Bihar Rally ಮುಸ್ಲಿಮರ ಮುಂದೆ ಇಂಡಿಯಾ ಕೂಟ ಮುಜ್ರಾ ನೃತ್ಯ: ಪ್ರಧಾನಿ ಮೋದಿ
ಆದಷ್ಟು ಬೇಗ ಗುಣಮುಖರಾಗಿ: ಮೋದಿ ಪ್ರತಿಪಕ್ಷಗಳ ಟಾಂಗ್
Team Udayavani, May 25, 2024, 8:45 PM IST
ದೇಹ್ರಿ/ಬಿಕ್ರಮ್: ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಗೆ ಕನ್ನ ಹಾಕುತ್ತಿರುವ ಇಂಡಿಯಾ ಒಕ್ಕೂಟವು, ಮುಸ್ಲಿಮರ ಮತಗಳಿಗಾಗಿ ಅವರ ಮುಂದೆ ಮುಜ್ರಾ ನತೃ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಹಾರದ ಕಾರಾಕಾಟ ಮತ್ತು ಪಾಟಲಿಪುತ್ರ ಲೋಕಸಭೆ ಕ್ಷೇತ್ರಗಳ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಬಿಹಾರವು ಸಾಮಾಜಿಕ ನ್ಯಾಯದ ಹೋರಾಟಕ್ಕೆ ದಿಕ್ಕು ತೋರಿದ ನೆಲ. ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ಕುತಂತ್ರವನ್ನು ನಾನು ತಡೆಯುತ್ತೇನೆ. ಪ್ರತಿಪಕ್ಷಗಳ ನಾಯಕರು ಗುಲಾಮರಾಗಿ, ಮುಸ್ಲಿಮರ ಮುಂದೆ ಮುಜ್ರಾ ನೃತ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪಂಜಾಬ್, ತೆಲಂಗಾಣ, ತಮಿಳುನಾಡಿನಲ್ಲಿ ಬಿಹಾರದ ವಲಸಿಗರನ್ನು ಅವಮಾನ ಮಾಡಿದರೂ ಪ್ರತಿಪಕ್ಷಗಳ ನಾಯಕರು ಅದನ್ನು ಪ್ರತಿಭಟಿಸುವ ಧೈರ್ಯ ತೋರುವುದಿಲ್ಲ ಎಂದೂ ಆರೋಪಿಸಿದರು.
ಮೋದಿಯವರ ಮುಜ್ರಾ ಹೇಳಿಕೆಗೆ ಕಾಂಗ್ರೆಸ್, ಆರ್ಜೆಡಿ, ಎನ್ಸಿಪಿ(ಶರದ್ಚಂದ್ರ ಪವಾರ್), ಟಿಎಂಸಿ, ಶಿವಸೇನೆ ಉದ್ಧವ್ ಬಣ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರತಿಕ್ರಿಯಿಸಿ, “ಮೋದಿಯವರ ಬಾಯಿಯಲ್ಲಿ ಮುಜ್ರಾ ಪದ ಹೊರಬಿದ್ದಿದೆ. ಮೋದಿಯವರೇ ಏನಿದು? ಬಿಸಿಲಲ್ಲಿ ಪ್ರಚಾರ ಮಾಡಿದ್ದು ನಿಮ್ಮ ಮೆದುಳಿನ ಮೇಲೆ ಭಾರೀ ಪರಿಣಾಮ ಬೀರಿದಂತಿದೆ. ಅಮಿತ್ ಶಾ, ನಡ್ಡಾ ಅವರೇ, ಕೂಡಲೇ ಮೋದಿಯವರಿಗೆ ಸ್ವಲ್ಪ ಚಿಕಿತ್ಸೆ ಕೊಡಿಸಿ’ ಎಂದಿದ್ದಾರೆ.
ಇತಿಹಾಸದಲ್ಲೇ ಯಾವ ಪ್ರಧಾನಿಯೂ ಬಳಸದ ಭಾಷೆಯಿದು: ಪ್ರಿಯಾಂಕಾ
ಪ್ರಧಾನಿ ಮೋದಿಯವರ “ಮುಜ್ರಾ ನೃತ್ಯ’ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, “ಭಾರತದ ಇತಿಹಾಸದಲ್ಲೇ ಯಾವ ಪ್ರಧಾನಮಂತ್ರಿಯೂ ಬಳಸದಂಥ ಕೀಳು ಮಟ್ಟದ ಭಾಷೆಯನ್ನು ಮೋದಿಯವರು ಬಳಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಏನಿದು ಮುಜ್ರಾ ನೃತ್ಯ?
ಮುಜ್ರಾ ಎನ್ನುವುದು ಒಂದು ನೃತ್ಯ ಪ್ರಕಾರ. ಭಾರತದಲ್ಲಿ ಮೊಘಲರ ಆಳ್ವಿಕೆ ಸಮಯದಲ್ಲಿ ಇದು ಪ್ರವರ್ಧಮಾನಕ್ಕೆ ಬಂತು. ಮೊಘಲ್ ರಾಜರ ಆಸ್ಥಾನದಲ್ಲಿ ನವಾಬರ ಮುಂದೆ ಯುವತಿಯರ ಸಮೂಹವು ಈ ನೃತ್ಯ ಮಾಡುತ್ತಾ, ಮನರಂಜನೆ ನೀಡುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ
Jharkhand: ಪೊಲೀಸರ ಎನ್ ಕೌಂಟರ್ ಗೆ ಮಹಿಳೆ ಸೇರಿ ನಾಲ್ವರು ನಕ್ಸಲೀಯರು ಮೃತ್ಯು
Train Mishap: ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಗೂಡ್ಸ್ ರೈಲು, ಹಲವರಿಗೆ ಗಾಯ
VK Sasikala: ರಾಜಕೀಯ ಪ್ರವೇಶಕ್ಕೆ ಸಮಯ ಪಕ್ವವಾಗಿದೆ… ವಿ.ಕೆ. ಶಶಿಕಲಾ ಮಹತ್ವದ ಘೋಷಣೆ
NEET ಬೃಹತ್ ಹಗರಣ: ವಿಪಕ್ಷ ಆಕ್ರೋಶ ತೀವ್ರ
MUST WATCH
ಹೊಸ ಸೇರ್ಪಡೆ
Bidar: ತೈಲ ದರ ಏರಿಕೆ ಖಂಡಿಸಿ ಬೈಕ್- ಕಾರು ಎಳೆದು ಪ್ರತಿಭಟನೆ
Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ
Gundlupete: ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ
Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.