ಶೈಕ್ಷಣಿಕ ಸಾಲ ಬಡ್ಡಿ ಮನ್ನಾ ಭರವಸೆ
Team Udayavani, Aug 9, 2018, 10:54 AM IST
ಕಲಬುರಗಿ: ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲದ ಬಡ್ಡಿ ತುಂಬುವುದಾಗಿ ಕೇಂದ್ರ ಸಚಿವರಾದ ಸದಾನಂದಗೌಡ,
ಅನಂತಕುಮಾರ, ಪ್ರಕಾಶ ಜಾವಡೇಕರ ಈಶಾನ್ಯ ಕರ್ನಾಟಕ ಶಿಕ್ಷಕರ ವೇದಿಕೆಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ವಾರ್ಷಿಕ ಆದಾಯ 4ರಿಂದ 5 ಲಕ್ಷ ರೂ.ಗೂ ಕಡಿಮೆಯಿರುವರ ಮಕ್ಕಳು ಉನ್ನತ ವ್ಯಾಸಾಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲದ ಬಡ್ಡಿ ತುಂಬುವುದಾಗಿ ಕೇಂದ್ರ ಸರ್ಕಾರ 2009 ಹಾಗೂ 2014ರಲ್ಲಿ ಆದೇಶ ನೀಡಿದೆ. ಆದರೆ ಕೇಂದ್ರ ಸರ್ಕಾರ ಬಡ್ಡಿಯ ಹಣ ತುಂಬದ ಕಾರಣ ಬ್ಯಾಂಕ್ಗಳು ಅತ್ಯಂತ ದುಬಾರಿ ಶೇ.13ರಿಂದ ಶೇ.10 ರಷ್ಟು ಬಡ್ಡಿ ಬಾಕಿ ಹಣ ವಸೂಲಿ ಮಾಡುತ್ತಿವೆ. ಇದರಿಂದ ದ್ಯೋಗವಿಲ್ಲದೇ ಪರದಾಡುವ ನಿರುದ್ಯೋಗಿ ಪದವೀಧರರು ಹಣ ತುಂಬಲಾಗದಿರುವುದರಿಂದ ಬ್ಯಾಂಕ್ ಅಧಿಕಾರಿಗಳು ಪಾಲಕರಿಗೆ ನೋಟಿಸ್ ನೀಡುವ ಮೂಲಕ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕುವ ಜೊತೆ ವಸೂಲಾತಿಗೆ ವಿವಿಧ ರೀತಿಯ ಕಿರುಕುಳ ನೀಡುತ್ತಿದ್ದಾರೆ.
ಇದರಿಂದ ಸಾಲ ಪಡೆದ ಪಾಲಕರು ಆತಂಕಕ್ಕೊಳಗಾಗಿದ್ದಾರೆ ಎಂದು ನಿಯೋಗ ವಿವರಿಸಿತು. ಈ ಕುರಿತು ಅನೇಕ ಬಾರಿ ಕೇಂದ್ರ ಸಚಿವರು, ಸಂಸದರಿಗೆ ಮನವಿ ಮಾಡಲಾಗಿದ್ದು, ಕೇವಲ ಭರವಸೆ ಮಾತ್ರ ನೀಡಲಾಗುತ್ತಿದೆ. ವೇದಿಕೆಯು
ಕಳೆದ ನಾಲ್ಕು ವರ್ಷದಿಂದ ಸತತ ಪ್ರಯತ್ನ ಮಾಡುತ್ತಿದೆ ಎಂದು ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ಮನವಿ ಮಾಡಿದರು.
ಈರೇಶ ಯಲ್ಲೂರ ಸಿಂಧನೂರ, ಸಂಗಣ್ಣ ಈಜೇರಿ, ವೀರಣ್ಣ ಭಂಡಾರಿ, ಮಹೇಶ್ವರ ಸ್ವಾಮಿ ಬಳ್ಳಾರಿ, ಬಸವರಾಜ
ರಾಜಾಪುರ, ವಿಜಯಕುಮಾರ ಬೀದರ, ನವೀನ ಪಾಟೀಲ ಹರಪನಳ್ಳಿ, ದಾಲರೆಡ್ಡಿ ಬೀದರ, ಸೂರ್ಯಕಾಂತ
ಜೀವಣಗಿ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!