ಕರ್ಕಿಕಳಿ: ದೋಣಿ ಮಗುಚಿ ಅಪಾರ ನಷ್ಟ
Team Udayavani, Jul 30, 2018, 11:28 AM IST
ಉಪ್ಪುಂದ: ಇಲ್ಲಿಗೆ ಸಮೀಪದ ಕರ್ಕಿಕಳಿ ಬಳಿ ತೀರಕ್ಕೆ ಸನಿಹ ಸಮುದ್ರದಲ್ಲಿ ದೋಣಿ ಮಗುಚಿದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ. ಅದೃಷ್ಟವಶಾತ್ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಶ್ರೀ ಮಹಾಸತಿ ಕೃಪಾ ನಾಡ ದೋಣಿಯ ಮೀನುಗಾರರಾದ ಮಂಜುನಾಥ ಖಾರ್ವಿ, ಪಾಂಡುರಂಗ ಖಾರ್ವಿ, ರವೀಂದ್ರ ಖಾರ್ವಿ, ಸುಂದರ ಮೊಗವೀರ ಪಾರಾದವರು.
ರವಿವಾರ ಮುಂಜಾನೆ ಮೀನುಗಾರಿಕೆಗೆ ತೆರಳಿದ ಸಂದರ್ಭ ಏಕಾಏಕಿ ಬೃಹತ್ ಅಲೆಗಳು ಅಪ್ಪಳಿಸಿ ದೋಣಿ ಮಗುಚಿಕೊಂಡಿದೆ. ಮೀನುಗಾರರು ತತ್ಕ್ಷಣ ನೀರಿಗೆ ಧುಮುಕಿದ್ದರಿಂದ ಅಪಾಯವಿಲ್ಲದೆ ಪಾರಾದರು.
ಅನಂತರ ದಡದಲ್ಲಿರುವ ಮೀನುಗಾರರಿಗೆ ಮಾಹಿತಿ ರವಾನಿಸಿದರು. ಸ್ಥಳೀಯ ಮೀನುಗಾರರು ಸ್ಥಳಕ್ಕೆ ಬಂದು ಸಹಾಯಹಸ್ತ ಚಾಚುವಲ್ಲಿ ಯಶಸ್ವಿಯಾದರು. ಸುಮಾರು 50ಕ್ಕೂ ಹೆಚ್ಚು ಮೀನುಗಾರರು ಮಗುಚಿದ ಪಲ್ಟಿಯಾದ ದೋಣಿಯನ್ನು ದಡಕ್ಕೆ ತರುವಲ್ಲಿ ಶ್ರಮಿಸಿದರು.
ಅಪಾರ ನಷ್ಟ
ಅಲೆಗಳ ರುದ್ರನರ್ತನದಿಂದ ದೋಣಿಗೆ ಹಾನಿಯಾಗಿದ್ದು, ಎಂಜಿನ್ ಒಡೆದು ಹೋಗಿ ಸುಮಾರು 3 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಬಲೆ ಕೊಚ್ಚಿ ಹೋಗಿದೆ.
ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ