ಆ.20ರಂದು ತಪ್ಪದೇ ಹಾಜರಾಗಿ: ಚಿದು ಕುಟುಂಬಕ್ಕೆ ಕೋರ್ಟ್ ಆದೇಶ
Team Udayavani, Jul 30, 2018, 4:53 PM IST
ಚೆನ್ನೈ : ಕಾಳಧನ ಪ್ರಕರಣದಲ್ಲಿ ಆಗಸ್ಟ್ 20ರಂದು ತನ್ನ ಮುಂದೆ ತಪ್ಪದೇ ಹಾಜರಾಗುವಂತೆ ನಗರದ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಇಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಕುಟುಂಬ ಸದಸ್ಯರಿಗೆ ಆದೇಶಿಸಿದೆ.
ಚಿದಂಬರಂ ಅವರ ಪತ್ನಿ ನಳಿನಿ, ಪುತ್ರ ಕಾರ್ತಿ ಮತ್ತು ಆತನ ಪತ್ನಿ ಶ್ರೀನಿಧಿ ಅವರು ಇಂದು ಈ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟಿನಲ್ಲಿ ಹಾಜರಿರಬೇಕಿತ್ತು. ಅದಕ್ಕೆ ವಿಫಲರಾಗಿರುವ ಕಾರಣ ಇವರು ಆಗಸ್ಟ್ 20ರಂದು ತಪ್ಪದೇ ಹಾಜರಾಗಬೇಕೆಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಮಲರವಿಳಿ ಅವರು ಆದೇಶಿಸಿದರು.
ಐಟಿ ಇಲಾಖೆಯ ಪ್ರಕಾರ ಕಾರ್ತಿ ಚಿದಂಬರಂ ಅವರು ಬ್ರಿಟನ್ನಲ್ಲಿನ ಮೆಟ್ರೋ ಬ್ಯಾಂಕ್ನಲ್ಲಿರುವ ತನ್ನ ಖಾತೆಯನ್ನು ಮತ್ತು ಅಮೆರಿಕದ ನ್ಯಾನೋ ಹೋಲ್ಡಿಂಗ್ ಎಲ್ಎಲ್ಸಿಯಲ್ಲಿನ ತನ್ನ ಹೂಡಿಕೆಯನ್ನು ಬಹಿರಂಗಪಡಿಸಿಲ್ಲ; ಹಾಗೆಯೇ ತನ್ನ ಸಹ ಒಡೆತನದ ಚೆಸ್ ಗ್ಲೋಬಲ್ ಅಡ್ವೈಸರಿ ಕಂಪೆನಿ ಮಾಡಿರುವ ಹೂಡಿಕೆಯನ್ನು ಕೂಡ ಕಾರ್ತಿ ಬಹಿರಂಗಪಡಿಸಿಲ್ಲ; ಇದು ಕಾಳಧನ ಕಾಯಿದೆಯಡಿಯ ಅಪರಾಧವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ