ದ್ಯಾವಮ್ಮದೇವಿ ಜಾತ್ರಾ ಮಹೋತ್ಸವ
Team Udayavani, Aug 13, 2018, 12:55 PM IST
ಸಿಂದಗಿ: ಸಕಾಲದಲ್ಲಿ ಮಳೆ ಬೆಳೆ ಬರಲಿ ಎಂದು ತಾಲೂಕಿನ ಮೋರಟಗಿ ಗ್ರಾಮದಲ್ಲಿ ಗ್ರಾಮದೇವತೆ ದ್ಯಾವಮ್ಮ ದೇವಿ ಜಾತ್ರಾ ಮಹೋತ್ಸವ ನಾಗರ ಅಮಾವಾಸ್ಯೆ ದಿನದಂದು ಸಕಲ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಜರುಗಿತು. ದ್ಯಾವಮ್ಮದೇವಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಭಕ್ತಾದಿಗಳು ಪೂಜೆ ಸಲ್ಲಿಸುವ ಮೂಲಕ ಸಕಾಲಕ್ಕೆ ಮಳೆ ಬೆಳೆ ಬರಲಿ ಎಂದು ದೇವಿ ಹತ್ತಿರ ಅರಿಕೆ ಮಾಡಿಕೊಂಡರು.
ಎತ್ತಿನಗಾಡಿಯಲ್ಲಿ ದ್ಯಾವಮ್ಮದೇವಿ ಉತ್ಸವ ಮೂರ್ತಿಯನ್ನು ಮೆರೆಸಿದರು. ರೈತರು, ಮಹಿಳೆಯರು ಎತ್ತಿನ ಗಾಡಿ ಎಳೆದರು. ದೇವಿಯ ಉತ್ಸವ ಮೆರವಣಿಗೆಯಲ್ಲಿ ಪೋತರಾಜರು, ಡೊಳ್ಳು ಕಲಾ ತಂಡಗಳು, ಬಾಜಾ ಭಜಂತ್ರಿ ಕಲಾ ತಂಡಗಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ಮಾಡಿದರು.
ಮೆರವಣಿಗೆ ಅಗಸಿ ಮಾರ್ಗವಾಗಿ ಬಜಾರದಲ್ಲಿನ ನಡುಲಕ್ಷ್ಮೀ ದೇವಸ್ಥಾನ ತಲುಪಿತು. ನಂತರ ಅಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ರವಿವಾರ ಬೆಳಗ್ಗೆ ಬಜಾರದಿಂದ ಸಿದ್ದರಾಮೇಶ್ವರ ದೇವಸ್ಥಾನದ ಮಾರ್ಗವಾಗಿ ಮೂಲಸ್ಥಳ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು.
ಮಲ್ಲಣ್ಣ ಕುಂಬಾರ, ಹಳ್ಳೆಪ್ಪ ಕೆಂಬಾವಿ, ಮುದಕಯ್ಯ ಸಂಗಯ್ಯನಗುಡಿ, ಶರಣು ಅರಳಗುಂಡಗಿ, ಮಿಟ್ಟು ಜಾಲಿಗಿಡ,
ಮಿರಾಸಾಬ ಶಿರಶ್ಯಾಡ, ನಿಂಗಣ್ಣ ಖಾನಾಪುರ, ಸಿದ್ದು ಜಾಡರ್, ಶರಣು ಅನಬಷ್ಠಿ, ನಿಂಗು ದೇಸಾಯಿ, ಅಲ್ಲಾಬಕ್ಷ ಬಾಗವಾನ, ರಸೂಲ ಬಾಸಗಿ, ಬುಡ್ಡಾ ಶಿರ್ಶ್ಯಾಡ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ