ರುದ್ರ ಪ್ರತಾಪ;ಶಿವನ ಗೆಟಪ್ನಲ್ಲಿ ಪೂಜೆ:ಲಾಲು ಪುತ್ರ ಮತ್ತೆ ಸುದ್ದಿ!
Team Udayavani, Jul 31, 2018, 3:06 PM IST
ಪಾಟ್ನಾ: ಆರ್ಜೆಡಿ ಯುವ ನಾಯಕ ತೇಜ್ಪ್ರತಾಪ್ ಯಾದವ್ ಇದೀಗ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.
ದಿಯೋಘರ್ನ ಬಾಮಾ ಬೈದ್ಯನಾಥ್ ಧಾಮಕ್ಕೆ ಯಾತ್ರೆ ಕೈಗೊಂಡಿರುವ 29 ರ ಹರೆಯದ ಮಾಜಿ ಸಚಿವ ತೇಜ್ ಪ್ರತಾಪ್ ಶಿವನ ವೇಷ ಧರಿಸಿ ನಗರದ ಶಿವ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮಗಳ ಗಮನ ಸೆಳೆದರು.
ಕೆಲ ದಿನಗಳ ಹಿಂದೆ ದಲಿತರ ಮನೆಯ ಹೊರಗೆ ತಣ್ಣೀರ ಸ್ನಾನ, ಸೈಕಲ್ ಯಾತ್ರೆಯ ವೇಳೆ ಬಿದ್ದು ಸುದ್ದಿಯಾದ ತೇಜ್ಪ್ರತಾಪ್ ಹಿಂದೊಮ್ಮೆ ಕೃಷ್ಣನ ವೇಷವನ್ನು ಧರಿಸಿ ಕೃಷ್ಣನ ದೇಗುಲಕ್ಕೆ ಆಗಮಿಸಿ ಸುದ್ದಿಯಾಗಿದ್ದರು.