ಕಣ್ಣೀರು ತಂದ ಕಂದಮ್ಮನ ನಡೆ
Team Udayavani, Jul 16, 2018, 8:15 AM IST
ಜೈಪುರ: ಕಾಶ್ಮೀರದಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ಮುಕುತ್ ಬಿಹಾರಿ ಮೀನಾ (25) ಅವರ ಪಾರ್ಥಿವ ಶರೀರ ಜೈಪುರದಲ್ಲಿರುವ ಅವರ ಗ್ರಾಮಕ್ಕೆ ಬಂದಾಗ ನಡೆದ ಘಟನೆಯೊಂದು ದೇಶವಾಸಿಗಳಲ್ಲಿ ಕಣ್ಣೀರು ತರಿಸಿದೆ. ತ್ರಿವರ್ಣ ಧ್ವಜವನ್ನು ಹೊದಿಸಿದ ಯೋಧನ ಪಾರ್ಥಿವ ಶರೀರವನ್ನು ಅವರ ಮನೆಯ ಆವರಣದಲ್ಲಿ ಇಟ್ಟೊಡನೆ, ಅವರ ಪುಟ್ಟ ಮಗುವು ಪಾರ್ಥಿವ ಶರೀರದ ಮೇಲೆ ಬಂದು ಕುಳಿತು, ಅಪ್ಪನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ ದೃಶ್ಯವು ಎಂಥ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಈ ಘಟನೆಗೆ ಸಾಕ್ಷಿಯಾದ ಜಲಾವರ್ ನ ಜಿಲ್ಲಾಧಿಕಾರಿ ಜಿತೇಂದ್ರ ಸೋನಿ ಅವರು ಫೇಸ್ ಬುಕ್ ನಲ್ಲಿ ಆ ಮಗುವಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.
‘ನೀನು ಬಂದು ಅಪ್ಪನ ಮೃತದೇಹದ ಮೇಲೆ ಕುಳಿತಿದ್ದನ್ನು, ಸ್ವಲ್ಪವೂ ಅಳದೇ ಅಪ್ಪನನ್ನೇ ದಿಟ್ಟಿಸುತ್ತಿದ್ದುದನ್ನು ನೋಡಿದ ನಮ್ಮ ಮನಗಳಲ್ಲಿ ದುಃಖ ಉಮ್ಮಳಿಸಿ ಬಂದಿತ್ತು. ಆ ಕ್ಷಣದಲ್ಲಿ ನಿನ್ನ ಮುಗ್ಧತೆ, ನಿನ್ನ ತಂದೆಯ ತ್ಯಾಗ ಮಾತ್ರವೇ ನಮ್ಮನ್ನು ಆವರಿಸಿತ್ತು. ಇಡೀ ದೇಶದ ನಾಗರಿಕರ ಹಾರೈಕೆ ನಿನ್ನ ಮೇಲಿರುತ್ತದೆ. ಚೆನ್ನಾಗಿರು ಕಂದಾ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್