ನೂಪುರ್ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ
Team Udayavani, May 6, 2024, 1:47 AM IST
ಸೂರತ್: ಪೈಗಂಬರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಸೇರಿ ಹಲವು ಬಿಜೆಪಿ ನಾಯಕರ ಕೊಲೆಗೆ ಸಂಚು ರೂಪಿಸಿದ್ದ ಆರೋಪದಲ್ಲಿ ಮೌಲ್ವಿಯೊಬ್ಬರನ್ನು ಗುಜರಾತ್ನ ಸೂರತ್ನಲ್ಲಿ ಬಂಧಿಸಲಾಗಿದೆ. ಸೋಹಿಲ್ ಅಬೂಬಕರ್ ತೈಮೂಲ್ ಬಂಧಿತ ಮೌಲ್ವಿ. ಪಾಕಿಸ್ಥಾನ, ನೇಪಾಲದ ಹ್ಯಾಂಡ್ಲರ್ಗಳೊಂದಿಗೆ ಸಂಪರ್ಕದಲ್ಲಿರುವ ಈತ, ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್, ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆದರಿಕೆ ಹಾಕಿಸಿದ್ದರು. ಹಿಂದೂ ಸನಾತನ ಸಂಘದ ಅಧ್ಯಕ್ಷ ಉಪದೇಶ್ ರಾಣಾರನ್ನು ಕೊಲ್ಲಲು 1 ಕೋಟಿ ರೂ. ಸುಪಾರಿ ಕೊಡುವಂತೆ ಮತ್ತು ಪಾಕ್ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಬಗ್ಗೆಯೂ ಹ್ಯಾಂಡ್ಲರ್ಗಳೊಂದಿಗೆ ಚರ್ಚಿಸಿರುವುದು ಮೌಲ್ವಿಯ ವಾಟ್ಸ್ಆ್ಯಪ್ ಚಾಟ್ಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.