RCB; ಲಯ ಇಲ್ಲದೆ ಒದ್ದಾಡುತ್ತಿದ್ದಾಗ ಕಾರ್ತಿಕ್ ಸಲಹೆಯಿಂದ ನೆರವು: ವಿರಾಟ್ ಕೊಹ್ಲಿ
Team Udayavani, May 25, 2024, 1:21 PM IST
ಬೆಂಗಳೂರು: ಐಪಿಎಲ್ ನಿವೃತ್ತಿ ಪಡೆದುಕೊಂಡಿರುವ ದಿನೇಶ್ ಕಾರ್ತಿಕ್ರನ್ನು ಹೊಗಳಿರುವ ಕೊಹ್ಲಿ, “2022ರಲ್ಲಿ ನಾನು ಲಯ ಕಳೆದುಕೊಂಡು ಒದ್ದಾಡುತ್ತಿದ್ದಾಗ, ಕಾರ್ತಿಕ್ ನೀಡಿದ ಸಲಹೆ ಬಹಳ ನೆರವಾಯಿತು’ ಎಂದಿದ್ದಾರೆ.
“ಮೈದಾನದ ಹೊರಗೆ ನಾನು ಕಾರ್ತಿಕ್ ಜತೆಗೆ ಸಾಕಷ್ಟು ಗಮನಾರ್ಹ ಸಂಭಾಷಣೆಗಳನ್ನು ನಡೆಸಿದ್ದೇನೆ. ಅವರು ತುಂಬಾ ತಿಳಿವಳಿಕೆ ಉಳ್ಳವರಾಗಿದ್ದಾರೆ’ ಎಂದು ಆರ್ ಸಿಬಿ ಮಾಡಿರುವ ಕಾರ್ತಿಕ್ ಗುಣಗಾನ ವಿಡಿಯೋದಲ್ಲಿ ಕೊಹ್ಲಿ ಮಾತನಾಡಿದ್ದಾರೆ.
“ಕಾರ್ತಿಕ್ ಜತೆಗಿನ ಎಲ್ಲಾ ಮಾತುಕತೆಗಳನ್ನು ನಾನು ಸಾಕಷ್ಟು ಆನಂದಿಸಿದ್ದೇನೆ. 2022ರಲ್ಲಿ ನಾನು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಈ ವೇಳೆ ನನ್ನ ಬಗ್ಗೆ ನಾನೇ ಅರಿಯಲಾಗದ ವಿಷಯಗಳನ್ನು ಕಾರ್ತಿಕ್ ಮನವರಿಕೆ ಮಾಡಿಕೊಟ್ಟರು. ಇದು ನನಗೆ ಸಹಾಯ ಮಾಡಿತು’ ಎಂದು ಕೊಹ್ಲಿ ಹೇಳಿದ್ದಾರೆ. ಅಲ್ಲದೇ ಕಾರ್ತಿಕ್ ಓರ್ವ ಪ್ರತಿಭಾನ್ವಿತ ಮತ್ತು ಪ್ರಾಮಾ ಣಿಕ ಆಟಗಾರನಾಗಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಕಣ್ಣೀರಾದ ಪಳ್ಳಿಕಲ್
ಕಾರ್ತಿಕ್ ಗುಣಗಾನ ವಿಡಿಯೋದಲ್ಲಿ ದೀಪಿಕಾ ಪಳ್ಳಿಕಲ್ಕಾರ್ತಿಕ್ ಬಗ್ಗೆ ಮಾತನಾಡುವಾಗ ಗದ್ಗದಿತರಾಗಿದ್ದಾರೆ. ಕಾರ್ತಿಕ್ ಅವರ ಕ್ರಿಕೆಟ್ ಬದುಕಿನ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿರುವ ದೀಪಿಕಾ, ಈ ವೇಳೆ ಕಣ್ಣೀರು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T 20 WC; ಸೂಪರ್-8 ಗಡಿಯಲ್ಲಿ ಬಾಂಗ್ಲಾ: ನೇಪಾಲ ಕೊನೆಯ ಎದುರಾಳಿ
T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ
ODI ಸ್ಮೃತಿ ಮಂಧನಾ ಅಮೋಘ ಶತಕ; ಮಂಕಾದ ದಕ್ಷಿಣ ಆಫ್ರಿಕಾ
Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್
T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.