ಯೋಧನ ಹತ್ಯೆಗೆ ಪ್ರತೀಕಾರ;ಇಬ್ಬರು ಪಾಕ್ ಸೈನಿಕರನ್ನು ಹತ್ಯೆಗೈದ ಭಾರತ
Team Udayavani, Aug 14, 2018, 11:26 AM IST
ಶ್ರೀನಗರ : ಗಡಿ ನಿಯಂತ್ರಣ ರೇಖೆಯಲ್ಲಿ ಸೋಮವಾರ ಯೋಧನನ್ನು ಹತ್ಯೆಗೈದಿದ್ದ ಪಾಕಿಸ್ಥಾನ ಸೈನಿಕರಿಗೆ ಭಾರತೀಯ ಸೇನೆ ದಿಟ್ಟ ತಿರುಗೇಟು ನೀಡಿದ್ದು ಮಂಗಳವಾರ ಇಬ್ಬರು ಪಾಕ್ ಸೈನಿಕರನ್ನು ಹತ್ಯೆಗೈದಿದೆ.
ಉತ್ತರ ಕಾಶ್ಮೀರದ ತಾಂಗ್ಧಾರ್ ಸೆಕ್ಟರ್ನಲ್ಲಿ ಪಾಕ್ ಸೈನಿಕರು ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸಿ ಭಾರತೀಯ ಯೋಧನನ್ನು ಹತ್ಯೆಗೈದಿದ್ದರು.
ರಕ್ಷಣಾ ಇಲಾಖೆಯ ವಕ್ತಾರ ರಾಜೇಶ್ ಕಾಲಿಯಾ ಅವರು ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಪಾಕ್ ಯೋಧರನ್ನು ಹತ್ಯೆಗೈದಿರುವುದಾಗಿ ಅವರು ತಿಳಿಸಿದ್ದಾರೆ.
ಉಭಯ ಸೇನಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಪ್ರಯೋಗ ನಡೆದಿದೆ ಎಂದು ವರದಿಯಾಗಿದೆ.