ಆರ್ಥರ್ ರೋಡ್ ಜೈಲ್ ವೀಡಿಯೋ ಕೊಡಿ
Team Udayavani, Aug 1, 2018, 10:52 AM IST
ಲಂಡನ್: ದೇಶದ ಜೈಲುಗಳ ಸ್ಥಿತಿಗತಿ, ವಿಶೇಷವಾಗಿ ಮುಂಬಯಿಯ ಆರ್ಥರ್ ರೋಡ್ ಸೆರೆಮನೆ ಬಗ್ಗೆ ವಿಡಿಯೋ ಚಿತ್ರೀಕರಣ ನಡೆಸಿ ಮೂರು ವಾರಗಳ ಒಳಗಾಗಿ ಸಲ್ಲಿಸುವಂತೆ ಲಂಡನ್ನ ವೆಸ್ಟ್ಮಿನಿಸ್ಟರ್ನಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಕೇಂದ್ರ ತನಿಖಾ ಸಂಸ್ಥೆಗಳಿಗೆ ಆದೇಶಿಸಿದೆ.
ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿದ ವಿಜಯ ಮಲ್ಯ ಅವರನ್ನು ಭಾರತ ಕ್ಕೆ ಗಡಿಪಾರು ಮಾಡುವ ಬಗೆ ಗಿನ ಪ್ರಕರಣದ ವಿಚಾರಣೆ ವೇಳೆ ಮಲ್ಯ ಪರ ನ್ಯಾಯವಾದಿ “ಭಾರತದ ಜೈಲುಗಳಲ್ಲಿ ಪ್ರಾಕೃತಿಕವಾಗಿ ಬೆಳಕು ಮತ್ತು ಗಾಳಿ ಸಂಚಾರ ಇರುವುದಿಲ್ಲ’ ಎಂದು ವಾದಿಸಿದರು. ಈ ಹಿನ್ನೆಲೆಯಲ್ಲಿ ಜಡ್ಜ್ ಎಮ್ಮಾ ಆರ್ಬತ್ನಾಟ್, ಆರ್ಥರ್ ರೋಡ್ನ ಜೈಲಿನ ಬ್ಯಾರೆಕ್ ಸಂಖ್ಯೆ 12ರ ವಿಡಿಯೋ ಚಿತ್ರೀ ಕರಣ ನಡೆಸುವಂತೆ ಆದೇಶಿಸಿದರು. ಮುಂ ದಿನ ವಿಚಾರಣೆ ಸೆ.12ರಂದು ನಡೆಯಲಿದೆ.
ಇದಕ್ಕೂ ಮುನ್ನ ಸಿಬಿಐ, ಇ.ಡಿ. ಅಧಿ ಕಾರಿಗಳು ಕಾರಾಗೃಹದ ಫೋಟೋ ಸಲ್ಲಿಸಿ ದಾಗ ಮಲ್ಯ ವಕೀಲರ ತಂಡ ಅದಕ್ಕೆ ಆಕ್ಷೇಪಿ ಸಿತು. ಅದಕ್ಕೆ ಸಹಮತ ವ್ಯಕ್ತಪಡಿ ಸಿದ ಜಡ್ಜ್ “ಮಧ್ಯಾಹ್ನದ ಅವಧಿಯಲ್ಲಿ ಚಿತ್ರೀಕರಣ ನಡೆಸಲು ಸಾಧ್ಯವೇ? ಕಿಟಕಿ ಮೂಲಕ ಸಹಜವಾಗಿ ಬೆಳಕು-ಗಾಳಿ ಬರುತ್ತದೆಯೋ ಎಂದು ನನಗೂ ನೋಡಬೇಕು’ ಎಂದರು.
ಸಾಲ ಪಾವತಿಗೆ ಸಿದ್ಧ: ವಿಚಾರಣೆ ಆರಂಭಕ್ಕೆ ಮುನ್ನ ಪತ್ರಕರ್ತರ ಜತೆಗೆ ಮಾತನಾಡಿದ್ದ ಮಲ್ಯ “ನನ್ನ ವಿರುದ್ಧ ಇರುವ ಆರೋಪಗಳೆಲ್ಲ ಸುಳ್ಳು. ಬ್ಯಾಂಕ್ಗಳಿಗೆ ಬಾಕಿ ಮೊತ್ತ ಪಾವತಿ ಮಾಡಲು ಸಿದ್ಧನಿದ್ದೇನೆ. ಅದಕ್ಕಾಗಿ 14 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಮಾರಲು ಸಿದ್ಧ’ ಎಂದು ಹೇಳಿದ್ದರು.
ಆರ್ಥರ್ ರಸ್ತೆ ಜೈಲು ಅತ್ಯುತ್ತಮ ಕಾರಾಗೃಹ
ಗಡೀಪಾರು ಬಳಿಕ ಮಲ್ಯ ಅವರನ್ನು ಇರಿಸಲು ಉದ್ದೇಶಿಸಲಾಗಿರುವ ಮುಂ ಬೈನ ಆರ್ಥರ್ ರಸ್ತೆ ಜೈಲು ದೇಶದಲ್ಲೇ ಅತ್ಯುತ್ತಮ ಕಾರಾಗೃಹ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. ಯುಕೆ ಕೋರ್ಟ್ ನಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿ ಸಿರುವ ಇಲಾಖೆ, ಇತರೆ ದೇಶಗಳಂತೆ ಭಾರತದ ಜೈಲುಗಳೂ ಚೆನ್ನಾಗಿವೆ. ಇಲ್ಲಿ ಕೈದಿಗಳ ಹಕ್ಕುಗಳನ್ನು ರಕ್ಷಿಸಲಾಗುತ್ತಿದೆ. ಜೈಲಿನಲ್ಲಿ ಜೀವಕ್ಕೆ ಅಪಾಯವಿದೆ ಎಂಬ ಮಲ್ಯ ಅವರ ವಾದವು ದಾರಿತಪ್ಪಿಸು ವಂಥದ್ದು ಎಂದೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ