1 ಗಂಟೆ ಮಟ್ಟಿಗೆ ಪಂಕಜಾ ಸಿಎಂ ಆಗಲಿ; ಫಡ್ನವೀಸ್ ಗೆ ಶಿವಸೇನಾ!
Team Udayavani, Jul 28, 2018, 3:24 PM IST
ಮುಂಬೈ: ಒಂದು ಗಂಟೆಯಾದರೂ ಸಚಿವೆ ಪಂಕಜಾ ಮುಂಡೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಶಿವಸೇನಾ ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ತಿರುಗೇಟು ನೀಡಿದೆ.
ಮರಾಠ ಮೀಸಲಾತಿ ಕಡತವನ್ನು ಕ್ಲಿಯರ್ ಮಾಡುವ ನಿಟ್ಟಿನಲ್ಲಿ ಕ್ಯಾಬಿನೆಟ್ ಸಹೋದ್ಯೋಗಿ ಪಂಕಜಾ ಮುಂಡೆಯನ್ನು ಒಂದು ಗಂಟೆ ಮಟ್ಟಿಗೆ ಸಿಎಂ ಮಾಡಿ ಎಂದು ಶಿವಸೇನಾ ಹೇಳಿದೆ.
ಮರಾಠ ಮೀಸಲಾತಿಗೆ ಆಗ್ರಹಿಸಿ ಮುಂಬೈನಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆ, ಬಂದ್ ನಡೆದಿತ್ತು. ಗ್ರಾಮೀಣಾಭಿವೃದ್ಧಿ ಖಾತೆ ಸಚಿವೆ ಪಂಕಜಾ ಮುಂಡೆ ಇತ್ತೀಚೆಗೆ ಮಾತನಾಡುತ್ತ, ಒಂದು ವೇಳೆ ತಾನು ಸಿಎಂ ಆಗಿದ್ದರೆ ಮರಾಠ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿರಲಿಲ್ಲ ಎಂದು ಹೇಳಿದ್ದರು.
ಮರಾಠ ಮೀಸಲಾತಿ ಕಡತ ನನ್ನ ಟೇಬಲ್ ಮೇಲೆ ಇದ್ದಿದ್ದರೆ ನಾನು ಒಂದು ಕ್ಷಣವೂ ತಡಮಾಡದೇ ನಿರ್ಧಾರ ಕೈಗೊಳ್ಳುತ್ತಿದ್ದೆ ಎಂದು ಮುಂಡೆ ಅಭಿಪ್ರಾಯ ಹೊರಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tollywood: ಜೂ.ಎನ್ಟಿಆರ್ ʼದೇವರʼ ಚಿತ್ರತಂಡದ ಮೇಲೆ ಜೇನುನೊಣ ದಾಳಿ; ಕೆಲವರಿಗೆ ಗಾಯ
Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ
Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ
Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ
Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ