ಲಾಕಪ್ಡೆತ್: ನಾಲ್ವರು ಪೊಲೀಸರ ಅಮಾನತು
Team Udayavani, Jul 14, 2018, 7:20 AM IST
ಮಂಡ್ಯ: ನಗರದ ಪಶ್ಚಿಮ ಠಾಣೆಯಲ್ಲಿ ಲಾಕಪ್ಡೆತ್ ಪ್ರಕರಣ ಸಂಬಂಧ ನಾಲ್ವರು ಪೊಲೀಸರನ್ನು ಅಮಾನತು
ಮಾಡಲಾಗಿದೆ. ಬೈಕ್ ಕಳ್ಳತನ ಆರೋಪದ ಮೇರೆಗೆ ಠಾಣೆಗೆ ಕರೆತಂದಿದ್ದ ಮದ್ದೂರು ತಾಲೂಕು ಬೆಳೂ¤ರು
ಗ್ರಾಮದ ಮೂರ್ತಿ (45) ಅನುಮಾನಾಸ್ಪದವಾಗಿ ಮೃತಪಟ್ಟ ವ್ಯಕ್ತಿ.
ಪೊಲೀಸರೇ ವಿಚಾರಣೆ ವೇಳೆ ಹೊಡೆದು ಸಾಯಿಸಿದ್ದಾರೆ. ಇದೊಂದು ಲಾಕಪ್ಡೆತ್ ಎಂದು ಆಪಾದಿಸಲಾಗಿದೆ. ಈ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು ಬಾತ್ ರೂಂನಲ್ಲಿ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಿ. ರಾಧಿಕಾ, ಇನ್ನೆರಡು ದಿನಗಳಲ್ಲಿ ಸಿಐಡಿಗೆ ಪ್ರಕರಣ
ಹಸ್ತಾಂತರಗೊಳ್ಳಲಿದ್ದು, ಎಲ್ಲಾ ಹಂತಗಳಲ್ಲೂ ತನಿಖೆ ಪಾರದರ್ಶಕವಾಗಿ ನಡೆಯಲಿದೆ. ಘಟನೆ ಸಂಬಂಧ
ಪಿಎಸ್ಸೆ„ ಅನಂತಕುಮಾರ್, ಮುಖ್ಯಪೇದೆ ಮಾದೇಶ, ಪೇದೆಗಳಾದ ವರದರಾಜು, ಮಲ್ಲಿಕಾರ್ಜುನ ಅವರನ್ನು
ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.