ನಾವೇ ಗೋವುಗಳ ರಕ್ಷಕರು
Team Udayavani, Aug 15, 2018, 10:18 AM IST
ನೈನಿತಾಲ್: “ಉತ್ತರಾಖಂಡ ರಾಜ್ಯ ದಲ್ಲಿ ಗೋವುಗಳ ಕಾನೂನು ಬದ್ಧ ರಕ್ಷಣೆಗಾರರು ನಾವೇ.’ ಹೀಗೆಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ. ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಹೈಕೋರ್ಟೊಂದು ಇಂಥ ತೀರ್ಪು ನೀಡಿದೆ. ಹಂಗಾಮಿ ಮುಖ್ಯ ನ್ಯಾ| ರಾಜೀವ್ ಶರ್ಮಾ ಮತ್ತು
ನ್ಯಾ| ಮನೋಜ್ ಕುಮಾರ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಹರಿದ್ವಾರದಲ್ಲಿ ಗೋಹತ್ಯೆ ಕುರಿತು ಸಲ್ಲಿಸಲಾಗಿದ್ದ ಪಿಐಎಲ್ಗೆ ಸಂಬಂಧಿಸಿ ಈ ತೀರ್ಪು ನೀಡಲಾಗಿದೆ.
ಪ್ರಾಣಿಗಳ ರಕ್ಷಣೆಯ ಮಹತ್ವದ ಬಗ್ಗೆ ಉಪನಿಷತ್, ಅರ್ಥಶಾಸ್ತ್ರ, ಜೈನ, ಬೌದ್ಧ ಧರ್ಮಗಳಲ್ಲಿ ಉಲ್ಲೇಖೀಸಲಾಗಿರುವ ಅಂಶ ಗಳು, ಮಹಾತ್ಮಾ ಗಾಂಧಿ, ದಲೈಲಾಮಾ ಅವರ ಬೋಧನೆಗಳು, ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪುಗಳನ್ನು 41 ಪುಟಗಳ ತೀರ್ಪಿನಲ್ಲಿ ನ್ಯಾಯಪೀಠ ಪ್ರಸ್ತಾಪಿಸಿದೆ. ದನ, ಎತ್ತು, ಕಡಸುಗಳನ್ನು ಹತ್ಯೆ ಮಾಡುವುದನ್ನೂ ತಡೆಯಬೇಕು ಎಂದು ಹೇಳಿದೆ. ಗೋಮಾಂಸ ಅಥವಾ ಅದರ ಉತ್ಪನ್ನದ ಮಾರಾಟಕ್ಕೂ ನಿಷೇಧ ಹೇರಬೇಕು ಎಂದಿದೆ ನ್ಯಾಯಪೀಠ. ತೀರ್ಪು ಪ್ರಕಟವಾದ 3 ವಾರಗಳ ಒಳಗಾಗಿ ಉತ್ತರಾಖಂಡದಲ್ಲಿ ದನಗಳಿಗಾಗಿ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಗೋಹತ್ಯೆ ನಡೆಯದಂತೆ ಗ್ರಾಮೀಣ ಪ್ರದೇಶ ದಲ್ಲಿ 24 ಗಂಟೆಗೆ ಒಂದು ಬಾರಿ ಪೊಲೀಸರು ಗಸ್ತು ತಿರುಗಬೇಕು. 3 ತಿಂಗಳೊಳಗೆ ಗೋ ಶಾಲೆಗಳಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಹೊರಹಾಕಲು ಕ್ರಮ ಕೈಗೊಳ್ಳಬೇಕು. ಡಿವೈಎಸ್ಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಕುಮೌನ್ ಮತ್ತು ಘರ್ವಾಲ್ನಲ್ಲಿ ವಿಶೇಷ ತಂಡ ರಚಿಸಬೇಕು ಎಂದು ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ