ತೃಕ್ಕನ್ನಾಡ್‌:ಆಟಿ ಆಮವಾಸ್ಯೆ ಸಂಭ್ರಮ,ಪಿತೃತರ್ಪಣ 


Team Udayavani, Aug 12, 2018, 6:00 AM IST

11ksde11e.jpg

ಕಾಸರಗೋಡು: ಆಟಿ ಅಮವಾಸ್ಯೆ ಪ್ರಯುಕ್ತ ಶನಿವಾರ ಕೇರಳ ರಾಜ್ಯದಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ಅಗಲಿದ ನಿತ್ಯ ಆತ್ಮಗಳಿಗೆ ಮೋಕ್ಷಕ್ಕಾಗಿ ಪಿತೃ ತರ್ಪಣೆ ನಡೆಯಿತು. ತೃಕ್ಕನ್ನಾಡಿನಲ್ಲಿ ನಡೆದ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಕಾಸರಗೋಡು, ಅವಿಭಜಿತ ದ.ಕ. ಜಿಲ್ಲೆಗಳ ಸಹಿತ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದರು. 
  
ದಕ್ಷಿಣದ ಕಾಶಿ ಎಂದೇ ಪ್ರಖ್ಯಾತವಾಗಿರುವ ಕಾಸರಗೋಡು ಜಿಲ್ಲೆಯ ಬೇಕಲದ ತೃಕ್ಕನ್ನಾಡ್‌ ಸಮುದ್ರ ಕಿನಾರೆಯಲ್ಲಿ ಆಟಿ ಅಮವಾಸ್ಯೆಯಾದ (ಕರ್ಕಿಡಕಂ)ಆ.11 ರಂದು ಪಿತೃ ತರ್ಪಣ ನಡೆಯಿತು. ಇತಿಹಾಸ ಪ್ರಸಿದ್ಧ ತೃಕ್ಕನ್ನಾಡ್‌ ತ್ರ್ಯಂಬಕೇಶ್ವರ ದೇವಸ್ಥಾನ ಪಿತೃ ತರ್ಪಣೆಗೆ ಖ್ಯಾತಿಯನ್ನು ಪಡೆದಿದೆ. ಇದು ದಕ್ಷಿಣದ ಕಾಶಿ ಎಂದೂ ಗುರುತಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆಟಿ ಅಮವಾಸ್ಯೆಯಂದು ಸಾವಿರಾರು ಮಂದಿ ಅಗಲಿಹೋದ ಹಿರಿಯರಿಗೆ ಮೋಕ್ಷ ಲಭಿಸಲು ಪಿತೃ ತರ್ಪಣ ನಡೆಯಿತು.

ವರ್ಷದಿಂದ ವರ್ಷಕ್ಕೆ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಭಕ್ತರ ಸಂಖ್ಯೆಯ ಹೆಚ್ಚಳವನ್ನು ಪರಿಗಣಿಸಿ ಅವರಿಗೆ ಸಕಲ ಸೌಲಭ್ಯ ಹಾಗೂ ರಕ್ಷಣೆ ನೀಡುವುದಕ್ಕೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿತ್ತು. 
 
ಧಾರಾಕಾರ ಮಳೆ, ಕಡಲಬ್ಬರದ ಹಿನ್ನೆಲೆಯಲ್ಲಿ ಸಮುದ್ರ ಸ್ನಾನ ನಡೆಸುವ ವರಿಗೆ ಪೊಲೀಸರು ನಿಯಂತ್ರಣ ಏರ್ಪಡಿಸಿ ದ್ದರು. ಆದರೂ ಪಿತೃ ತರ್ಪಣಕ್ಕೆ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಪಿತೃ ತರ್ಪಣೆಯ ಅಂಗವಾಗಿ ಸಮುದ್ರ ಸ್ನಾನ ಮಾಡಬೇಕಾಗಿದ್ದು, ಇಂತಹ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕ ದಂತೆ ಲೈಪ್‌ ಜಾಕೆಟ್‌ ಮೊದಲಾದ ಸೌಕರ್ಯ ಗಳನ್ನೊಳಗೊಂಡ ಕೋಸ್ಟ್‌ ಗಾರ್ಡ್‌  ನೇತೃತ್ವದಲ್ಲಿ ಕೋಸ್ಟಲ್‌ ಪೊಲೀಸ್‌ ಕರ್ತವ್ಯ ನಿರ್ವಹಿಸಿದರು. ಸ್ಥಳೀಯ ಪೊಲೀಸರು ಮತ್ತು ಮಹಿಳಾ ಪೊಲೀಸರು ಸಹಕರಿಸಿದರು. ದೇವಸ್ಥಾನ ಪರಿಸರ, ಕೆರೆ, ರಾಜ್ಯ ಹೆದ್ದಾರಿಯಲ್ಲಿ ಮಹಿಳಾ ಪೊಲೀಸರು ಕರ್ತವ್ಯ ಪಾಲಿಸಿದರು. 
 
ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ದೇವಸ್ಥಾನ ಉತ್ಸವ ಸಮಿತಿ ಕಾರ್ಯಕರ್ತರು, ಸತ್ಯಸಾಯಿ ಸೇವಾ ಸಮಿತಿ ಕಾರ್ಯಕರ್ತರು, ದೇವಸ್ಥಾನದ ಭಜನ  ಸಮಿತಿ, ದೇವಸ್ಥಾನದ ಮುಖ್ಯ ಸಮಿತಿಯ ಕಾರ್ಯಕರ್ತರು ಮೊದಲಾದವರು ಕಾರ್ಯಕ್ರಮಕ್ಕೆ ಕಾರ್ಯಕರ್ತರಾಗಿ ಸಹಕರಿಸಿದರು.  

ದೇವಸ್ಥಾನದಲ್ಲಿ ಮುಂಜಾನೆ ತಿಲಾ ಹವನ, ಪ್ರಾರ್ಥನೆಯ ಬಳಿಕ ಪಿತೃ ತರ್ಪಣ ಕಾರ್ಯಕ್ರಮ ಆರಂಭಗೊಂಡಿತು.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಪೊಲೀಸರು, ಕೋಸ್ಟ್‌ಗಾರ್ಡ್‌, ಅಗ್ರಿಶಾಮಕ ದಳ ಸಮುದ್ರ ತೀರದಲ್ಲಿ ಮುಂಜಾಗ್ರತೆ ವಹಿಸಿದ್ದರು.    

50,000ಕ್ಕೂ ಮಿಕ್ಕಿ ಭಕ್ತರು
ಸುಮಾರು 10,000 ಕ್ಕೂ ಅಧಿಕ ಮಂದಿ ಪಿತೃ ತರ್ಪಣ ಅರ್ಪಿಸಿದರು. 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು. ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು »ಕ್ತರ  ಸೌಕರ್ಯಕ್ಕಾಗಿ ರಶೀದಿಯನ್ನು ಮುಂಗಡವಾಗಿ ನೀಡುವ ವ್ಯವಸ್ಥೆಗೊಳಿಸಿದ್ದರಿಂದ ಸರತಿಯಲ್ಲಿ ನಿಲ್ಲುವವರಿಗೆ ಸುಲಭವಾಯಿತು. ತ್ರ್ಯಂಬಕೇಶ್ವರ  ದೇವಸ್ಥಾನದ ಮುಖ್ಯ ಅರ್ಚಕ ನವೀನ್‌ಚಂದ್ರ ಕಾಯರ್ತಾಯ ಅವರ ನೇತೃತ್ವದಲ್ಲಿ ಬಲಿತರ್ಪಣ ನಡೆಯಿತು.

ಪ್ರತ್ಯೇಕ ಕೌಂಟರ್‌ 
ಪಿತೃತರ್ಪಣಕ್ಕೆ ಸಾಕಷ್ಟು ಕೌಂಟರ್‌ಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಪೌರೋಹಿತ್ಯ ಕಾರ್ಯದಲ್ಲಿ ಸಹಕರಿಸಲು 20 ಕ್ಕೂ ಹೆಚ್ಚು ಮಂದಿ ಪುರೋಹಿತರನ್ನು ನೇಮಿಸಲಾಗಿತ್ತು. ವೃದ್ಧರಿಗಾಗಿ ಪ್ರತ್ಯೇಕ ಕೌಂಟರ್‌ ತೆರೆಯಲಾಗಿತ್ತು. ಅಕ್ಕಿ, ಹೂ ವಿತರಣೆಗಾಗಿ 20 ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗಿತ್ತು.  ದೇವಸ್ಥಾನ ನಡೆಯ ‌ ನೂಕು ನುಗ್ಗಲು ಕಡಿಮೆಗೊಳಿಸಲು  ತೀರ್ಥ ಪ್ರಸಾದವನ್ನು ನಟರಾಜ ಮಂಟಪದಲ್ಲಿ ನೀಡಲಾಯಿತು. 

ಚಿತ್ರ : ನಟೇಶ್‌ ಪಳ್ಳಿಕೆರೆ 

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.