ಫುಟ್ಬಾಲ್ ತಂಡದ ಬಾಲಕರನ್ನು ರಕ್ಷಿಸಲು 100 ಚಿಮಣಿಗಳು
Team Udayavani, Jul 8, 2018, 6:00 AM IST
ಬ್ಯಾಂಕಾಕ್: ಥಾಯ್ಲೆಂಡ್ನ ಗುಹೆಯಲ್ಲಿ ಸಿಲುಕಿಕೊಂಡ ಫುಟ್ಬಾಲ್ ತಂಡದ ಬಾಲಕರನ್ನು ರಕ್ಷಿಸುವುದಕ್ಕಾಗಿ 100ಕ್ಕೂ ಹೆಚ್ಚು ಚಿಮಣಿಗಳನ್ನು ಕೊರೆಯಲಾಗುತ್ತಿದೆ. ಮಕ್ಕಳನ್ನು ನೇರವಾಗಿ ಗುಹೆಯಿಂದಲೇ ಎತ್ತಿ ತೆಗೆಯಲು ಈ ರಂಧ್ರಗಳನ್ನು ಗುಡ್ಡದಿಂದ ಕೊರೆಯಲಾಗುತ್ತಿದೆ. ಈಗಾಗಲೇ 400 ಮೀ. ವರೆಗೆ ಕೆಲವು ರಂಧ್ರಗಳನ್ನು ಕೊರೆಯಲಾಗಿದೆ. ಆದರೆ ಇನ್ನೂ ಗುಹೆಯನ್ನು ಒಂದೂ ರಂಧ್ರವೂ ತಲುಪಿಲ್ಲ. ಅಂದಾಜು 600 ಮೀ. ರಂಧ್ರ ಕೊರೆದರೆ ಗುಹೆ ಸಿಗಬಹುದು ಎಂದು ಊಹಿಸಲಾಗಿದೆ.
ಜೂನ್ 23 ರಂದು ಗುಹೆಗೆ ಪ್ರವಾಸಕ್ಕಾಗಿ ತೆರಳಿದ್ದ ಬಾಲಕರು, ನೀರಿನ ಮಟ್ಟ ಏರಿದ್ದರಿಂದಾಗಿ ಹೊರಬರಲಾಗದೇ ಸಿಲುಕಿಕೊಂಡಿದ್ದರು. 10 ದಿನಗಳ ನಂತರ ಇವರು ಗುಹೆಯಲ್ಲಿರುವುದು ಕಂಡುಬಂದಿತ್ತು. ಈಗ ದೇಶ ವಿದೇಶಗಳ ಪರಿಣಿತರು ಇವರನ್ನು ಸುರಕ್ಷಿತವಾಗಿ ಕರೆತರಲು ಶ್ರಮಿಸುತ್ತಿದ್ದಾರೆ.
ಕುಟುಂಬದವರಿಗೆ ಬಾಲಕರ ಪತ್ರ: ಇದೇ ಮೊದಲ ಬಾರಿಗೆ ಕುಟುಂಬದವರಿಗೆ ಬಾಲಕರು ಪತ್ರ ಬರೆದಿದ್ದು, ನಾವೆಲ್ಲರೂ ಸುರಕ್ಷಿತವಾಗಿದ್ದೇವೆ ಎಂದಿದ್ದಾರೆ. ಒಬ್ಬ ವಿದ್ಯಾರ್ಥಿಯಂತೂ “ಶಿಕ್ಷಕರೇ, ತುಂಬಾ ಹೋಮ್ವರ್ಕ್ ನೀಡಬೇಡಿ’ ಎಂದು ಲಘುಧಾಟಿಯಲ್ಲಿ ಬರೆದಿದ್ದಾನೆ. ಇದೇ ವೇಳೆ, ಮಕ್ಕಳ ಪಾಲಕರ ಬಳಿ ಕೋಚ್ ಕ್ಷಮೆ ಕೇಳಿದ್ದು, ಮಳೆಗಾಲ ಎಂದು ಗೊತ್ತಿದ್ದೂ ಮಕ್ಕಳನ್ನು ಗುಹೆಗೆ ಕರೆದೊಯ್ದಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ