ರಕ್ಷಿತ್ಶೆಟ್ಟಿ ಜೊತೆ ಕೆ.ಮಂಜು ಹೊಸ ಚಿತ್ರ
Team Udayavani, Aug 4, 2018, 11:28 AM IST
ನಿರ್ಮಾಪಕ ಕೆ.ಮಂಜು ಈಗ ರಕ್ಷಿತ್ಶೆಟ್ಟಿ ಜೊತೆ ಒಂದು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಹಾಗಂತ, ಸುದ್ದಿಯೊಂದು ಜೋರಾಗಿ ಕೇಳಿಬರುತ್ತಿದೆ. ಆದರೆ, ರಕ್ಷಿತ್ಶೆಟ್ಟಿಗೆ ಸಿನಿಮಾ ಮಾಡುವ ಪ್ರಯತ್ನ ಈಗಿನದಲ್ಲ. ಕೆ.ಮಂಜು ಕಳೆದ ನಾಲ್ಕು ವರ್ಷಗಳ ಹಿಂದೆಯೇ ರಕ್ಷಿತ್ ಶೆಟ್ಟಿ ಜೊತೆ ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಿದ್ದರು. ಆದರೆ, ರಕ್ಷಿತ್ಶೆಟ್ಟಿ ಸಿನಿಮಾಗಳಲ್ಲಿ ಬಿಜಿಯಾದ್ದರಿಂದ ಸಾಧ್ಯವಾಗಿರಲಿಲ್ಲ.
ಈಗ ರಕ್ಷಿತ್ಶೆಟ್ಟಿ ಅವರ ಸಿನಿಮಾ ಮಾಡುವತ್ತ ಕೆ.ಮಂಜು ತಮ್ಮ ಚಿತ್ತ ಹರಿಸಿದ್ದಾರೆ. ಸದ್ಯಕ್ಕೆ ಇವರಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಾಗಾದರೆ, ಈ ಚಿತ್ರಕ್ಕೆ ನಿರ್ದೇಶಕ ಯಾರು? ಇದಕ್ಕೆ ಉತ್ತರ ಯೋಗರಾಜ್ ಭಟ್ ಎಂಬುದು ಕೆ.ಮಂಜು ಮಾತು. ಈ ಹಿಂದೆ ಯೋಗರಾಜ್ ಭಟ್ ಕೆ.ಮಂಜು ಅವರಿಗೊಂದು ಕಥೆ ಹೇಳಿದ್ದರಂತೆ.
ಆ ಕಥೆ, ರಕ್ಷಿತ್ಶೆಟ್ಟಿ ಅವರಿಗೆ ಸರಿ ಹೊಂದುತ್ತೆ ಎಂದು ಮಂಜು ಅಂದುಕೊಂಡಿದ್ದರು. ಆದರೆ, ಆಗ ಭಟ್ಟರು ಬಿಜಿ, ಅತ್ತ ರಕ್ಷಿತ್ಶೆಟ್ಟಿ ಕೂಡ ಬಿಜಿಯಾಗಿದ್ದರು. ಇತ್ತ, ಕೆ.ಮಂಜು ಕೂಡ ಚುನಾವಣೆ ಇತ್ಯಾದಿ ಅಂತ ಬಿಜಿಯಲ್ಲಿದ್ದರು. ಈಗ ರಕ್ಷಿತ್ಶೆಟ್ಟಿ ಜೊತೆ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ.
ಸದ್ಯ, ರಕ್ಷಿತ್ಶೆಟ್ಟಿ “ಅವನೇ ಶ್ರೀಮನ್ನಾರಾಯಣ’, “ಚಾರ್ಲಿ’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಕೆ.ಮಂಜು ಕೂಡ ಬೇರೆ ಚಿತ್ರಗಳತ್ತ ಮುಖ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, 2019 ರಲ್ಲಿ ರಕ್ಷಿತ್ಶೆಟ್ಟಿ ಅವರ ಹೊಸ ಚಿತ್ರ ಸೆಟ್ಟೇರಬಹುದು. ಆದರೂ ಈ ಕುರಿತಂತೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್