Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ದೇಶದ 25 ವರ್ಷಗಳ ಹಾದಿ ಸುಗಮ ಯತ್ನ; ವಿಕಸಿತ ಭಾರತದಲ್ಲಿ ಭವಿಷ್ಯ, ಜೀವನ ಸೇರ್ಪಡೆ

Team Udayavani, May 6, 2024, 1:09 AM IST

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಲಕ್ನೋ: “ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಅವರಿಗಾಗಲೀ, ನನಗಾಗಲೀ ಮಕ್ಕಳಿಲ್ಲ. ನಾವು ಅವಿರತವಾಗಿ ಶ್ರಮಿಸುತ್ತಿರುವುದೆಲ್ಲವೂ ನಿಮ್ಮ ಮಕ್ಕಳಿಗಾಗಿ. ಆದರೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್‌ ಅಧಿಕಾರ ಬಯಸುತ್ತಿರುವುದು ಅವರ ಮಕ್ಕಳ ಉದ್ಧಾರಕ್ಕಾಗಿ ಮಾತ್ರ’.

– ಹೀಗೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ತವರೂರು ಉತ್ತರ ಪ್ರದೇಶದ ಇಟಾವಾದಲ್ಲೇ ಪ್ರಧಾನಿ ಮೋದಿ ಕಾಂಗ್ರೆಸ್‌ ಮತ್ತು ಎಸ್‌ಪಿ ವಿರುದ್ಧ ಈ ರೀತಿ ವಾಗ್ಧಾಳಿ ನಡೆಸಿದ್ದಾರೆ.

ಇಟವಾದಲ್ಲಿ ರವಿವಾರ ನಡೆದ ಬಿಜೆಪಿ ಚುನಾವಣೆ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡಿರುವ ಪ್ರಧಾನಿ, “10 ವರ್ಷಗಳ ಸುದೀರ್ಘ‌ ಸೇವೆಯ ಅನಂತರ ಮತ್ತೆ ಈಗ ನಿಮ್ಮ ಆಶೀರ್ವಾದ ಬಯಸುತ್ತಿದ್ದೇನೆ. ನೀವು ನನ್ನ ಶ್ರಮ ಮತ್ತು ಪ್ರಾಮಾಣಿಕತೆ ಎರಡನ್ನೂ ನೋಡಿದ್ದೀರಿ. ನಾನು ಕೇವಲ ಮುಂದಿನ 5 ವರ್ಷಗಳ ಬಗ್ಗೆ ಚಿಂತಿಸಿ ನಿಮ್ಮ ಮುಂದೆ ನಿಂತಿಲ್ಲ. ಮುಂದಿನ 25 ವರ್ಷಗಳ ಹಾದಿಯನ್ನು ಸುಗಮಗೊಳಿಸಲು, ಭವಿಷ್ಯದ ಸಾವಿರ ವರ್ಷಗಳ ವರೆಗೆ ಭಾರತದ ಶಕ್ತಿಯನ್ನು ನೆಲೆಗೊಳಿಸಲು ಬುನಾದಿಯನ್ನು ಹಾಕಿದ್ದೇನೆ. ಏಕೆ ಗೊತ್ತೇ? ಮೋದಿ ಇರಲಿ, ಇಲ್ಲದಿರಲಿ; ಈ ದೇಶ ಇರಬೇಕು ಎಂಬುದೇ ನನ್ನ ಧ್ಯೇಯ ಎಂದಿದ್ದಾರೆ.

ನಿಮಗಾಗಿ ಅಭಿವೃದ್ಧಿ ಕಾರ್ಯ
ಎಸ್‌ಪಿ ಮತ್ತು ಕಾಂಗ್ರೆಸ್‌ ಏನು ಮಾಡಿವೆ ಎಂದು ಮೋದಿ ಪ್ರಶ್ನಿಸಿದರು. ಅವರು ಚುನಾ ವಣೆಗೆ ಸ್ಪರ್ಧಿಸುವುದು ಅವರಿಗಾಗಿ ಮತ್ತು ಅವರ ಮಕ್ಕಳಿಗಾಗಿ ಮಾತ್ರ. ಆದರೆ ನನಗೆ ಯಾರೂ ಇಲ್ಲ, ಸಿಎಂ ಯೋಗಿಗೂ ಇಲ್ಲ. ಆದರೂ ನಾವು ದುಡಿ ಯುತ್ತಿರುವುದು ನಿಮ್ಮ ಮಕ್ಕಳಿಗಾಗಿ. ವಿಕಸಿತ ಭಾರತ ಅನ್ನುವುದು ಕೇವಲ ಪದಗಳಲ್ಲ, ಈ ಪದಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯ, ಸಮೃದ್ಧ ಜೀವನವೂ ಸೇರಿದೆ ಎಂದಿದ್ದಾರೆ.

ವಂಶಾಡಳಿತದ
ಪದ್ಧತಿ ಮುರಿದೆ
ರಾಜನ ಮಗ ರಾಜನೇ ಆಗಬೇಕು ಎಂಬ ಪದ್ಧತಿಯನ್ನೇ ನಾನು ಮುರಿದು ಒಬ್ಬ ಚಾಯ್‌ವಾಲಾ ಮುಖ್ಯಮಂತ್ರಿ ಸಿಎಂ ಆಗಬಹುದು, ಪ್ರಧಾನಿ ಆಗಬಹುದು ಎಂಬುದನ್ನು ನಿರೂಪಿಸಿದ್ದೇನೆ. ವಂಶಾಡಳಿತದಲ್ಲಿ ಕಾರು, ಬಂಗಲೆಗಳು ಅಧಿಕಾರ, ರಾಜಕೀಯ ಪರಂಪರೆಯ ಕುರುಹು ಆಗಿದೆ. ಆದರೆ ಮೋದಿ ಪರಂಪರೆ ಬಡವರಿಗೆ ಪಕ್ಕಾ ಮನೆ, ಅಕ್ಕ-ತಂಗಿಯರಿಗೆ ಶೌಚಾಲಯ, ದಲಿತರು ಮತ್ತು ಹಿಂದುಳಿದವರಿಗೆ ವಿದ್ಯುತ್‌, ಗ್ಯಾಸ್‌, ನೀರಿನ ಸೌಲಭ್ಯ, ಉಚಿತ ಪಡಿತರ, ಶಿಕ್ಷಣ ನೀತಿ, ಆರೋಗ್ಯ ಸೌಲಭ್ಯ ರೂಪಿಸಿಕೊಡುವುದಾಗಿದೆ. ಮೋದಿಯ ಪರಂಪರೆ ಎಲ್ಲರಿಗಾಗಿ, ಎಲ್ಲರದ್ದೂ ಆಗಿರುವ ಪರಂಪರೆ ಎಂದಿದ್ದಾರೆ.

ಕಾರ್ಯಕರ್ತರಿಗೆ
ಮಣೆ ಹಾಕಿದ್ದೇವೆ: ಮೋದಿ
ಸಮಾಜವಾದಿ ಪಕ್ಷವು ಕುಟುಂಬ ರಾಜ ಕಾರಣಕ್ಕೆ ಮಣೆ ಹಾಕಿದೆ. ಇಡೀ ರಾಜ್ಯದಲ್ಲಿ ಇದು ವರೆಗೆ ತಮ್ಮ ಕುಟುಂಬದ ಹೊರತಾಗಿ ಯಾದವ ಸಮುದಾಯದಿಂದ ಯಾವೊಬ್ಬ ಅಭ್ಯರ್ಥಿಯನ್ನೂ ಪಕ್ಷ ಕಣಕ್ಕಿಳಿಸಿಲ್ಲ. ಆದರೆ ಬಿಜೆಪಿಯಲ್ಲಿ ಕಾರ್ಯ ಕರ್ತನೂ ಕೂಡ ದೊಡ್ಡ ಮಟ್ಟವನ್ನೂ ತಲುಪಬಹು ದಾಗಿದೆ ಎಂದು ಪಿಎಂ ಚಾಟಿ ಬೀಸಿದ್ದಾರೆ.

ಎಸ್‌ಪಿಯವರು ನಿಜವಾಗಲೂ ಯದುವಂಶೀಯರೇ?
ಕಳೆದ ಬಾರಿ ಚುನಾವಣೆ ಸಂದರ್ಭ ಕಾಂಗ್ರೆಸ್‌ನ ರಾಜಕುಮಾರ ದೇವಾಲಯ ಸುತ್ತಿ, ಪವಿತ್ರ ದಾರ ಗಳನ್ನು ಕೈಗೆ ಸುತ್ತಿಕೊಂಡಿದ್ದರು. ಆದರೆ ಈ ಬಾರಿ ಆ ಗಿಮಿಕ್‌ ನಿಂತಿದೆ. ದೇಶದ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ದೇಶವೇ ಸಂತಸ ಪಟ್ಟಿತ್ತು. ಆದರೆ ಅವರು ಆಹ್ವಾನ ನಿರಾಕರಿಸಿದರು. ದ್ವಾರಕೆಯ ಸಮುದ್ರಕ್ಕೆ ತೆರಳಿ ಕೃಷ್ಣನಿಗೆ ನಾನು ನಮಿಸಿದ್ದೂ ರಾಜಕುಮಾರನಿಗೆ ಸಮಸ್ಯೆಯಾಯಿತು. ಅಂಥವ ರೊಂದಿಗೆ ಎಸ್‌ಪಿ ಸ್ನೇಹ ಬೆಳೆಸಿದೆ. ಕೃಷ್ಣನನ್ನು ಪೂಜಿಸಿದ್ದಕ್ಕೂ ಕೊಂಕು ನುಡಿಯುವವರನ್ನು ಸ್ನೇಹಿತರು ಎನ್ನುತ್ತಿರುವ ಎಸ್‌ಪಿಯವರು ನಿಜ ವಾಗಿಯೂ ಯದುವಂಶೀಯರೇ ಎಂದು ನಾನು ಕೇಳಬೇಕಿದೆ ಎಂದು ಮೋದಿ ಆಕ್ಷೇಪಿಸಿದ್ದಾರೆ.

ಟಾಪ್ ನ್ಯೂಸ್

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

US ಕರಡಿ ಮಾಂಸ ತಿಂದ ಕುಟುಂಬ ಸದಸ್ಯರ ಮೆದುಳಿನಲ್ಲಿ ಹುಳ!

13

Tragic: ಗುಜರಾತ್‌ ಗೇಮಿಂಗ್‌ ಜೋನ್‌ ನಲ್ಲಿ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಜೀವ ದಹನ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

11

ಎಸ್‌ಐಟಿ ಉಲ್ಲೇಖೀಸಿರುವ ಕಾನೂನುಬದ್ಧ ನಿಯಮಗಳು ಸಿಎಂ ಗಮನಕ್ಕೆ ಬಂದಿಲ್ಲವೇ?‌: ಎಚ್‌ಡಿಕೆ

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು

16 ಹಾಕಿ ಆಟಗಾರರ ಸಾವಿಗೆ ಕಾರಣನಾಗಿದ್ದ ಭಾರತೀಯನ ಗಡಿಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Tragic: ಗುಜರಾತ್‌ ಗೇಮಿಂಗ್‌ ಜೋನ್‌ ನಲ್ಲಿ ಬೆಂಕಿ ಅವಘಡ: ಕನಿಷ್ಠ 20 ಮಂದಿ ಸಜೀವ ದಹನ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

Lok Sabha Elections: ಬಿಜೆಪಿಗೆ 240-270 ಕ್ಷೇತ್ರಗಳಲ್ಲಿ ಜಯ: ಯೋಗೇಂದ್ರ ಯಾದವ್‌

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Pune Porsche crash case ಚಾಲಕನಿಗೆ ಬೆದರಿಸಿ, ಕೂಡಿ ಹಾಕಿದ್ದ ಆರೋಪಿಯ ಅಜ್ಜ ಅರೆಸ್ಟ್‌!

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

Cannes Award 2024; ಮೊದಲ ಬಾರಿ ಭಾರತದ ನಟಿಗೆ ಪ್ರತಿಷ್ಠಿತ ಕ್ಯಾನಸ್‌ ಪ್ರಶಸ್ತಿ ಗೌರವ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

Belthangady: ಬಂಗೇರ ಕುಟುಂಬಸ್ಥರಿಂದ ಸಿಎಂ, ಡಿಸಿಎಂ ಭೇಟಿ – ಕೃತಜ್ಞತೆ ಸಲ್ಲಿಕೆ  

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

Elon Musk ನಾನೊಬ್ಬ ಏಲಿಯನ್‌ ಶೀಘ್ರವೇ ಸಾಕ್ಷಿ ನೀಡುತ್ತೇನೆ

19

Sullia: ವಾಹನಗಳಿಗೆ ಕಾರು ಢಿಕ್ಕಿ; ಹಾನಿ

17

Belthangady: ಅಪಘಾತದ ಗಾಯಾಳು ಯುವಕ ಸಾವು

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Manipal: ಪಾರ್ಟ್‌ಟೈಮ್‌ ಜಾಬ್‌ ಲಿಂಕ್‌ 10.83 ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.