ರಾಜನಾಥ್ ಭೇಟಿಯಾದ ಫಾರೂಕ್; ನಿಷ್ಪಕ್ಷದ ತನಿಖೆಗೆ ಒತ್ತಾಯ
Team Udayavani, Aug 7, 2018, 5:01 PM IST
ಹೊಸದಿಲ್ಲಿ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯರಾಗಿರುವ ಫಾರೂಕ್ ಅಬ್ದುಲ್ಲ ಅವರು ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಕಳೆದ ವಾರ ತನ್ನ ನಿವಾಸದ ಆವರಣಕ್ಕೆ ಎಸ್ಯುವಿ ವಾಹನವನ್ನು ನುಗ್ಗಿಸಿ.ಅತಿಕ್ರಮಣ ನಡೆಸಿ, ಅಂತಿಮವಾಗಿ ಭದ್ರತಾ ಸಿಬಂದಿಗಳ ಗುಂಡಿಗೆ ಯುವಕನೋರ್ವ ಹತನಾದ ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತದ ತನಿಖೆ ನಡೆಸಬೇಕೆಂದು ವಿನಂತಿಸಿದರು.
ಮೃತ ಯುವಕನ ಮನೆಯವರ ಭಾವನೆಯನ್ನು ಲೆಕ್ಕಿಸಿ ಘಟನೆಯ ಹಿಂದಿನ ಸತ್ಯವು ತನಿಖೆಯಿಂದ ಹೊರ ಬರುವಂತೆ ಮಾಡಬೇಕು ಎಂದು ಅಬ್ದುಲ್ಲ ಕೋರಿದರು.
ಘಟನೆಯ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ ವಿವಿಧ ರೀತಿಯ ವರಿದಿಗಳು ಬಂದಿವೆ. ಮೃತ ಯುವಕನ ಮನೆಯವರು, ಹಿತೈಷಿಗಳು ಮತ್ತು ಸ್ನೇಹಿತರ ವಿವರಣೆ ಬೇರೆಯೇ ಇದೆ. ಇವೆಲ್ಲದರ ಹಿಂದಿನ ಸತ್ಯವೇನೆಂಬುದು ಹೊರಬರಬೇಕು ಎಂದು ಅಬ್ದುಲ್ಲ ಮನವಿ ಮಾಡಿಕೊಂಡರು. ರಾಜನಾಥ್ ಸಿಂಗ್ ಅವರು ಅಬ್ದುಲ್ಲ ಅವರಿಗೆ ಅಂತೆಯೇ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ