು ಬಾಲಕಿಯ ತಂದೆ ಮಲಾಯಿಲ್ ಅವರು ತಮ್ಮ ಫೇಸ್ ಬುಕ್ನಲ್ಲಿ ಮಲಯಾಳಂನಲ್ಲಿ ಬರೆದಿದ್ದಾರೆ.
ಮಲಾಯಿಲ್ ಅವರ ಈ ಪೋಸ್ಟ್ ಓದಿರುವ ಅನೇಕರು ಅವರನ್ನು ಬೆಂಬಲಿಸಿದ್ದಾರೆ; ಮದ್ರಸದ ಕ್ರಮವನ್ನು ಖಂಡಿಸಿದ್ದಾರೆ. ಹಾಗೆಯೇ ಕೆಲವರು ಮದ್ರಸದ ಕ್ರಮ ಸರಿ ಎಂದಿದ್ದಾರೆ. ಮುಸ್ಲಿಮ್ ಹುಡುಗಿಯರು ಶರೀಯತ್ ಕಾನೂನಿನ ಪ್ರಕಾರ ಹಣೆಯಲ್ಲಿ ಬಿಂದಿ ಧರಿಸುವಂತಿಲ್ಲ; ಅದು ಇಸ್ಲಾಮ್ ವಿರೋಧಿ ಕೃತ್ಯವಾಗುತ್ತದೆ ಎಂದವರು ಸಮರ್ಥಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ